Last Updated:
ಬಂದರು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಅತ್ಯುತ್ತಮ ಶಿಕ್ಷಣ ಕೇಂದ್ರಗಳು ಇಲ್ಲಿವೆ ಎನ್ನುವ ಕಾರಣ ಧನಾತ್ಮಕವೇ ಆದರೂ ಜನಾಕರ್ಷಣೆ ಇಲ್ಲಿಯ ಭೌಗೋಳಿಕ ಸ್ವಾಭಾವಿಕ ನೆಲಶಕ್ತಿಯ ಮೇಲೆ ಒತ್ತಡವಾಗಿ ಪರಿಣಮಿಸುತ್ತಿದೆ. ಪರಿಣಾಮ ನೆಲ ಜಲ ಮಣ್ಣು ಎಲ್ಲವೂ ಮಲಿನಗೊಳ್ಳುತ್ತಿದೆ.
ದಕ್ಷಿಣ ಕನ್ನಡ: ನದಿಗಳು(Rivers), ಕೆರೆಗಳು, ತೋಡುಗಳು ಇವೆಲ್ಲವನ್ನೂ ಸೇರಿಸುವ ಸಮುದ್ರದಿಂದ ತುಂಬಿಕೊಂಡು, ಅಪಾರ ಜೀವ ವೈವಿಧ್ಯವನ್ನು ಒಳಗೊಂಡ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆ(Dakshina Kannada District). ಆದರೆ ಜಿಲ್ಲೆಯ ಚಿತ್ರಣ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಜಿಲ್ಲೆಯಲ್ಲಿ ಕೈಗಾರಿಕೆ ಹಾಗೂ ಜನ ಸಾಂದ್ರತೆಯಿಂದ ಆರ್ಥಿಕ ಸಾಮರ್ಥ್ಯ(Financial Capacity) ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮ ಬೆಳವಣಿಗೆಯಾದರೂ, ಜಿಲ್ಲೆಯ ಮೂಲ ಅಸ್ತಿತ್ವವಾದ ಜೀವ ವೈವಿಧ್ಯದ ಶೃಂಖಲೆಯು ಮಾತ್ರ ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯನ್ನು ಮತ್ತೆ ಸಂಪದ್ಭರಿತವನ್ನಾಗಿ ಮಾಡುವ ಉದ್ಧೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್(Green Impact Impact Foundation) ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಉಡುಪಿ, ದಕ್ಷಿಣ ಕನ್ನಡ ಜೋಡಿ ಜಿಲ್ಲೆಗಳಲ್ಲಿ ಸುಮಾರು 22 ನದಿಗಳು ಹರಿಯುತ್ತಿದ್ದರೂ ಬಿರುಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಇದ್ದೇ ಇರುತ್ತದೆ. ಮಳೆಗಾಲ ಆರಂಭದಿಂದ ಮುಗಿಯುವವರೆಗೂ ಎಲ್ಲೆಡೆ ಕೆಂಪು ನೀರು ಹರಿಯುವ ತೊರೆ, ತೋಡು, ಹೊಳೆ, ನದಿಗಳೇ ಇಲ್ಲಿ ಹೆಚ್ಚಾಗಿ ಗೋಚರಿಸುತ್ತವೆ. ಒಂದು ಕಡೆ ಕಡಲು, ಇನ್ನೊಂದು ಕಡೆ ಕಾಡು ಇದ್ದು, ಸುರಕ್ಷಿತ ವಲಯ ಎಂದು ಜಿಲ್ಲೆಯ ಜನ ಭಾವಿಸಿಕೊಂಡರೂ ಜನಸಂಖ್ಯೆಯ ಸಾಂದ್ರತೆ ಇಲ್ಲಿಯ ಜೀವಧಾರಣಾ ಶಕ್ತಿಗೆ ಪೆಟ್ಟು ಕೊಡುತ್ತಿದೆ. ಬಂದರು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಅತ್ಯುತ್ತಮ ಶಿಕ್ಷಣ ಕೇಂದ್ರಗಳು ಇಲ್ಲಿವೆ ಎನ್ನುವ ಕಾರಣ ಧನಾತ್ಮಕವೇ ಆದರೂ ಜನಾಕರ್ಷಣೆ ಇಲ್ಲಿಯ ಭೌಗೋಳಿಕ ಸ್ವಾಭಾವಿಕ ನೆಲಶಕ್ತಿಯ ಮೇಲೆ ಒತ್ತಡವಾಗಿ ಪರಿಣಮಿಸುತ್ತಿದೆ. ಪರಿಣಾಮ ನೆಲ ಜಲ ಮಣ್ಣು ಎಲ್ಲವೂ ಮಲಿನಗೊಳ್ಳುತ್ತಿದೆ.
