ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ, ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ- ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: NDRF team arrives in Dakshina Kannada district – flood management begins

ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ, ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ NDRF ತಂಡ- ಪ್ರವಾಹ ನಿರ್ವಹಣೆ ಪ್ರಾರಂಭ | Monsoon Rains: NDRF team arrives in Dakshina Kannada district – flood management begins

Last Updated:

NDRF ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಭಾರೀ ಮಳೆಯ ಪರಿಣಾಮದ ಪ್ರಕೃತಿ ವಿಕೋಪ ನಿರ್ವಹಣೆಗೆ ಸಿದ್ಧವಾಗಿದೆ. 25 ಸದಸ್ಯರ ತಂಡ ಪುತ್ತೂರಿನಲ್ಲಿ ಕೇಂದ್ರವಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಾದ್ಯಂತ(Coastal) ಕಳೆದ ಒಂದು ವಾರದಿಂದೀಚೆಗೆ ಭಾರೀ ಮಳೆಯಾಗುತ್ತಿದೆ(Rainy Season). ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(Dakshina Kannada District) ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಮಸ್ಯೆ ಎದುರಿಸುವವರ ಸಂಖ್ಯೆಯೂ ಹೆಚ್ಚು. ಅದರಲ್ಲೂ ಜಿಲ್ಲೆಯಾದ್ಯಂತ ನೂರಾರು ಸಂಖ್ಯೆಯ ನದಿ-ತೊರೆಗಳಿದ್ದು, ಮಳೆಗಾಲದಲ್ಲಿ ಈ ನದಿ- ತೊರೆಗಳಲ್ಲಿ ಹೆಚ್ಚಿನ ನೀರು ಹರಿದು ಪ್ರವಾಹದ ಸ್ಥಿತಿಯೂ ಉಂಟಾಗುತ್ತದೆ. ಅದರಲ್ಲೂ ಪುತ್ತೂರು, ಬೆಳ್ತಂಗಡಿ, ಕಡಬ,ಸುಳ್ಯ ಮತ್ತು ಬಂಟ್ವಾಳ ತಾಲೂಕಿನಾದ್ಯಂತ ಈ ಸಮಸ್ಯೆಗಳಿದ್ದು, ಈ ಸಂಕಷ್ಟ ಪರಿಸ್ಥಿತಿಯ ನಿರ್ವಹಣೆಗಾಗಿ ಮುಂಗಾರು ಮಳೆ(Monsoon Rains) ಆರಂಭಕ್ಕೆ ಮೊದಲೇ ಜನರ ಜೀವರಕ್ಷಣೆಗೆಂದೇ ಸಿದ್ಧಗೊಂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಜಿಲ್ಲೆಗೆ ಆಗಮಿಸಿದೆ.

ಸುಮಾರು 25 ಸದಸ್ಯರನ್ನೊಳಗೊಂಡ ಈ ತಂಡ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಅನಾಹುತಗಳ ನಿರ್ವಹಣೆಯನ್ನು ಮಾಡಲಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗೆ ಈಗಾಗಲೇ ಆಗಮಿಸಿರುವ ಎರಡು ಪ್ರತ್ಯೇಕ ತಂಡಗಳು ತಮ್ಮ ಜೊತೆಗೆ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನೂ ತಂದಿವೆ. ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಣೆ ನಡೆಸಲಿರುವ ಈ ತಂಡಕ್ಕೆ ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ತಂಗಲು ವ್ಯವಸ್ಥೆಯನ್ನು ಜಿಲ್ಲಾಡಳಿತದ ಮೂಲಕ ಮಾಡಲಾಗಿದೆ.

25 ಸದಸ್ಯರ ಜೊತೆಗೆ ಈ ತಂಡದಲ್ಲಿ ಒಂದು ನಾಯಿ ಕೂಡಾ ಇದ್ದು, ಈ ನಾಯಿಯ ಜವಾಬ್ದಾರಿಯೂ ವಿಶೇಷವಾದುದ್ದಾಗಿದೆ‌. ಜರ್ಮನ್ ಶೆಫರ್ಡ್ ಜಾತಿಗೆ ಸೇರಿದ ಈ ನಾಯಿ ವಿಪತ್ತು ತಂಡ ಕಾರ್ಯಾಚರಣೆಗೆ ತೆರಳುವ ಸಂದರ್ಭದಲ್ಲಿ ತಂಡದ ಜೊತೆಗೆ ತೆರಳಲಿದೆ. ಕೆಲವು ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಈ ನಾಯಿಯನ್ನು ಬಳಕೆ ಮಾಡಲಾಗುತ್ತಿದ್ದು, ಭೂಕುಸಿತ ಅಥವಾ ಜನರ ಪ್ರಾಣಹಾನಿ ಸಂಭವಿಸುವಂತಹ ಘಟನೆಗಳು ನಡೆದಾಗ ಈ ನಾಯಿಯನ್ನು ಹೆಚ್ಚಾಗಿ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. ಮಣ್ಣಿನಡಿಗೆ ಸಿಲುಕಿಕೊಂಡವರನ್ನು ಪತ್ತೆಹಚ್ಚುವ ಕೆಲಸವನ್ನು ಈ ನಾಯಿ ಮಾಡುವುದಲ್ಲದೆ, ಅವರ ರಕ್ಷಣೆಯಲ್ಲೂ ಇದರ ಪಾತ್ರ ಪ್ರಮುಖವಾಗಿದೆ.

ಅದಲ್ಲದೆ ಈ ತಂಡದಲ್ಲಿ ಪ್ರವಾಹ ಭೀತಿ ಎದುರಾದ ಪ್ರದೇಶಗಳಲ್ಲಿ ಬಳಸಲು ಬೋಟ್ ವ್ಯವಸ್ಥೆ, ಮರ- ಮುಟ್ಟುಗಳನ್ನು ಕಡಿಯಲು ಬೇಕಾದ ವಿಶೇಷ ಕಟ್ಟಿಂಗ್ ಮಿಷಿನ್‌ಗಳು, ಸೇಫ್ ಗಾರ್ಡ್ ಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳೂ ಇವೆ. ರಾಜ್ಯಕ್ಕೆ ಬಂದ ಈ ಎರಡು ತಂಡ ಆಂಧ್ರ ಪ್ರದೇಶದ ರಾಯಗಢದಿಂದ ಬಂದಿದ್ದು, ಈ ತಂಡದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳಾದ ಸಿ.ಆರ್.ಪಿ.ಎಫ್, ಬಿ.ಎಸ್.ಎಫ್, ಸಿ.ಐ.ಎಸ್.ಎಫ್ ನಿಂದ ಆಯ್ಕೆ ಮಾಡಿದ ಯೋಧರೇ ಇದ್ದು, ಎಂತಹ ಕಠಿಣ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಈ ದಳ ಹೊಂದಿದೆ.