Last Updated:
ರಿಪೇರಿಗೂ 30ಲಕ್ಷ ರೂ. ವೆಚ್ಚವಾಗಲಿದೆ. 400 ವರ್ಷಗಳ ಇತಿಹಾಸವಿರುವ ಬಪ್ಪನಾಡಿನ ಬ್ರಹ್ಮರಥವನ್ನು ಹಲವು ಬಾರಿ ನವೀಕರಣ ಮಾಡಲಾಗಿತ್ತು.
ದಕ್ಷಿಣ ಕನ್ನಡ: ಮಂಗಳೂರು ನಗರದ(Mangaluru City) ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ(Durga Parameshwari Temple) ಏಪ್ರಿಲ್ 18ರಂದು ನಡೆದ ಜಾತ್ರೋತ್ಸವದ ಸಂದರ್ಭ ರಥ ಮುರಿದು ಧರಾಶಾಯಿಯಾಗಿತ್ತು. ಇದೀಗ ನೂತನ ಬ್ರಹ್ಮರಥ(New Brahma Ratha) ಮಾಡುವುದೇ ಅಥವಾ ಹಳೆಯ ರಥವನ್ನೇ ರಿಪೇರಿ ಮಾಡುವುದೇ ಎಂಬ ಗೊಂದಲದಲ್ಲಿದೆ ಆಡಳಿತ ಸಮಿತಿ. ಆದ್ದರಿಂದ ಶೀಘ್ರವೇ ಒಂಬತ್ತು ಮಾಗಣೆಯ ಸಭೆ ಕರೆದು ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಆಡಳಿತ ಸಮಿತಿ ನಿರ್ಧರಿಸಿದೆ.
ಆದ್ದರಿಂದ ಈ ರಥದ ಮೂಲ ಸ್ವರೂಪದೊಂದಿಗೆ ನೂತನ ರಥದ ನಿರ್ಮಾಣಕ್ಕೆ ಚಿಂತನೆ ನಡೆಯುತ್ತಿದೆ. ಆದರೆ ಅದೇ ಮಾದರಿಯ ರಥದ ನಿರ್ಮಾಣಕ್ಕೆ ಕನಿಷ್ಠ 2 ವರ್ಷಗಳ ಕಾಲ ಬೇಕಾಗುತ್ತದೆ. ಅದಕ್ಕಾಗಿ ಮುರಿದು ಬಿದ್ದ ಹಳೆಯ ರಥದ ರಿಪೇರಿ ಬಗ್ಗೆಯೂ ಯೋಚನೆ ಮಾಡಲಾಗುತ್ತಿದೆ. ರಿಪೇರಿಗೂ 30ಲಕ್ಷ ರೂ. ವೆಚ್ಚವಾಗಲಿದೆ. 400 ವರ್ಷಗಳ ಇತಿಹಾಸವಿರುವ ಬಪ್ಪನಾಡಿನ ಬ್ರಹ್ಮರಥವನ್ನು ಹಲವು ಬಾರಿ ನವೀಕರಣ ಮಾಡಲಾಗಿತ್ತು.
ಇದನ್ನೂ ಓದಿ: UPSC Result 2025: ರೈತನ ಮಗನ ಅಭೂತಪೂರ್ವ ಸಾಧನೆ- ಶಿಕ್ಷಕರ ಮಗಳಿಗೆ 446ನೇ ರ್ಯಾಂಕ್!
ಕಳೆದ ಬಾರಿ ಜಾತ್ರೆಯ ಸಂದರ್ಭ ಬ್ರಹ್ಮರಥದ ಮುಂಭಾಗದ ಎಡಚಕ್ರ ಕೆಸರಿನಲ್ಲಿ ಹೂತುಹೋಗಿತ್ತು. ಈ ವೇಳೆಯೂ ಅವಘಡ ಸಂಭವಿಸಿತ್ತು. ಈ ಬಾರಿಯೂ ಅದೇ ಚಕ್ರದ ಒಳಭಾಗದ ಆ್ಯಕ್ಸಿಲ್ ತುಂಡರಿಸಿ ಈ ಘಟನೆ ಸಂಭವಿಸಿತ್ತು ಎನ್ನಲಾಗಿದೆ. ಇದೀಗ ಬ್ರಹ್ಮರಥ ತುಂಡರಿಸಿದ ಬಗ್ಗೆ ಅಷ್ಟಮಂಗಲ ಪ್ರಶ್ನೆ ಇಡಲು ನಿರ್ಧರಿಸಲಾಗಿದೆ.
ಸದ್ಯ ಕೋಟೇಶ್ವರ ರಥಶಿಲ್ಪಿ ರಾಜಗೋಪಾಲಾಚಾರ್ಯರನ್ನು ಕರೆಸಿ ರಥವನ್ನು ಪರಿಶೀಲಿಸಲಾಗಿದೆ. ಅವರು ರಥ ನಿರ್ಮಾಣದ ಬಗ್ಗೆ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಅಷ್ಟಮಂಗಲ ಪ್ರಶ್ನೆಯ ಬಳಿಕವೇ ಬ್ರಹ್ಮರಥದ ಬಗೆಗಿನ ಸರಿಯಾದ ಚಿತ್ರಣ ದೊರಕಲಿದೆ.
Dakshina Kannada,Karnataka
April 23, 2025 5:33 PM IST