Dakshina Kannada: ಮೆಸ್ಕಾಂ `ಮಾನ್ಸೂನ್‌ ತಂಡ’ ರಚನೆ- ಪವರ್‌ಮ್ಯಾನ್‌ಗಳಿಗೆ ನೆಮ್ಮದಿ ತಂದ ಸೂಚನೆ! | Formation of MESCOM ‘Monsoon Team’ – A sign of relief for powermen!

Dakshina Kannada: ಮೆಸ್ಕಾಂ `ಮಾನ್ಸೂನ್‌ ತಂಡ’ ರಚನೆ- ಪವರ್‌ಮ್ಯಾನ್‌ಗಳಿಗೆ ನೆಮ್ಮದಿ ತಂದ ಸೂಚನೆ! | Formation of MESCOM ‘Monsoon Team’ – A sign of relief for powermen!

Last Updated:

ಏಪ್ರಿಲ್ ತಿಂಗಳ ಆದಿಯಲ್ಲಿ ಈ ಮಾನ್ಸೂನ್ ತಂಡಗಳ ರಚನೆಯಾಗಬೇಕಿತ್ತು. ಮೊದಲ ಬಾರಿಗೆ ಪವರ್‌ಮ್ಯಾನ್ ಗಳೇ ಇದನ್ನು ನಿರ್ವಹಿಸಬೇಕು ಎಂಬ ಸೂಚನೆಯ ಹಿನ್ನಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಪವರ್ ಮ್ಯಾನ್ ಗಳಿಂದ ಪೂರ್ವ ತಯಾರಿ ಕೆಲಸಗಳನ್ನು ನಡೆಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಮಳೆಗಾಲದ(Rainy Season) ಪೂರ್ವತಯಾರಿ ಕೆಲಸಗಳಿಗಾಗಿ ಈ ಬಾರಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ(Mangalore Electricity Supply Company) ವತಿಯಿಂದ ಮಾನ್ಸೂನ್ ತಂಡದ(Monsoon Team) ಅವಶ್ಯಕತೆ ಇಲ್ಲ. ಮಳೆಗಾಲದ ದಿನಗಳಲ್ಲಿ ಮಾನ್ಸೂನ್ ತಂಡವನ್ನು ಬಳಸಲು ಚಿಂತನೆ ಮಾಡಿದ್ದ ಇಲಾಖೆ, ಇದೀಗ ಮಾನ್ಸೂನ್ ತಂಡ ರಚನೆಗೆ ಆದೇಶ ನೀಡಿದೆ. ಮಳೆನಾಡು ವ್ಯಾಪ್ತಿಯ ಮಂಗಳೂರು, ಬಂಟ್ವಾಳ, ಉಡುಪಿ, ಕುಂದಾಪುರ, ಕಾರ್ಕಳ, ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ಚಿಕ್ಕಮಗಳೂರು, ಕೊಪ್ಪ, ಕಡೂರು ಹಾಗೂ ಪುತ್ತೂರು ಈ ಭಾಗಗಳಲ್ಲಿ ಮಳೆಗಾಲದ ತಯಾರಿಗೆ ಪೂರಕವಾದ ಕೆಲಸಗಳನ್ನು ಮಾಡಲು ಒಟ್ಟು 489 ತಂಡಗಳ ರಚನೆಯಾಗಲಿದೆ. ಈ ತಂಡಗಳಿಗಾಗಿ 62 ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುವಂತೆ ಕಂಪೆನಿ ಸೂಚಿಸಿದೆ. ಇದರ ಜತೆಗೆ ದೂರವಾಣಿ ಕರೆಗಳ ನಿರ್ವಹಣೆಗಾಗಿ 23 ವಿಶೇಷ ತಂಡಗಳ ರಚನೆಗೂ ಅವಕಾಶ ಕಲ್ಪಿಸಲಾಗಿದೆ.

