Last Updated:
ಐಪಿಎಲ್ 2025ರಲ್ಲಿ 5 ಬಾರಿಯ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ನೀರಸ ಪ್ರದರ್ಶನ ತೋರುತ್ತಿದೆ. ತಾವು ಆಡಿರುವ 8 ಪಂದ್ಯಗಳಲ್ಲಿ ಈಗಾಗಲೇ 6 ಪಂದ್ಯ ಸೋಲುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ.
ಐಪಿಎಲ್ (IPL) 2025ರಲ್ಲಿ 5 ಬಾರಿಯ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ಈ ಬಾರಿ ನೀರಸ ಪ್ರದರ್ಶನ ತೋರುತ್ತಿದೆ. ತಾವು ಆಡಿರುವ 8 ಪಂದ್ಯಗಳಲ್ಲಿ ಈಗಾಗಲೇ 6 ಪಂದ್ಯ ಸೋಲುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಮಾತ್ರವಲ್ಲ ಸೆಮಿಫೈನಲ್ (Semi Final) ಪ್ರವೇಶಿಸುವುದು ಕೂಡ ಅಸಾಧ್ಯ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಈ ನಡುವೆ ಚೆನ್ನೈನ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು (Ambati Rayudu) ಚೆನ್ನೈ (Chennai) ತಂಡದ ಕಂಬ್ಯಾಕ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಸೂರ್ಯಕುಮಾರ್ ತಮ್ಮ ನೈಜ ಆಟ ಪ್ರದರ್ಶಿಸಿದ್ದಾರೆ
ಜಿಯೋಹಾಟ್ಸ್ಟಾರ್ನಲ್ಲಿ ನಡೆದ ಕೂಲ್ ಬ್ಯಾಂಕ್ಸ್ ಮ್ಯಾಚ್ ಸೆಂಟರ್ ಲೈವ್ ಶೋನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಕುರಿತು ಮಾತನಾಡಿದ ಅಂಬಟಿ ರಾಯುಡು, ಸೂರ್ಯಕುಮಾರ್ ಯಾದವ್ ಅವರಿಗೆ ಆರಂಭಿಕರು ಉತ್ತಮ ಸಾಥ್ ನೀಡಿದರೆ ಅವರು ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನು ಚೆನ್ನೈ ವಿರುದ್ಧದ ಪಂದ್ಯ ತೋರಿಸುತ್ತದೆ. ರೋಹಿತ್ ಶರ್ಮಾ ಶತಕ ಗಳಿಸುವ ಅಗತ್ಯವಿರಲಿಲ್ಲ, ಅವರು 60-70 ರನ್ ಗಳಿಸಿದ್ರೆ ಸಾಕಿತ್ತು. ಅದನ್ನೇ ಅವರು ಮಾಡಿದರು ಎಂದರು.
ಸಿಎಸ್ಕೆ ಸೋಲಿನ ಕುರಿತು ರಾಯುಡು ಹೇಳಿದ್ದೇನು?
ಚೆನ್ನೈ ತಂಡ ಮಿಡಲ್ ಓವರ್ಗಳಲ್ಲಿ ನಿಧಾನ ಗತಿಯ ಬ್ಯಾಟಿಂಗ್ಗೆ ಮುಂದಾಗಿತ್ತು. ಸುಮಾರು 7 ಓವರ್ಗಳಲ್ಲಿ ಅವರು ಕೇವಲ 35 ರನ್ ಮಾತ್ರ ಕಲೆಹಾಕಿದರು. ಈ ನಿಧಾನಗತಿಯ ಬ್ಯಾಟಿಂಗ್ ಚೆನ್ನೈ ಸೋಲಿಗೆ ಕಾರಣವಾಯಿತು. ಮಿಡಲ್ ಓವರ್ಗಳಲ್ಲಿ ಮೇಲುಗೈ ಸಾಧಿಸುವ ತಂಡ ಪಂದ್ಯವನ್ನು ಗೆಲ್ಲುತ್ತೆ. ನಿನ್ನೆಯ ಪಂದ್ಯದಲ್ಲೂ ಅದೇ ಆಯ್ತು ಎಂದರು. ಇಂದಿನ ಟಿ-20 ಕ್ರಿಕೆಟ್ನಲ್ಲಿ ಯಾರೂ ಆ ರೀತಿ ಆಡುವುದಿಲ್ಲ. ಉತ್ತಮ ಸ್ಟ್ರೈಕ್ ರೇಟ್ನಲ್ಲಿ ಆಡುವುದು ಮುಖ್ಯ ಎಂದರು.
