Team India: ಹರ್ಷಿತ್​ ರಾಣಾ ಮೇಲಿನ ಪ್ರೀತಿಗೆ ಯುವ ಬೌಲರ್ ಬಲಿ! ಅತ್ಯುತ್ತಮ ಪ್ರದರ್ಶನ ತೋರಿದ್ದ ವೇಗಿಯನ್ನ ಹೊರಗಿಟ್ಟ ಗಂಭೀರ್ | ಕ್ರೀಡೆ

Team India: ಹರ್ಷಿತ್​ ರಾಣಾ ಮೇಲಿನ ಪ್ರೀತಿಗೆ ಯುವ ಬೌಲರ್ ಬಲಿ! ಅತ್ಯುತ್ತಮ ಪ್ರದರ್ಶನ ತೋರಿದ್ದ ವೇಗಿಯನ್ನ ಹೊರಗಿಟ್ಟ ಗಂಭೀರ್ | ಕ್ರೀಡೆ

Last Updated:


ಕಳೆದ ಪಂದ್ಯದಲ್ಲಿ ಬ್ಯಾಟಿಂಗ್​​ನಲ್ಲಿ ಮಿಂಚಿದರೂ ಬೌಲಿಂಗ್​​ನಲ್ಲಿ ಸತತವಾಗಿ ದುಬಾರಿಯಾಗುತ್ತಿರುವ ಹರ್ಷಿತ್ ರಾಣಾರನ್ನ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಸೇರಿಸಿಕೊಳ್ಳಲಾಗಿದೆ. ಕುಲ್ದೀಪ್​ ಯಾದವ್​ ಹಾಗೂ ಪ್ರಸಿದ್ಧ್ ಕೃಷ್ಣ ಮೊದಲ ಎರಡು ಪಂದ್ಯಗಳ ಅಂತಿಮ ಇಲೆವೆನ್ ನಲ್ಲಿ ಇರಲಿಲ್ಲ. ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಆಸ್ಟ್ರೇಲಿಯಾ (India vs Australia) ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸತತ 2 ಪಂದ್ಯಗಳಲ್ಲಿ ಪ್ಲೇಯಿಂಗ್​​ ಇಲೆವೆನ್​​ನಲ್ಲಿ ಹೊರಗುಳಿದಿದ್ದ ಸ್ಪೆಷಲಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್​ಗೆ ಕೊನೆಗೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ಸಿಕ್ಕಿದೆ. ನಿರೀಕ್ಷೆಯಂತೆ ಕನ್ನಡಿಗ ಪ್ರಸಿಧ್ ಕೃಷ್ಣಗೂ ಅವಕಾಶ ಸಿಕ್ಕಿದೆ. ಆದರೆ ಅಚ್ಚರಿಯ ವಿಷಯವೆಂದರೆ ಇಂದು ಇಬ್ಬರು ಬೌಲರ್​ಗಳನ್ನ ತಂಡಕ್ಕೆ ಸೇರಿಸಿಕೊಂಡಿರುವ ಮ್ಯಾನೇಜ್​ಮೆಂಟ್ ಇಬ್ಬರು ಬೌಲರ್​ಗಳನ್ನ ಹೊರಗಿಡುವ ಬದಲಿಗೆ ಆಲ್​ರೌಂಡರ್​ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಹೊರಗಿಟ್ಟಿದೆ. ಅಲ್ಲದೆ ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಅರ್ಷದೀಪ್​ ಸಿಂಗ್​ರನ್ನ ವಿಶ್ರಾಂತಿ ನೆಪದಲ್ಲಿ ಹೊರಗಿಟ್ಟಿರುವುದು ಕೂಡ ಆಶ್ಚರ್ಯವನ್ನುಂಟು ಮಾಡುತ್ತಿದೆ.