ಮಳೆಗಾಲದ ಮೊದಲು ವಿದ್ಯುತ್ ತಂತಿಗಳ ಹಾದಿಯನ್ನು ಸಮರ್ಪಕಗೊಳಿಸುವ, ತೊಂದರೆಯಾಗುತ್ತಿರುವ ಮರಗಳ ಗೆಲ್ಲುಗಳನ್ನು ಸವರುವ ಕಾರ್ಯಕ್ಕಾಗಿ ಮೆಸ್ಕಾಂ ಇಲಾಖೆ ಮಾನ್ಸೂನ್ ತಂಡವೊಂದನ್ನು ರಚಿಸಿಕೊಳ್ಳಲು ಅವಕಾಶ ನೀಡುತ್ತಿತ್ತು. ಇದು ಹಲವು ವರ್ಷಗಳ ಪ್ರಕ್ರಿಯೆಯಾಗಿತ್ತು. ಆದರೆ ಈ ಮಳೆಗಾಲದ ಮೊದಲು ಪವರ್‌ಮ್ಯಾನ್ ಗಳೇ ಪೂರ್ವತಯಾರಿ ಕೆಲಸ ಮಾಡುವಂತೆ ಸೂಚಿಸಿತ್ತು. ಏಪ್ರಿಲ್ ತಿಂಗಳ ಆದಿಯಲ್ಲಿ ಈ ಮಾನ್ಸೂನ್ ತಂಡಗಳ ರಚನೆಯಾಗಬೇಕಿತ್ತು. ಮೊದಲ ಬಾರಿಗೆ ಪವರ್‌ಮ್ಯಾನ್ ಗಳೇ ಇದನ್ನು ನಿರ್ವಹಿಸಬೇಕು ಎಂಬ ಸೂಚನೆಯ ಹಿನ್ನಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಪವರ್ ಮ್ಯಾನ್ ಗಳಿಂದ ಪೂರ್ವ ತಯಾರಿ ಕೆಲಸಗಳನ್ನು ನಡೆಸಲಾಗಿದೆ. ಇದೀಗ ಮನಸ್ಸು ಬದಲಿಸಿರುವ ಮೆಸ್ಕಾಂ ಇಲಾಖೆ ಮೇ ತಿಂಗಳ ಆದಿಯಲ್ಲಿ ಮಾನ್ಸೂನ್ ತಂಡ ರಚಿಸಿಕೊಳ್ಳುವಂತೆ ಆದೇಶ ನೀಡಿದೆ.

ಪುತ್ತೂರು ಮೆಸ್ಕಾಂ ವ್ಯಾಪ್ತಿಯಲ್ಲಿರುವ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಕಡಬ ಹಾಗೂ ಉಪ್ಪಿನಂಗಡಿ ಪ್ರದೇಶಗಳಲ್ಲಿ ಮಳೆಗಾಲದ ಪೂರ್ವ ತಯಾರಿ ಕೆಲಸಗಳನ್ನು ಪವರ್ ಮ್ಯಾನ್ ಗಳೇ ನಿಭಾಯಿಸಬೇಕಾದ ಒತ್ತಡಕ್ಕೆ ಸಿಲುಕಿದ್ದರು. ಸುಳ್ಯ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಹಾಗೂ ಕಡಬ ಪ್ರದೇಶಗಳು ಗ್ರಾಮೀಣ ಭಾಗಗಳಾಗಿದ್ದು, ಇಲ್ಲಿ ಕಾಡುಪ್ರದೇಶಗಳೂ ತುಂಬಿವೆ.