ಸಿಎಸ್ಕೆ ಆಟದ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ನೀವು ಒಂದು ಎರಡು ಪಂದ್ಯಗಳಲ್ಲಿ ಸೋಲಬಹುದು. ಆದ್ರೆ, ನಿರಂತರವಾಗಿ ಸೋಲು ಅನುಭವಿಸುತ್ತಾ ಸಾಗಿದ್ರೆ, ಗೆಲ್ಲುವ ಹಂಬಲ ಕಡಿಮೆಯಾಗುತ್ತದೆ ಎಂದರು. ವಾಂಖೆಡೆಯಂತಹ ಮೈದಾನದಲ್ಲಿ ಗೆಲ್ಲಲು ಕನಿಷ್ಠ 190 ರನ್ಗಳ ಅಗತ್ಯವಿತ್ತು. ಆದರೆ ಸಿಎಸ್ಕೆ ಅದಕ್ಕಿಂತ ತುಂಬಾ ಕಡಿಮೆ ಸ್ಕೋರ್ ಮಾಡಿದ್ದು ಸೋಲಿಗೆ ಕಾರಣವಾಯಿತು ಎಂದರು.
ಇದನ್ನೂ ಓದಿ: CSK vs MI: ಚೆನ್ನೈ ವಿರುದ್ಧ ಅಬ್ಬರಿಸಿದ ರೋಹಿತ್ ಶರ್ಮಾ! ಕಿಂಗ್ ಕೊಹ್ಲಿ ದಾಖಲೆ ಉಡೀಸ್
ಸಿಎಸ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಾ?
ಈ ಋತುವಿನಲ್ಲಿ ಅವರು ಮತ್ತೆ ಕಂಬ್ಯಾಕ್ ಮಾಡ್ತಾರೆ ಎಂದು ಹೇಳಲಾಗದು. ಧೋನಿ ಕೂಡ ಅದನ್ನೇ ಹೇಳಿದ್ದಾರೆ. ಅವರು ಮತ್ತೆ ಕಂಬ್ಯಾಕ್ ಮಾಡ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಮುಂದಿನ ಸೀಸನ್ ಎದುರು ನೋಡ್ತಾ ಇದ್ದಾರೆ. ಅವರು ಯುವ ಆಟಗಾರರನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ ಎಂದರು. ಅವರಿಗೆ ಸಕಾರಾತ್ಮಕ ಆಟದ ಅಗತ್ಯವಿದೆ. ಆಯುಷ್ ಮ್ಹಾತ್ರೆಯಂತಹ ಆಟಗಾರರಿಗೆ ಪೂರ್ಣ ಅವಕಾಶ ನೀಡಬಹುದು ಎಂದರು.
ಈ ವಾರ ಏಪ್ರಿಲ್ 20 ರಿಂದ 27 ರವರೆಗೆ ‘ಟಾಟಾ ಐಪಿಎಲ್ ಸೇಡು ತೀರಿಸಿಕೊಳ್ಳುವ ವಾರ’ ನಡೆಯಲಿದ್ದು, ಇಂದು (ಏಪ್ರಿಲ್ 21) ರಾತ್ರಿ 7:30 ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ.
April 21, 2025 4:17 PM IST