ಹರ್ಷಿತ್​ ರಾಣಾಗೆ ಮತ್ತೆ ಚಾನ್ಸ್

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್​​ನಲ್ಲಿ ಮಿಂಚಿದರೂ ಬೌಲಿಂಗ್​​ನಲ್ಲಿ ಸತತವಾಗಿ ದುಬಾರಿಯಾಗುತ್ತಿರುವ ಹರ್ಷಿತ್ ರಾಣಾರನ್ನ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಸೇರಿಸಿಕೊಳ್ಳಲಾಗಿದೆ. ಕುಲ್ದೀಪ್​ ಯಾದವ್​ ಹಾಗೂ ಪ್ರಸಿದ್ಧ್ ಕೃಷ್ಣ ಮೊದಲ ಎರಡು ಪಂದ್ಯಗಳ ಅಂತಿಮ ಇಲೆವೆನ್ ನಲ್ಲಿ ಇರಲಿಲ್ಲ. ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಅಥವಾ ನಿತೀಶ್ ಕುಮಾರ್ ರೆಡ್ಡಿಯನ್ನ ಹೊರಗಿಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅರ್ಷದೀಪ್ ಸಿಂಗ್​ರನ್ನ ಹೊರಗಿಟ್ಟಿರುವುದು ವಿಶ್ಲೇಷಕರಿಗೆ, ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ. ನಿತೀಶ್​ ಕುಮಾರ್ ಆಲ್ರರೌಂಡರ್ ಆಗಿದ್ದರೂ ಬೌಲಿಂಗ್​​ನಲ್ಲಿ ತಂಡಕ್ಕೆ ಯಾವುದೆ ಕೊಡುಗೆ ನೀಡಿರಲಿಲ್ಲ. ಹಾಗಾಗಿ ಅವರನ್ನ ಕೈಬಿಟ್ಟಿರುವುದು ಸಮಂಜಸವಾಗಿದೆ.

ಮತ್ತೆ ಟಾಸ್ ಸೋತ ಭಾರತ

ಭಾರತ ಸತತ 18ನೇ ಬಾರಿಗೆ ಏಕದಿನ ಪಂದ್ಯದಲ್ಲಿ ಟಾಸ್ ಸೋತಿದೆ. 19 ನವೆಂಬರ್ 2023 ರಂದು ಏಕದಿನ ವಿಶ್ವಕಪ್ ಫೈನಲ್ ನೊಂದಿಗೆ ಪ್ರಾರಂಭವಾದ ಭಾರತದ ಸೋಲುವ ಟಾಸ್ ನಿರಂತರವಾಗಿ ಮುಂದುವರೆದಿದೆ, ಇದು ಏಕದಿನದಲ್ಲಿ ಮಾತ್ರವಲ್ಲ, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ವಿಶ್ವ ದಾಖಲೆಯಾಗಿದೆ. ಕೆಎಲ್ರ ರಾಹುಲ್​, ರೋಹಿತ್ ಶರ್ಮಾ ಇದೀಗ ಶುಭ್​ಮನ್ ಗಿಲ್ ಹೀಗೆ ಮೂರು ನಾಯಕರ ನೇತೃತ್ವದಲ್ಲಿ ಭಾರತ ಆಡಿದರೂ ಟಾಸ್​ ಸೋಲಿನ ಸರಪಳಿ ಮಾತ್ರ ಮುಂದುವರಿಯುತ್ತಲೇ ಇದೆ.

ಆಸ್ಟ್ರೇಲಿಯಾಕ್ಕೆ ಇತಿಹಾಸ ನಿರ್ಮಿಸುವ ಅವಕಾಶ

ಕಾಂಗರೂಗಳಿಗೆ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಭಾರತವನ್ನು ವೈಟ್​ ವಾಷ್ ಮಾಡಯವ ಅವಕಾಶವಿದೆ. ಕ್ರಿಕೆಟ್ ಇತಿಹಾಸದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಒಮ್ಮೆಯೂ ಸೋತಿಲ್ಲ. ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್ಸಿಜಿ) ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಆರು ಪಂದ್ಯಗಳನ್ನು ಗೆದ್ದು ಈ ಪಂದ್ಯಕ್ಕೆ ಪ್ರವೇಶಿಸಿದೆ. ಹಾಗಾಗಿ ಈ ಪಂದ್ಯವನ್ನ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಅಲ್ಲದೆ ಭಾರತ ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿರುವ 19 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಟ್ ಶಾರ್ಟ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕೂಪರ್ ಕೊನೊಲ್ಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನೇಥನ್ ಎಲ್ಲಿಸ್, ಆಡಮ್ ಜಂಪಾ, ಜೋಶ್ ಹೇಜಲ್ವುಡ್.