ಹೆಚ್ಚು ವಿಶಾಲವಾದ ಈ ಪ್ರದೇಶಗಳಲ್ಲಿ ಪವರ್‌ಮ್ಯಾನ್ ಗಳೇ ಈ ಕಾರ್ಯಕ್ಕೆ ಮುಂದಾಗಬೇಕಾದ ಸ್ಥಿತಿ ಉಂಟಾಗಿತ್ತು. ಆದರೂ ರಾತ್ರಿ ಹಗಲೆನ್ನದೆ ಪವರ್ ಮ್ಯಾನ್ ಗಳು ಒಂದು ತಿಂಗಳಲ್ಲಿ ಈ ಪೂರ್ವ ತಯಾರಿ ಕೆಲಸ ನಡೆಸಿದ್ದರು. ಪ್ರತೀ ಸಬ್ ಡಿವಿಜನ್ ಗೆ 3 ತಂಡಗಳ ಹಾಗೆ ಈ ಪವರ್ ಮ್ಯಾನ್ ಗಳನ್ನು ಬಳಕೆ ಮಾಡಲಾಗಿತ್ತು. 30 ಮಂದಿ ಪವರ್ ಮ್ಯಾನ್ ಗಳು ಇದರಲ್ಲಿ ಪ್ರತೀ ನಿತ್ಯ ಕೆಲಸ ಮಾಡಬೇಕಿತ್ತು. ಹಾಗಾಗಿ ಈ ಹೆಚ್ಚುವರಿ ಜವಾಬ್ದಾರಿ ಪವರ್‌ಮ್ಯಾನ್ ಗಳಿಗೆ ಉಸಿರು ಕಟ್ಟುವಂತಹ ಸ್ಥಿತಿ ನಿರ್ಮಿಸಿತ್ತು. ಪುತ್ತೂರು ಮೆಸ್ಕಾಂ ವ್ಯಾಪ್ತಿಯಲ್ಲಿ ಶೇ.60 ರಷ್ಟು ಮಾತ್ರ ಪವರ್ ಮ್ಯಾನ್ ಗಳಿದ್ದು, ಶೇ 40 ರಷ್ಟು ಕೊರತೆ ಅನುಭವಿಸುತ್ತಿದೆ. ಈ ಹೆಚ್ಚುವರಿ ಕೆಲಸ ಪವರ್‌ಮ್ಯಾನ್ ಗಳಿಗೆ ದೊಡ್ಡ ಸವಾಲಿನ ಜತೆಗೆ ಒತ್ತಡವನ್ನೂ ನಿರ್ಮಿಸಿತ್ತು. ಆದರೆ ಈಗ ಮಾನ್ಸೂನ್ ತಂಡ ರಚನೆಯ ಹಿನ್ನಲೆಯಲ್ಲಿ ಪವರ್ ಮ್ಯಾನ್‌ಗಳು ನೆಮ್ಮದಿಯ ಉಸಿರು ಚೆಲ್ಲುವಂತಾಗಿದೆ.

ಮಳೆನಾಡಿನಲ್ಲಿ ಮಾತ್ರ ರಚನೆಗೆ ಅವಕಾಶವಿರುವ ಈ ಮಾನ್ಸೂನ್ ತಂಡಕ್ಕೆ ಪುತ್ತೂರು ಮೆಸ್ಕಾಂ ವ್ಯಾಪ್ತಿಯಲ್ಲಿ ಸ್ಥಳೀಯ 53 ಮಂದಿಯನ್ನು ಆಯ್ಕೆ ಮಾಡುವಂತೆ ಸೂಚಿಸಿದೆ. ಇದರ ಜತೆಗೆ 8 ವಾಹನಗಳನ್ನೂ ಈ ತಂಡಗಳಿಗೆ ನೀಡಲಾಗುತ್ತದೆ. ಪ್ರತೀ ಗ್ರಾಮದ ವ್ಯಾಪ್ತಿಯಲ್ಲೂ ವಿದ್ಯುತ್ ತಂತಿಗಳಿಗೆ ಆಗುವ ತೊಂದರೆ, ಮಳೆಗಾಲದಲ್ಲಿ ಅಪಾಯ ಉಂಟಾಗುವ ಸಾಧ್ಯತೆಯನ್ನು ಮನಗಂಡು ಅಲ್ಲಿ ಪೂರಕ ವ್ಯವಸ್ಥೆಗಳನ್ನು ಈ ತಂಡಗಳು ಮಾಡಬೇಕಾಗಿದೆ. ಒಂದು ಸಬ್ ಡಿವಿಜನ್ ಗೆ 3 ತಂಡಗಳಾಗೆ ರಚನೆ ಮಾಡಲಾಗುತ್ತದೆ. ಇದರಲ್ಲಿ ಮರದ ಗೆಲ್ಲುಗಳನ್ನು ಸವರುವ ಚಾಕಚಕ್ಯತೆ ಇರುವವರಿಗೆ ಆದ್ಯತೆ ನೀಡಲಾಗುತ್ತದೆ. ಈ ಸ್ಥಳೀಯ ವ್ಯಕ್ತಿಗಳಿಗೆ ತಿಂಗಳಿಗೆ ರೂ.18 ಸಾವಿರ ಗೌರವಧನ ದೊರೆಯಲಿದೆ. ಪ್ರತೀ ತಂಡ ನೇತೃತ್ವವನ್ನು ಪವರ್ ಮ್ಯಾನ್‌ಗಳು ವಹಿಸಿಕೊಳ್ಳಬೇಕಾಗುತ್ತದೆ.