ಕೇವಲ ಒಂದೂವರೆ ಎಕರೆಯಲ್ಲಿ ದಾಖಲೆಯ 52 ಟನ್ ಕಲ್ಲಂಗಡಿ ಬೆಳೆದ ದಂಪತಿ: ಬಂಪರ್​ ಫಸಲಿಗಾಗಿ ಇವರು ಮಾಡಿದ್ದೇನು? – FARMER COUPLE GROWS WATERMELON

ಕೇವಲ ಒಂದೂವರೆ ಎಕರೆಯಲ್ಲಿ ದಾಖಲೆಯ 52 ಟನ್ ಕಲ್ಲಂಗಡಿ ಬೆಳೆದ ದಂಪತಿ: ಬಂಪರ್​ ಫಸಲಿಗಾಗಿ ಇವರು ಮಾಡಿದ್ದೇನು? – FARMER COUPLE GROWS WATERMELON

ಕೇವಲ ಒಂದೂವರೆ ಎಕರೆಯಲ್ಲಿ ದಾಖಲೆಯ 52 ಟನ್ ಕಲ್ಲಂಗಡಿ

ಬೆಳೆದ ದಂಪತಿ: ಬಂಪರ್​ ಫಸಲಿಗಾಗಿ ಇವರು ಮಾಡಿದ್ದೇನು? – FARMER COUPLE GROWS WATERMELON

Etv Bharat

ಮಹಾರಾಷ್ಟ್ರದ ರೈತ ದಂಪತಿ ತಮ್ಮ ಒಂದೂವರೆ ಎಕರೆಯಲ್ಲಿ 52 ಟನ್ ಕಲ್ಲಂಗಡಿ ಬೆಳೆದು ಆರು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

ನಾಂದೇಡ್(ಮಹಾರಾಷ್ಟ್ರ): ಇಲ್ಲಿನ ರೈತ ದಂಪತಿ ಕೇವಲ ಒಂದೂವರೆ ಎಕರೆ ಜಮೀನಿನಲ್ಲಿ 52 ಟನ್ ಕಲ್ಲಂಗಡಿ ಬೆಳೆದು ಎಲ್ಲರ ಹುಬ್ಬೇರುವಂತೆ

ಮಾಡಿದ್ದಾರೆ. ನೈಗಾಂವ್ ತಾಲೂಕಿನ ಶೆಲ್ಗಾಂವ್ ಛತ್ರಿಯ ಅರ್ಚನಾ ಸಲೆಗಾವೆ ಮತ್ತು ಸಾಗರ್ ಸಲೆಗಾವೆ 52 ಟನ್ ಕಲ್ಲಂಗಡಿ ಬೆಳೆದ ದಂಪತಿ.

ನಾಂದೇಡ್‌ನ ಕಲ್ಲಂಗಡಿ ಕೇರಳಕ್ಕೆ ರಫ್ತು: ಒಂದೂವರೆ ಎಕರೆಯಲ್ಲಿ ಬೆಳೆದ 52 ಟನ್ ಕಲ್ಲಂಗಡಿ ಮಾರಾಟದಿಂದ ಈ ರೈತ ದಂಪತಿ ಆರು ಲಕ್ಷ ರೂಪಾಯಿ

ಆದಾಯ ಗಳಿಸಿದ್ದಾರೆ. ದಂಪತಿ ಬೆಳೆದ ಕಲ್ಲಂಗಡಿಯನ್ನು ಸ್ಥಳೀಯ ವ್ಯಾಪಾರಿ ಮೆಹಬೂಬ್ ಶೇಖ್ ಖರೀದಿ ಮಾಡಿದ್ದಾರೆ.

ನಂತರ ಅವರು ಕೇರಳ ರಾಜ್ಯಕ್ಕೆ ರಫ್ತು ಮಾಡಿದ್ದಾರೆ. ಕೇರಳದಲ್ಲಿ ಮಹಾರಾಷ್ಟ್ರದ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು, ಉತ್ತಮ ಬೆಲೆ ಸಿಗುತ್ತದೆ.

nanded farmer huge success

ಬೇಸಿಗೆಯಲ್ಲಿ ಕಲ್ಲಂಗಡಿಗೆ ಭಾರಿ ಬೇಡಿಕೆ: ಬೇಸಿಗೆಯಲ್ಲಿ ಕಲ್ಲಂಗಡಿಗೆ ಭಾರಿ ಬೇಡಿಕೆ ಇರುತ್ತದೆ. ಹೀಗಾಗಿ ಸಾಗರ್ ದಿಲೀಪ್ ಸಲೆಗಾವೆ ದಂಪತಿ,

