ಚೆಸ್ ಚಾಂಪಿಯನ್ ಗುಕೇಶ್ ಸಾಧನೆ ಹಿಂದೆ ಹೆತ್ತವರು; ತಂದೆ-ತಾಯಿ ಮಾಡಿದ ತ್ಯಾಗ ಏನು ಗೊತ್ತಾ? | ಚೆಸ್ ಚಾಂಪಿಯನ್ ಗುಕೇಶ್ ಸಾಧನೆ ಹಿಂದೆ ಹೆತ್ತವರು; ತಂದೆ-ತಾಯಿ ಮಾಡಿದ ತ್ಯಾಗ ಏನು ಗೊತ್ತಾ?

ಚೆಸ್ ಚಾಂಪಿಯನ್ ಗುಕೇಶ್ ಸಾಧನೆ ಹಿಂದೆ ಹೆತ್ತವರು; ತಂದೆ-ತಾಯಿ ಮಾಡಿದ ತ್ಯಾಗ ಏನು ಗೊತ್ತಾ? | ಚೆಸ್ ಚಾಂಪಿಯನ್ ಗುಕೇಶ್ ಸಾಧನೆ ಹಿಂದೆ ಹೆತ್ತವರು; ತಂದೆ-ತಾಯಿ ಮಾಡಿದ ತ್ಯಾಗ ಏನು ಗೊತ್ತಾ?

ಗುಕೇಶ್ ಈ ಸಾಧನೆಯ ಹಿಂದೆ ಅವರ ಕುಟುಂಬದ ಪರಿಶ್ರಮ ಮರೆಯುವಂತಹದ್ದಲ್ಲ. ಗುಕೇಶ್ ತಂದೆ ತಾಯಿ ರಜನಿಕಾಂತ್ ಮತ್ತು ಪದ್ಮಾ ಕುಮಾರಿ ತಮ್ಮ ಮಗನ ಪ್ರತಿ ಪ್ರತಿ ಹೆಜ್ಜೆ ಹೆಜ್ಜೆಗೂ ಜತೆಯಾಗಿ ನಿಂತು ಆತನಿಗೆ ಬೆಂಬಲ ನೀಡಿದ್ದರು. ಮಗನ ಕನಸಿಗೆ ಯಾವುದೇ ಕುಂದು ಉಂಟಾಗದಂತೆ ಪ್ರೋತ್ಸಾಹಿಸಿದರು.

ಬಾಲ್ಯದಲ್ಲಿಯೇ ಚೆಸ್ ಮೇಲೆ ಆಸಕ್ತಿ ಹೊಂದಿದ್ದ ಗುಕೇಶ್

ಗುಕೇಶ್ ಮೊದಲು ಚೆಸ್‌ನಲ್ಲಿ ಆಸಕ್ತಿ ತೋರಿಸಿದಾಗ ಅವನಿಗೆ ಕೇವಲ ಆರು ವರ್ಷ – ಶಾಂತ ಮಗು, ಬೋರ್ಡ್ ಬಗ್ಗೆ ಕುತೂಹಲ ಮತ್ತು ಆಟವಾಡಲು ಉತ್ಸುಕತೆಯನ್ನು ತೋರಿಸುತ್ತಿದ್ದ.

ಗುಕೇಶ್ ಹೆತ್ತವರಾದ ರಜನಿಕಾಂತ್ ಮತ್ತು ಪದ್ಮಾ ಕುಮಾರಿ ಮಗುವಿಗೆ ಚೆಸ್ ಮೇಲಿರುವ ಆಸಕ್ತಿಯನ್ನು ವಿಭಿನ್ನವಾಗಿ ಕಂಡರು. ಅವರು ಮೊದಲ ದಿನದಿಂದಲೇ ಮಗುವಿಗೆ ಬೆಂಬಲ ನೀಡಿದರು.

ತಮ್ಮ ಮಗನಿಗಾಗಿ ತ್ಯಾಗಗಳನ್ನು ಮಾಡಿದ್ದಾರೆ, ರಾತ್ರಿ ಹಗಲೆನ್ನದೆ ಅವನ ಬೆನ್ನುಲುಬಾಗಿ ನಿಂತಿದ್ದಾರೆ. ಗುಕೇಶ್‌ಗೆ ಚೆಸ್ ಮೇಲೆ ನಿಜವಾದ ಆಸಕ್ತಿ ಇದೆ ಎಂಬುದನ್ನು ಗೊತ್ತುಪಡಿಸಿಕೊಂಡರು.

ಡಿ ಗುಕೇಶ್

ಮಗನೊಂದಿಗೆ ಪ್ರಯಾಣ ಬೆಳೆಸುತ್ತಿದ್ದ ತಂದೆ

ವರ್ಷಗಳ ಹಿಂದೆ, ಗುಕೇಶ್ ಅವರ ಚೆಸ್ ಪ್ರೀತಿ ಹವ್ಯಾಸಕ್ಕಿಂತ ಹೆಚ್ಚಾದಾಗ, ಅವರ ತಂದೆ ರಜನಿಕಾಂತ್ ಅವರು ಇಎನ್ಟಿ ಶಸ್ತ್ರಚಿಕಿತ್ಸಕ ವೃತ್ತಿಯಿಂದ ದೂರ ಸರಿದು ಮಗನೊಂದಿಗೆ ಪ್ರಯಾಣ ಬೆಳೆಸಿದರು.

