Last Updated:
ಶುಭ್ರವಾಗಿ ಗಿರಿಯ ಮೇಲಿಂದ ಧರೆಗೆ ಭೋರ್ಗರೆದು ಹರಿಯುತ್ತಿರೋದು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಸಮೀಪವಿರುವ ಎರ್ಮಾಯಿ ಜಲಪಾತ. ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರಕೃತಿ ಪ್ರಿಯರ ಸುಂದರ ತಾಣವೂ ಆಗಿದೆ.
ದಕ್ಷಿಣ ಕನ್ನಡ: ಮಳೆಗಾಲ ಹತ್ತಿರ ಬರುತ್ತಿದೆ. ಈ ಬಾರಿ ಮಳೆಗಾಲದಲ್ಲಿ(Rainy Season) ದಕ್ಷಿಣ ಕನ್ನಡದತ್ತ(Dakshina Kannada) ಟ್ರಿಪ್ ಹೋಗೋ ಪ್ಲಾನ್ ಇದ್ರೆ ಈ ಫಾಲ್ಸ್ ನ್ನು(Falls) ಮಾತ್ರ ಮಿಸ್ ಮಾಡಲೇಬೇಡಿ. ಕಾನನದ ನಡುವೆ ಮೈದುಂಬಿ ಹರಿಯುವ ಜಲಪಾತಗಳ ದೃಶ್ಯ ಕಾವ್ಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬದಂತೆ. ಇಂತಹ ಹಲವು ಜಲಪಾತಗಳು ಪಶ್ಚಿಮಘಟ್ಟಗಳ ಸಾಲಿನ ಬೆಟ್ಟಗಳಿಂದ ಗಂಗೆಯಂತೆ ಶುಭ್ರವಾಗಿ ಧರೆಗಿಳಿಯುತ್ತಿದೆ. ಇಂಥಹ ಒಂದು ಜಲಪಾತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿದೆ.
ಶುಭ್ರವಾಗಿ ಗಿರಿಯ ಮೇಲಿಂದ ಧರೆಗೆ ಭೋರ್ಗರೆದು ಹರಿಯುತ್ತಿರೋದು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಸಮೀಪವಿರುವ ಎರ್ಮಾಯಿ ಜಲಪಾತ. ಸುಮಾರು 120 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತ ಪ್ರಕೃತಿ ಪ್ರಿಯರ ಸುಂದರ ತಾಣವೂ ಆಗಿದೆ. ಕಾಡು ರಸ್ತೆಯ ಮೂಲಕ ಈ ಜಲಪಾತವನ್ನು ನೋಡಲು ಸಾಗಬೇಕಿದ್ದು, ಕಾಲ್ನಡಿಗೆಯಲ್ಲಿ ಆದ ಸುಸ್ತು ಈ ಜಲಪಾತವನ್ನು ನೋಡಿದಾಗ ಮಾಯವಾಗಿ ಬಿಡುತ್ತದೆ.
ಇದನ್ನೂ ಓದಿ: Excavation: ಮೇ 3ಕ್ಕೆ ಗೋಪಾಲಕೃಷ್ಣ ದೇವಾಲಯದ ಬ್ರಹ್ಮಕಲಶೋತ್ಸವ!
ಅಂಥಹ ಸೌಂದರ್ಯದ ಮಾಯಾಂಗನೆ ಈ ಎರ್ಯಾಯಿ ಜಲಪಾತವಾಗಿದ್ದು, ನೋಡಿದಷ್ಟೂ ತೀರದ ದಾಹ ಅನುಭವ ಈ ಜಲಪಾತವನ್ನು ನೋಡಿದಾಗ ಅರಿವಿಗೆ ಬರುತ್ತದೆ. ಎರ್ಯಾಯಿ ಎಂದರೆ ಸ್ಥಳೀಯ ಭಾಷೆಯ ಪ್ರಕಾರ ಎತ್ತುಗಳು ಮಾಯವಾದ ಪ್ರದೇಶ ಎಂದರ್ಥ. ಹಿಂದೆ ಮೇಯಲು ಬಂದ ಎತ್ತುಗಳು ಇದೇ ಪ್ರದೇಶದಲ್ಲಿ ಮಾಯವಾದ ಕಾರಣ ಈ ಸ್ಥಳಕ್ಕೆ ಎರ್ಮಾಯಿ ಎನ್ನುವ ಹೆಸರು ಬಂದಿದೆ. ಈ ಜಲಪಾತವಲ್ಲದೆ, ಇದರ ಮೇಲೆ ಇನ್ನೂ ಏಳು ಜಲಪಾತಗಳು ಹರಿಯುತ್ತಿವೆ. ಸೌಂದರ್ಯದಲ್ಲಿ ಒಂದಕ್ಕಿಂತ ಒಂದು ಮಿಗಿಲಾಗಿದೆ. ದೂರದ ಊರುಗಳಿಂದ ಈ ಜಲಪಾತದ ವೀಕ್ಷಣೆಗಾಗಿ ಬರುವ ಪ್ರವಾಸಿಗರ ಜೊತೆಗೆ ಕೆಲವು ವಿಕೃತ ಮನಸ್ಸುಗಳೂ ಇತ್ತ ಹರಿದಾಡುತ್ತಿವೆ.
ಜಲಪಾತ ವೀಕ್ಷಣೆಯ ನೆಪದಲ್ಲಿ ಮದ್ಯದ ಬಾಟಲಿಗಳ ಜೊತೆ ಇಲ್ಲಿಗೆ ಬರುತ್ತಿದ್ದು, ಕುಡಿದು ಮಜಾ ಮಾಡುವುದರ ಜೊತೆಗೆ. ತಮ್ಮ ಜೊತೆ ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನೂ ತಂದು ಚೆಲ್ಲಿ ವಿಕೃತಿ ಮೆರೆಯುತ್ತಿದ್ದಾರೆ. ಇದರಿಂದಾಗಿ ಪ್ರಕೃತಿಯನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಅಸಹ್ಯಕರ ವಾತಾವರಣ ನಿರ್ಮಾಣವಾಗುತ್ತಿದ್ದು, ಪೋಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಇತ್ತ ಗಮನ ಹರಿಸಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ.
Dakshina Kannada,Karnataka
April 27, 2025 5:47 PM IST