Vaibhav Suryavamshi: ವೈಭವ್ ಶತಕದ ಕುರಿತು ಅಸಡ್ಡೆ ಮಾತು, ಗಿಲ್ ವಿರುದ್ಧ ಜಡೇಜಾ ಆಕ್ರೋಶ! ಅಷ್ಟಕ್ಕೂ ಶುಭ್‌ಮನ್ ಹೇಳಿದ್ದೇನು? | Ajay Jadeja lashes out at Gill for his statement on Vaibhav Suryavanshi batting

Vaibhav Suryavamshi: ವೈಭವ್ ಶತಕದ ಕುರಿತು ಅಸಡ್ಡೆ ಮಾತು, ಗಿಲ್ ವಿರುದ್ಧ ಜಡೇಜಾ ಆಕ್ರೋಶ! ಅಷ್ಟಕ್ಕೂ ಶುಭ್‌ಮನ್ ಹೇಳಿದ್ದೇನು? | Ajay Jadeja lashes out at Gill for his statement on Vaibhav Suryavanshi batting

Last Updated:

ವೈಭವ್ ಅವರ ಶತಕವನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಕೂಡ ಮೂಕವಿಸ್ಮಿತರಾಗಿದ್ದಾರೆ. ಆದರೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ವೈಭವ್ ಆಟದ ಕುರಿತು ಅಸಡ್ಡೆ ಮಾತುಗಳನ್ನಾಡಿದರು.

ಶುಭ್‌ಮನ್ ಗಿಲ್-ಸೂರ್ಯವಂಶಿಶುಭ್‌ಮನ್ ಗಿಲ್-ಸೂರ್ಯವಂಶಿ
ಶುಭ್‌ಮನ್ ಗಿಲ್-ಸೂರ್ಯವಂಶಿ

ಐಪಿಎಲ್ 2025 ರಲ್ಲಿ (ಏಪ್ರಿಲ್ 28) ನಡೆದ ರಾಜಸ್ಥಾನ ಮತ್ತು ಗುಜರಾತ್ (RR vs GT) ನಡುವಿನ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ (Vibhav Suryavamshi) ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ವೈಭವ್ 35 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದರು. ಇದು ಐಪಿಎಲ್ (IPL) ಇತಿಹಾಸದಲ್ಲಿ ದಾಖಲಾದ ಎರಡನೇ ವೇಗದ ಶತಕವಾಯಿತು. ವೈಭವ್ (Vaibhav) ಅವರ ಇನ್ನಿಂಗ್ಸ್‌ ಕುರಿತು ಬಹುತೇಕ ಹಿರಿಯ ಕ್ರಿಕೆಟರ್‌ಗಳು ಕೂಡ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಸ್ಟಾರ್ ಕ್ರಿಕೆಟಿಗರಿಂದ ಮೆಚ್ಚುಗೆ

ವೈಭವ್ ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ವೇಗದ ಭಾರತೀಯ ಆಟಗಾರ ಮತ್ತು ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನೂ ವೈಭವ್ ಸೂರ್ಯವಂಶಿ ಅವರ ಇನ್ನಿಂಗ್ಸ್ ಅನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿಂದ ಹಿಡಿದು ರೋಹಿತ್ ಶರ್ಮಾ ವರೆಗೆ ಎಲ್ಲರೂ ಶ್ಲಾಘಿಸಿದ್ದಾರೆ.

ಗಿಲ್ ನೀಡಿದ ಹೇಳಿಕೆಯಿಂದ ಕೆರಳಿದ ಅಜಯ್ ಜಡೇಜಾ

ಮಾತ್ರವಲ್ಲ ವೈಭವ್ ಅವರ ಶತಕವನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಕೂಡ ಮೂಕವಿಸ್ಮಿತರಾಗಿದ್ದಾರೆ. ಆದರೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ವೈಭವ್ ಆಟದ ಕುರಿತು ನೀಡಿರುವ ಹೇಳಿಕೆಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಭ್‌ಮನ್ ಗಿಲ್ ಹೇಳಿದ್ದೇನು?

ವೈಭವ್ ಕೇವಲ 38 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು. ಪಂದ್ಯದ ನಂತರ, ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಅವರನ್ನು ವೈಭವ್ ಸೂರ್ಯವಂಶಿ ಅವರ ಅದ್ಭುತ ಇನ್ನಿಂಗ್ಸ್ ಕುರಿತು ಪ್ರಶ್ನಿಸಿದಾಗ, ಇಂದು ಸೂರ್ಯವಂಶಿ ಅವರ ಅದೃಷ್ಟದ ದಿನ ಎಂದು ಹೇಳಿದರು. “ಅವರು ಹೊಡೆಯುತ್ತಿದ್ದ ಶಾಟ್‌ಗಳನ್ನು ನೋಡಿದ್ರೆ, ಅದ್ಭುತವಾಗಿತ್ತು. ಇಂದು ಅವರ ಅದೃಷ್ಟದ ದಿನವಾಗಿತ್ತು. ಅವರು ತಮ್ಮ ಅದೃಷ್ಟದ ಸಂಪೂರ್ಣ ಲಾಭ ಪಡೆದುಕೊಂಡರು” ಎಂದು ಗಿಲ್ ಉತ್ತರಿಸಿದರು.

ಅಜಯ್ ಜಡೇಜಾ ಟೀಕೆ

ಶುಭಮನ್ ಗಿಲ್ ಹೇಳಿಕೆಯನ್ನು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಟೀಕಿಸಿದ್ದಾರೆ. ಸೂರ್ಯವಂಶಿ ಅವರ ಇನ್ನಿಂಗ್ಸ್ ಅನ್ನು ಅದೃಷ್ಟ ಎಂದು ಕರೆಯುವ ಮೂಲಕ ಗಿಲ್ ಅವರು ಸೂರ್ಯವಂಶಿ ಪ್ರತಿಭೆಯನ್ನು ಅವಮಾನಿಸಿದ್ದಾರೆ. ಅಂತಹ ಆಟಗಾರರನ್ನು ನಾವು ಗೌರವಿಸಬೇಕು ಎಂದು ಜಡೇಜಾ ಹೇಳಿದರು. ಸೂರ್ಯವಂಶಿ ಅವರ ಈ ಇನ್ನಿಂಗ್ಸ್ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿದ್ದಲ್ಲದೆ, ಕ್ರಿಕೆಟ್ ಅಭಿಮಾನಿಗಳು ಮತ್ತು ಅನೇಕ ಅನುಭವಿ ಕ್ರಿಕೆಟಿಗರನ್ನು ಮೆಚ್ಚಿಸಿತು.

ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಸೂರ್ಯವಂಶಿ ಅವರ ಇನ್ನಿಂಗ್ಸ್ ಅನ್ನು ಶ್ಲಾಘಿಸಿದ್ದಾರೆ. ಗುಜರಾತ್ ನೀಡಿದ್ದ 210 ರನ್ ಗಳ ಗುರಿಯನ್ನು ರಾಜಸ್ಥಾನ ತಂಡ 16ನೇ ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ಯಶಸ್ವಿಯಾಗಿ ತಲುಪಿತು.