ಇದು ಸಮಗ್ರ ಜೀವ ಶೃಂಖಲೆಯ ಕೊಂಡಿಯ ಸಂಬಂಧವನ್ನು ತಪ್ಪಿಸಿ,ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ. ತ್ವರಿತ ವೇಗದಲ್ಲಿ ನೀರಿಗೆ ಮತ್ತು ಮಣ್ಣಿಗೆ ಅಪಾರ ಪ್ರಮಾಣದ ತ್ಯಾಜ್ಯವು ನಿರಂತರವಾಗಿ ಸೇರಿಕೊಳ್ಳುತ್ತಿದೆ. ಇದರಿಂದಾಗಿ ನೀರಿನ ಸೆಲೆಗಳಾದ ತೋಡು, ಕೆರೆ, ನದಿ ಮತ್ತು ಸಮುದ್ರ ಮತ್ತು ಫಲವತ್ತಾದ ಮಣ್ಣು ಕೂಡಾ ಮಲಿನಗೊಳ್ಳುತ್ತಿದೆ. ನಮ್ಮ ಭೂಮಿಯನ್ನು ಅದರ ಸಂಪನ್ಮೂಲವನ್ನು ರಕ್ಷಿಸಿ, ನಮ್ಮ ಮುಂದಿನ ತಲೆಮಾರಿಗೆ ಸಂಪದ್ಭರಿತವಾಗಿಯೇ ವರ್ಗಾಯಿಸುವ ಉದ್ಧೇಶದಿಂದ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್ ಈ ಜಾಗೃತಿ ಯೋಜನೆಯನ್ನು ಆರಂಭಿಸಿದೆ.
ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೀರ ಸೆಲೆಗಳ ಅಧ್ಯಯನ, ತ್ಯಾಜ್ಯ ವಿಲೇವಾರಿ ಜಾಗೃತಿ, ಮಣ್ಣಿನ ವೈಜ್ಞಾನಿಕ ಅಧ್ಯಯನ, ಮಣ್ಣಿನ ಕುರಿತಾದ ಜಾಗೃತಿ, ಜಲಾನಯನ ವೈವಿಧ್ಯತೆಯ ಕುರಿತು ಅಧ್ಯಯನ ಇತ್ಯಾದಿ ಕಾರ್ಯ ಚಟುಚಟಿಕೆಗಳು ಈ ಯೋಜನೆ ಮುಖಾಂತರ ನಡೆಯಲಿದೆ. ಜಿಲ್ಲಾಡಳಿತ, ಎನ್ ಎಸ್,ಎಸ್ ಸ್ವಯಂ ಸೇವಕರು, ಎನ್ ಸಿ ಸಿ, ಸಾಮಾಜಿಕ ಸಂಘ ಸಂಸ್ಥೆಗಳು , ಪರಿಸರ ಸಂಘಗಳು, ಶಿಕ್ಷಣ ಸಂಸ್ಥೆಗಳ ಜತೆಗೂಡಿ ಈ ಕಾರ್ಯಕ್ರಮ ನಡೆಯಲಿದೆ. ಈ ಯೋಜನೆಯಲ್ಲಿ ಸಲಹೆಗಾರರಾಗಿ ಡಾ. ನರೇಂದ್ರ ರೈ ದೇರ್ಲ, ಡಾ.ಶ್ರೀಶ ಕುಮಾರ್, ಮಹೇಶ್ ಪುಣ್ಚಪ್ಪಾಡಿ, ಕಾನೂನು ಸಲಹೆಗಾರರಾಗಿ ಕೃಷ್ಣ ಪ್ರಸಾದ್ ನಡ್ಸಾರ್ ಇರುತ್ತಾರೆ ಎಂದು ಯೋಜನೆಯ ರೂವಾರಿ ಹಾಗೂ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಜೇಶ್ ಬೆಜ್ಜಂಗಳ ಈ ಯೋಜನೆಯ ಮೇಲುಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
Dakshina Kannada,Karnataka