ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಈಗ ಅವರ ಸಂಬಂಧದಲ್ಲಿ ಬಿರುಕು ಉಂಟಾಗಿದೆಯೆಂದು ತಿಳಿದುಬಂದಿರುವುದು. ಇನ್ನು ಈ ವಿಷಯದ ಕುರಿತು ಇಬ್ಬರೂ ಸಹ ಮೌನವಾಗಿದ್ದಾರೆಯಾದರೂ, ವಿಚ್ಛೇದನದ ಸುದ್ದಿಯೊಂದಿಗೆ ಜೀವನಾಂಶದ ವಿಷಯವೂ ಇತ್ಯರ್ಥವಾಗಿದೆ ಎಂದು ಹೇಳಲಾಗುತ್ತಿದೆ.