ಒಂದೂವರೆ ಎಕರೆ ಜಮೀನಿನಲ್ಲಿ 52 ಟನ್ ಕಲ್ಲಂಗಡಿ ಬೆಳೆದು ದಾಖಲೆ ಬರೆದಿದ್ದಾರೆ. ದಂಪತಿ 2024 ಡಿಸೆಂಬರ್ 8 ರಂದು ಕಲ್ಲಂಗಡಿ ಸಸಿ ನೆಟ್ಟಿದ್ದರು.

ಸಮಯಕ್ಕೆ ಸರಿಯಾಗಿ ಸಸಿಗಳಿಗೆ ಗೊಬ್ಬರ ಮತ್ತು ನೀರು ಒದಗಿಸಿ ಮಕ್ಕಳಂತೆ ನೋಡಿಕೊಂಡಿದ್ದರು.

90 ದಿನಗಳ ನಂತರ ಕಲ್ಲಂಗಡಿ ಫಸಲು ಬಂದಿದ್ದು, ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗಿದೆ. 52 ಟನ್ ಕಲ್ಲಂಗಡಿ

ಮಾರಾಟದಿಂದ ಆರು ಲಕ್ಷ ರೂಪಾಯಿ ಆದಾಯ ಗಳಿಸಿದ ದಂಪತಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.

nanded farmer huge success

ರೈತ ಸಾಗರ್​​​​​​ ಖುಷಿ ಹಂಚಿಕೊಂಡಿದ್ದು ಹೀಗೆ?: ಕಲ್ಲಂಗಡಿ ಬೆಳೆದ ಸಾಗರ್ ದಿಲೀಪ್ ಸಲೆಗಾವೆ ಮಾತನಾಡಿ, “ಕಲ್ಲಂಗಡಿಗೆ ಕೀಟಬಾಧೆ ತಪ್ಪಿಸಲು

ಸೂಕ್ತ ಕ್ರಮಗಳನ್ನು ತೆಗೆದುಕೊಂಡೆವು. ಮೊಸಾಯಿಕ್ ಇದು ಕಲ್ಲಂಗಡಿಗೆ ಸೋಂಕಿ ಹರಡುವ ವೈರಸ್​ ಆಗಿದೆ. ಚದುರಿದ ಕಲೆಗಳು, ಎಲೆಗಳ ಮೇಲೆ

ಚುಕ್ಕೆಗಳು, ಹಣ್ಣುಗಳ ಬಣ್ಣ ಬದಲಾಗುವುದು ಇದರ ಲಕ್ಷಣಗಳಾಗಿವೆ. ಕಲ್ಲಂಗಡಿಗಳ ಮೇಲೆ ಕಡು ಹಸಿರು ಕಲೆಗಳು ಅಥವಾ ಹಣ್ಣುಗಳ ಮೇಲೆ

ಹಳದಿ ಬಣ್ಣದ ಕಲೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ರೋಗ ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡು, ಬೆಳೆಯನ್ನು ಬೆಳೆಯಲಾಯಿತು.

ಇತರ ಕೀಟಗಳಿಂದ ರಕ್ಷಿಸಲು ಆರಂಭದಲ್ಲಿ, ಕಲ್ಲಂಗಡಿಗಳನ್ನು ಪ್ಲಾಸ್ಟಿಕ್‌ನಿಂದ ಮುಚ್ಚಲಾಗಿತ್ತು. ರಸಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಸಿಂಪಡಿಸಿದೆವು .

ಅಲ್ಲದೇ, ಹಸುವಿನ ಸಗಣಿ ಮತ್ತು ಎರೆಹುಳು ಗೊಬ್ಬರ ಬಳಸಿದ್ದರಿಂದ ಉತ್ತಮ ಬೆಳೆ ಬಂತು. ಅಷ್ಟೇ ಅಲ್ಲ ಇದರಿಂದ ದಾಖಲೆಯ ಪ್ರಮಾಣದಲ್ಲಿ ಕಲ್ಲಂಗಡಿ

ಫಸಲು ಬರಲು ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ.

nanded farmer huge success