Dakshina Kannada: ತುಳುನಾಡಿನ ದೈವಗಳ ಆಭರಣ ತೊಳೆಯುವವರು ಯಾರು ಗೊತ್ತೇ? | Dakshina Kannada: Do you know who washes the jewelry of the gods of Tulunadu?

Dakshina Kannada: ತುಳುನಾಡಿನ ದೈವಗಳ ಆಭರಣ ತೊಳೆಯುವವರು ಯಾರು ಗೊತ್ತೇ? | Dakshina Kannada: Do you know who washes the jewelry of the gods of Tulunadu?

Dakshina Kannada: Do you know who washes the jewelry of the gods of Tulunadu?

ಸಾಮಾನ್ಯವಾಗಿ ಒಂದು ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಇಂತಹುದೇ ಕೆಲವು ವಿಶ್ವಕರ್ಮ ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರೇ ಈ ಕೆಲಸವನ್ನು ಯಾವುದೇ ಫಲಾಪೇಕ್ಷೆಗಳಿಲ್ಲದೇ ನಿರ್ವಹಿಸುತ್ತಾರೆ.

ದಕ್ಷಿಣಕನ್ನಡ: ತುಳುನಾಡಿನಲ್ಲಿ ನಡೆಯುವ ದೈವಾರಾಧನೆಗೆ(Worship) ತನ್ನದೇ ಆದ ವೈಶಿಷ್ಟ್ಯವಿದೆ. ತುಳುನಾಡಿನ ಎಲ್ಲಾ ಜಾತಿಗೆ ಸೇರಿದ ಜನ ಒಟ್ಟುಗೂಡಿದಲ್ಲಿ ಮಾತ್ರವೇ ಈ ದೈವಾರಾಧನೆ ಸಂಸ್ಕೃತಿ, ಸಂಪ್ರದಾಯಗಳಿಗೆ(Traditions) ಬದ್ಧವಾಗಿ ನಡೆಯುತ್ತದೆ. ಇಲ್ಲಿ ದೈವದ ಸೇವೆ(Divine Service) ಮಾಡಲೆಂದೇ ಒಂದೊಂದು ಸಮುದಾಯವನ್ನು ಹಿಂದಿನಿಂದಲೂ‌ ಮೀಸಲಿಡಲಾಗಿದೆ. ದೈವಗಳ ನರ್ತನ ಸೇವೆಯನ್ನು ಪರವರು, ನಲಿಕೆಯವರು ಮಾಡಿದರೆ, ದೈವಾರಾಧನೆಗೆ ಸಂಬಂಧಪಟ್ಟ ಇತರ ಸೇವೆಗಳನ್ನು ಇತರ ಸಮುದಾಯದ ಮಂದಿ ಮಾಡುತ್ತಾರೆ.

ಇಂತಹ ದೈವದ ಸೇವೆಯಲ್ಲಿ ದೈವಕ್ಕೆ ಸಂಬಂಧಪಟ್ಟ ಆಭರಣಗಳ ಶುಚಿತ್ವವೂ ಒಂದು. ದೈವದ ಮುಖವಾಡ, ದೈವದ ಕತ್ತಿ, ದೈವದ ಚಾಮರ ಹೀಗೆ ಎಲ್ಲವನ್ನೂ ತೊಳೆಯುವ ಜವಾಬ್ದಾರಿ ವಿಶ್ವಕರ್ಮ ಸಮುದಾಯದ ಮೇಲಿದೆ. ಒಂದು ದೈವಸ್ಥಾನದಲ್ಲಿ ದೈವದ ನೇಮಕ್ಕೆ ದಿನ ನಿಗದಿ ಮಾಡಿದ ಬಳಿಕ ದೈವಗಳಿಗೆ ನೇಮ ನಡೆಯುವ ಒಂದೋ, ಎರಡೋ ದಿನದ ಮೊದಲು ದೈವಕ್ಕೆ ಸಂಬಂಧಪಟ್ಟ ಎಲ್ಲಾ ಆಭರಣಗಳನ್ನು, ಸಾಮಾಗ್ರಿಗಳನ್ನು ಇದೇ ವಿಶ್ವಕರ್ಮ ಸಮುದಾಯ ಶುಚಿಗೊಳಿಸುತ್ತದೆ. ಸಾಮಾನ್ಯವಾಗಿ ಒಂದು ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಇಂತಹುದೇ ಕೆಲವು ವಿಶ್ವಕರ್ಮ ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರೇ ಈ ಕೆಲಸವನ್ನು ಯಾವುದೇ ಫಲಾಪೇಕ್ಷೆಗಳಿಲ್ಲದೇ ನಿರ್ವಹಿಸುತ್ತಾರೆ.