ಸ್ಥಳೀಯ ಪಂದ್ಯಾವಳಿಗಳಿಂದ ಜಾಗತಿಕ ಚಾಂಪಿಯನ್‌ಶಿಪ್‌ಗಳವರೆಗೆ ಅವರು ಯಾವಾಗಲೂ ಗುಕೇಶ್ ಅವರ ಪಕ್ಕದಲ್ಲಿದ್ದರು. ಗುಕೇಶ್ ತಾಯಿ ಪದ್ಮಾ ಕುಮಾರಿ ಕುಟುಂಬದ ಸ್ಥಿರ ಆಧಾರಸ್ತಂಭವಾದರು, ಹಣಕಾಸು ನಿರ್ವಹಿಸುತ್ತಿದ್ದರು.

ಮನೆಯನ್ನು ಜವಾಬ್ದಾರಿಯನ್ನು ಜತೆಗೆ ನಿರ್ವಹಿಸಿಕೊಂಡು ತನ್ನ ಮಗನ ಬೆಳವಣಿಗೆಗೆ ಏನೂ ಅಡ್ಡಿಯಾಗದಂತೆ ನೋಡಿಕೊಂಡರು.

ಮನೆಯ ನಿರ್ವಹಣೆ ತಾಯಿ ಪದ್ಮಾ ಕುಮಾರಿ ಹೆಗಲೇರಿತು

ಅವರಿಗೆ ಯಾವುದೇ ಪ್ರಾಯೋಜಕತ್ವ ದೊರೆಯುತ್ತಿರಲಿಲ್ಲ. ಅದಾಗ್ಯೂ ಗುಕೇಶ್ ತಂದೆ ತಾಯಿ ತಮ್ಮ ಮಗನ ಪ್ರಯಾಣ ಯೋಜನೆಗಳನ್ನು ಸರಿಹೊಂದಿಸುವುದು, ಸೌಕರ್ಯಗಳನ್ನು ಕಡಿತಗೊಳಿಸುವುದು ಅಥವಾ ದೀರ್ಘಾವಧಿಯ ದೂರಪ್ರಯಾಣದ ಸಿದ್ಧತೆಗಳನ್ನು ಮಾಡುತ್ತಿದ್ದರು. ಒಟ್ಟಿನಲ್ಲಿ ಆರ್ಥಿಕ ಸವಾಲುಗಳು ಮಗನ ಸಾಧನೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದರು.

Do you know the world chess championd gukesh net worth and prize money

ಡಿ ಗುಕೇಶ್

ಪತಿ ಹಾಗೂ ಮಗ ದೂರದೂರುಗಳಿಗೆ ಪ್ರಯಾಣಿಸುವಾಗ ಪದ್ಮಾ ಏಕಾಂಗಿಯಾಗಿಯೇ ದಿನಗಳೆಯುತ್ತಿದ್ದರು. ತಮ್ಮ ಮನೆ ಶಾಂತವಾಗಿ ಹಾಗೂ ಶಕ್ತಿಯ ದ್ಯೋತಕವಾಗಿರುವಂತೆ ನೋಡಿಕೊಂಡರು.

ಇನ್ನು ರಜನೀಕಾಂತ್ ತಮ್ಮ ಮಗನ ಏಳು ಬೀಳುಗಳಲ್ಲಿ ಆತನ ಜತೆಯಾಗಿ ನಿಂತರು. ಆತನ ಕಷ್ಟದ ದಿನಗಳಲ್ಲಿ ಕೂಡ ಧೈರ್ಯ ತುಂಬುತ್ತಿದ್ದರು, ಇನ್ನಷ್ಟು ಹುರಿದುಂಬಿಸುತ್ತಿದ್ದರು.

ತಂದೆ ತಾಯಿಯ ಪ್ರೋತ್ಸಾಹ, ಬೆಂಬಲ ಮರೆಯುವುದಿಲ್ಲ

ಇಂದು, ಗುಕೇಶ್ ವಿಶ್ವವೇ ಗೌರವಿಸುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಕೂಡ ತಮ್ಮ ಹೆತ್ತವರ ತ್ಯಾಗ, ಕಷ್ಟಗಳನ್ನು ಮರೆತಿಲ್ಲ ಅವರಿಲ್ಲ ಎಂದಾದರೆ ತಾನು ಇಂದು ಈ ಸ್ಥಾನದಲ್ಲಿರಲು ಸಾಧ್ಯವೇ ಇರಲಿಲ್ಲ ಎಂಬುದು ಗುಕೇಶ್ ಮಾತಾಗಿದೆ.

ಪ್ರತಿ ಹೆಜ್ಜೆಯಲ್ಲೂ ಅವನನ್ನು ರೂಪಿಸಿದ ಇಬ್ಬರು ವ್ಯಕ್ತಿಗಳ ಶಾಂತ ಶಕ್ತಿಯನ್ನು ಗುಕೇಶ್ ತನ್ನೊಂದಿಗೆ ಇರಿಸಿಕೊಂಡಿದ್ದಾನೆ. ತಂದೆ ತಾಯಿಯೇ ತನಗೆ ಸ್ಫೂರ್ತಿ, ಬೆಂಬಲ ಎಂದಿರುವ ಗುಕೇಶ್ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾ ಸುಖ ಸೌಲಭ್ಯಗಳನ್ನು ಬದಿಗಿರಿಸಿ ದಂಪತಿಗಳು ತಮ್ಮ ಮಗನಿಗಾಗಿ ಶ್ರಮಿಸಿದ್ದಾರೆ. ಆತನ ಹೆತ್ತವರು ಮಗನ ಕನಸನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ಅದು ಗಿಡವಾಗಿ ಹೆಮ್ಮರವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟರು.