Last Updated:
ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆಯನ್ನೂ ಅಭಿನಂಧಿಸಿದ್ದು, ಮಹಿಳೆಯರ ಸಿಂಧೂರ ಅಳಿಸಿದ ಜಿಹಾದಿ ಉಗ್ರರಿಗೆ ಉತ್ತರ ನೀಡಲಾಗಿದೆ.
ದಕ್ಷಿಣ ಕನ್ನಡ: ಉಗ್ರರ ನೆಲೆಗಳಿಗೆ(Terrorist Bases) ನುಗ್ಗಿ ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನೆಗೆ(Indian Army) ಮತ್ತಷ್ಟು ಸ್ಥೈರ್ಯ ತುಂಬಲು ಪುತ್ತೂರಿನ ಜನ(Puttur People) ಮಹಾಲಿಂಗೇಶ್ವರ ದೇವರ ಮೊರೆ ಹೋಗಿದ್ದಾರೆ. ಭಾರತೀಯ ಸೇನೆ(Indian Army) ನಿನ್ನೆ ತಡರಾತ್ರಿ ಈ ಕಾರ್ಯಾಚರಣೆ ನಡೆಸಿ ಹಲವಾರು ಉಗ್ರ ತಾಣಗಳನ್ನು ಧ್ವಂಸ ಮಾಡಿದೆ. ಈ ದಾಳಿಯನ್ನು ಸಮರ್ಥಿಸಿ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ(Mahatobhara Mahalingeshwar Temple Conservation Committee, Puttur) ವತಿಯಿಂದ ಹತ್ತೂರ ಒಡೆಯನ ಮುಂದೆ ಪ್ರಾರ್ಥನೆ ಸಲ್ಲಿಸಿ ಕೇಂದ್ರ ಸರಕಾರ ಮತ್ತು ಭಾರತೀಯ ಸೇನೆಗೆ ಶಕ್ತಿ ತುಂಬುವಂತೆ ಪ್ರಾರ್ಥಿಸಲಾಗಿದೆ.
ಕಾಶ್ಮೀರದ ಪೆಹಲ್ಗಾಮ್ನಲ್ಲಿ ಉಗ್ರರು ನಡೆಸಿದ್ದ ನರಮೇಧಕ್ಕೆ ಭಾರತೀಯ ಸೇನೆ ಸೂಕ್ತ ಉತ್ತರವನ್ನು ನೀಡಿದೆ. ಮಹಿಳೆಯರ ಮುಂದೆಯೇ ಅವರ ಮನೆಯವರನ್ನು ತಲೆಗೆ ಗುಂಡು ಹೊಡೆದು ಅಮಾನುಷವಾಗಿ ಕೊಂದಿದ್ದ ಉಗ್ರರಿಗೆ ಸೂಕ್ತ ಉತ್ತರವನ್ನು ನೀಡಲಾಗಿದ್ದು, ಇಂತಹ ಕಾರ್ಯಾಚರಣೆಗಳು ಇನ್ನಷ್ಟು ನಡೆಯಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಗಿದೆ.
ಇದೇ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತರು ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆಯನ್ನೂ ಅಭಿನಂಧಿಸಿದ್ದು, ಮಹಿಳೆಯರ ಸಿಂಧೂರ ಅಳಿಸಿದ ಜಿಹಾದಿ ಉಗ್ರರಿಗೆ ಉತ್ತರ ನೀಡಲಾಗಿದೆ. ಸೇನೆಯ ಪರವಾಗಿ ದೇಶದ ಎಲ್ಲಾ ಮಸೀದಿ, ಚರ್ಚ್, ಮಠ-ಮಂದಿರ, ಗುರದ್ವಾರಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಬೇಕೆನ್ನುವ ಒತ್ತಾಯವೂ ಪುತ್ತೂರಿನಿಂದ ಆರಂಭಗೊಂಡಿದೆ.
ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವರು ಅತ್ಯಂತ ಪ್ರಭಾವಿಶಾಲಿ ದೇವರ ಜೊತೆಗೆ ಅತ್ಯಂತ ಪುರಾತನ ದೇವಾಲಯವೂ ಆಗಿದ್ದು, ಇಲ್ಲಿ ಪ್ರಾರ್ಥಿಸಿದ ವಿಚಾರಗಳಲ್ಲಿ ಜಯ ಸಿಗುತ್ತದೆ ಎನ್ನುವ ನಂಬಿಕೆಯೂ ಈ ಭಾಗದಲ್ಲಿದೆ.
Dakshina Kannada,Karnataka
May 08, 2025 10:32 AM IST