ಅದೇ ರೀತಿ ಕೆಲವು ಮನೆತನದಲ್ಲಿ ನಡೆಯುವಂತಹ ಗ್ರಾಮ ವ್ಯಾಪ್ತಿಯ ದೈವದ ನೇಮೋತ್ಸವಕ್ಕೂ ಇದೇ ರೀತಿಯಲ್ಲಿ ಆ ಗ್ರಾಮಕ್ಕೆ ಸೇರಿದ ವಿಶ್ವಕರ್ಮ ಕುಟುಂಬ ಈ ಕಾರ್ಯವನ್ನು ಮಾಡುತ್ತದೆ. ದೈವದ ಭಂಡಾರವಿರುವ ಮನೆಗೆ ಆಗಮಿಸುವ ವಿಶ್ವಕರ್ಮರಿಗೆ ದೈವಕ್ಕೆ ಸಂಬಂಧಪಟ್ಟ ಮನೆ ಮಂದಿ ದೈವದ ಎಲ್ಲಾ ಸಾಮಾಗ್ರಿಗಳನ್ನು ನೀಡುತ್ತಾರೆ. ಈ ಸಾಮಾಗ್ರಿಗಳಲ್ಲಿ ದೈವಕ್ಕೆ ಹಚ್ಚುವ ವಿವಿಧ ಪ್ರಕಾರದ ದೀಪಗಳು, ದೈವದ ಮುಖವಾಡ, ಕತ್ತಿ, ಚಾಮರ, ದೈವದ ಆಭರಣಗಳು, ದೈವ ನರ್ತನದ ಸಂದರ್ಭದಲ್ಲಿ ದೈವದ ಅಣಿಗೆ ಜೋಡಣೆ ಮಾಡುವ ಬಂಗಾರದ,ಬೆಳ್ಳಿಯ ಹೂಗಳು. ಹೀಗೆ ಎಲ್ಲವನ್ನೂ ಲೆಕ್ಕಹಾಕಿ ನೀಡಲಾಗುತ್ತದೆ.

 

ಶುಚಿತ್ವ ಮಾಡಿದ ಬಳಿಕ ಎಲ್ಲಾ ಸಾಮಾಗ್ರಿಗಳನ್ನು ಲೆಕ್ಕ ಹಾಕಿಯೇ ವಿಶ್ವಕರ್ಮರು ವಾಪಾಸ್ಸು ನೀಡುತ್ತಾರೆ. ಬೆಳ್ಳಿ, ತಾಮ್ರ ಮತ್ತು ಬಂಗಾರದಿಂದ ಮಾಡಿದ ಸಾಮಾಗ್ರಿಗಳೇ ಹೆಚ್ಚಾಗಿರುವ ಕಾರಣ, ಹಿಂದಿನ ಕಾಲದಿಂದಲೂ ಹುಳಿ ಮತ್ತು ಅಂಟುವಾಳ ಕಾಯಿ (ನೊರೆಕಾಯಿ) ಬಳಸಿ ಈ ಆಭರಣಗಳನ್ನು ತೊಳೆಯಲಾಗುತ್ತಿದ್ದು, ಈ ಪದ್ಧತಿಯನ್ನು ಇಂದಿಗೂ ಕೆಲವು ಕಡೆಗಳಲ್ಲಿ ಪಾಲಿಸಲಾಗುತ್ತಿದೆ.