ಕನ್ನಡಿಗ KL ರಾಹುಲ್ ಮಾಡಿದ ತ್ಯಾಗಕ್ಕೆ ಫ್ಯಾನ್ಸ್​ಗಳಿಂದ ಮೆಚ್ಚುಗೆ: ಹಾರ್ದಿಕ್​ಗೆ ಟ್ರೋಲ್​! – KL RAHUL SACRIFICE

 

ಕನ್ನಡಿಗ KL ರಾಹುಲ್ ಮಾಡಿದ ತ್ಯಾಗಕ್ಕೆ ಫ್ಯಾನ್ಸ್​ಗಳಿಂದ ಮೆಚ್ಚುಗೆ: ಹಾರ್ದಿಕ್​ಗೆ ಟ್ರೋಲ್​! – KL RAHUL SACRIFICE

ಬಾಂಗ್ಲಾದೇಶ ವಿರುದ್ಧ ನಡೆದ ನಿನ್ನೆಯ ಪಂದ್ಯದಲ್ಲಿ ಕೆಎಲ್​ ರಾಹುಲ್​ ಮಾಡಿರುವ ತ್ಯಾಗಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

KL Rahul and Shubman Gill (IANS)

KL Rahul: ಚಾಂಪಿಯನ್ಸ್​ ಟ್ರೋಫಿ ಭಾಗವಾಗಿ ಬುಧವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿರುವುದು ಗೊತ್ತೆ ಇದೆ.

ಆದರೆ ಈ ಪಂದ್ಯದಲ್ಲಿ ಕೆಎಲ್​ ರಾಹುಲ್​ ಮಾಡಿರುವ ತ್ಯಾಗಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಬಾಂಗ್ಲಾ ನೀಡಿದ್ದ 228 ರನ್​ಗಳ ಗುರಿಯನ್ನು ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್​ ಶರ್ಮಾ (41), ವಿರಾಟ್​ ಕೊಹ್ಲಿ (22), ಶ್ರೇಯಸ್​ ಅಯ್ಯರ್​ (15), ಅಕ್ಷರ್​ ಪಟೇಲ್​ (8) ವಿಕೆಟ್​ ಬೀಳುತ್ತಿದ್ದಂತೆ ಒತ್ತಡ ಹೆಚ್ಚಿದಂತೆ ಕಂಡಿತು.

ಆದರೆ ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದಿದ್ದ ಶುಭಮನ್​ ಗಿಲ್​ (101*) ಮತ್ತು ಕೆಎಲ್​ ರಾಹುಲ್ (41*)​ ಸಮಯೋಚಿತ ಬ್ಯಾಟಿಂಗ್​ ಮಾಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಕೆಎಲ್​ ರಾಹುಲ್​ಗೆ ಅರ್ಧಶತಕ ಮಾಡಿಕೊಳ್ಳುವ ಅವಕಾಶ ಇದ್ದರೂ ಶುಭಮನ್​ ಗಿಲ್​ ಶತಕಕ್ಕಾಗಿ ತ್ಯಾಗ ಮಾಡಿದರು.

ರಾಹುಲ್​ ತ್ಯಾಗ: ಗಿಲ್ 88ರನ್​ ಗಳಿಸಿದ್ದ ವೇಳೆ ರಾಹುಲ್​ 33 ರನ್​ ಸಿಡಿಸಿದ್ದರು. ಈ ವೇಳೆ ತಂಡದ ಗೆಲುವಿಗೆ 19 ರನ್​ ಬೇಕಿದ್ದವು. ಆದರೆ ರಾಹುಲ್​ ತಮ್ಮ ಬ್ಯಾಟಿಂಗ್​ ವೇಗವನ್ನು ಕಡಿಮೆ ಮಾಡಿಕೊಂಡರು. ಈ ವೇಳೆ ಗಿಲ್​ ಬ್ಯಾಟಿಂಗ್​ ವೇಗ ಹೆಚ್ಚಿಸಿಕೊಂಡ ಶತಕ ಬಾರಿಸಿದರು. ಇದರ ಬೆನ್ನಲ್ಲೆ ರಾಹುಲ್​ ವಿರುದ್ಧ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಹಾರ್ದಿಕ್​ಗೆ ಟ್ರೋಲ್​: ನಿನ್ನೆಯ ಪಂದ್ಯದಲ್ಲಿ ರಾಹುಲ್​ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ. ಈ ಪಂದ್ಯದಲ್ಲಿ ರಾಹುಲ್​ ಔಟಾಗಿ ಹಾರ್ದಿಕ್ ಬ್ಯಾಟಿಂಗ್ ಮಾಡಲು ಬಂದಿದ್ದರೆ ಗಿಲ್​ಗೆ ಶತಕ ಮಾಡಲು ಬಿಡುತ್ತಿರಲಿಲ್ಲ ಎಂದು ಕಾಲೆಳೆದಿದ್ದಾರೆ. ಹೀಗೆ ಫ್ಯಾನ್ಸ್​ ಟ್ರೋಲ್​ ಮಾಡುತ್ತಿರುವುದರ ಹಿಂದೆ ಕಾರಣವೂ ಇದೆ.

ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ ಆಗಸ್ಟ್​ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ಟಿ20 ಪಂದ್ಯ ನಡೆದಿತ್ತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 159 ರನ್ ಗಳಿಸಿತು. ಬಳಿಕ ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 17.5 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿತ್ತು.

ಈ ಪಂದ್ಯದಲ್ಲಿ ತಿಲಕ್ ವರ್ಮಾ (49*) ಮತ್ತು ಹಾರ್ದಿಕ್ ಪಾಂಡ್ಯ (20*) ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ತಿಲಕ್ ವರ್ಮಾ ಅರ್ಧಶತಕ ಪೂರ್ಣಗೊಳಿಸಲು ಒಂದು ರನ್​ ಬೇಕಿತ್ತು. ತಂಡದ ಗೆಲುವಿಗೆ 2.1 ಓವರ್​ನಲ್ಲಿ 2 ರನ್​ ಬೇಕಿತ್ತು. ಈ ವೇಳೆ ಪಾಂಡ್ಯ ಸಿಕ್ಸರ್​ ಸಿಡಿಸಿ ಪಂದ್ಯವನ್ನು ಮುಗಿಸಿದ್ದರು. ತಿಲಕ್ ವರ್ಮಾ ಅರ್ಧಶತಕದ ಹೊಸ್ತಿಲಲ್ಲಿರುವಾಗಲೇ ಹಾರ್ದಿಕ್ ಸಿಕ್ಸರ್ ಬಾರಿಸಿ ಪಂದ್ಯ ಮುಗಿಸಿದ್ದ ಸರಿಯಲ್ಲ ಎಂದು ಟೀಕೆಗಳು ಕೇಳಿಬಂದವು.

Leave a Reply

Your email address will not be published. Required fields are marked *