DC vs LSG: 14 ಕೋಟಿ ಕೊಟ್ರು ಮೊದಲ ಪಂದ್ಯದಲ್ಲಿ ಯಾಕೆ ಆಡ್ತಿಲ್ಲ ಕೆಎಲ್‌ ರಾಹುಲ್‌? ಇದೇ ಕಾರಣ Why is KL Rahul Missing DC vs LSG IPL 2025 Opener? Reason Here/

DC vs LSG: 14 ಕೋಟಿ ಕೊಟ್ರು ಮೊದಲ ಪಂದ್ಯದಲ್ಲಿ ಯಾಕೆ ಆಡ್ತಿಲ್ಲ ಕೆಎಲ್‌ ರಾಹುಲ್‌? ಇದೇ ಕಾರಣ Why is KL Rahul Missing DC vs LSG IPL 2025 Opener? Reason Here/

ರಾಹುಲ್‌ ಯಾಕೆ ಇಂದು ಆಡ್ತಿಲ್ಲ?

ಮಾರ್ಚ್ 30 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಡಿಸಿಯ ಎರಡನೇ ಪಂದ್ಯಕ್ಕೆ ರಾಹುಲ್ ಹಿಂತಿರುಗುವ ನಿರೀಕ್ಷೆಯಿದೆ. ಇನ್ನೂ ರಾಹುಲ್‌ ತಮ್ಮ ಪತ್ನಿ ಅತಿಯಾ ಶೆಟ್ಟಿ ಪ್ರೆಗ್ನೆಂಟ್ ಇರೋದ್ರಿಂದ ಇಂದು ಅವರ ಜೊತೆಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಹೆಂಡತಿ ಜೊತೆ ಇರಲು ನಿರ್ಧರಿಸಿದ್ದಾರಂತೆ ಕೆ ಎಲ್‌ ರಾಹುಲ್‌.

ಭಾರತದ ಇತ್ತೀಚಿನ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಹುಲ್, ಸೋಮವಾರ ವಿಶಾಖಪಟ್ಟಣದಲ್ಲಿ ತಮ್ಮ ಹಿಂದಿನ ಫ್ರಾಂಚೈಸಿ ಲಕ್ನೋ ವಿರುದ್ಧದ ದೆಹಲಿಯ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಆಡ್ತಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್(ವಿಕೆಟ್ ಕೀಪರ್), ಸಮೀರ್ ರಿಜ್ವಿ, ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್.

ಇದನ್ನೂ ಓದಿ: ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಗುಡ್‌ ಮೂವ್‌! ತವರಲ್ಲೇ ಗೆದ್ದು ಬೀಗೋ ತವಕದಲ್ಲಿ ಪಂತ್‌!

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್(w/c), ಡೇವಿಡ್ ಮಿಲ್ಲರ್, ಪ್ರಿನ್ಸ್ ಯಾದವ್, ದಿಗ್ವೇಶ್ ರಾಠಿ, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್.

ವಿಶಾಖಪಟ್ಟಣಂನ ಪಿಚ್‌ ವರದಿ!

ವಿಶಾಖಪಟ್ಟಣಂನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಅನುಕೂಲವಾಗಿರುತ್ತದೆ. ಮೊದಲ ಇನಿಂಗ್ಸ್ ಸರಾಸರಿ ಸ್ಕೋರ್ ಸುಮಾರು 170 ರನ್‌ಗಳಾಗಿರುತ್ತದೆ. ಸ್ಪಿನ್ ಬೌಲರ್‌ಗಳಿಗೆ ಆರಂಭದಲ್ಲಿ ಸ್ವಲ್ಪ ಸಹಾಯ ದೊರಕಬಹುದು. ಆದರೆ ಒಟ್ಟಾರೆ ಉತ್ತಮ ಸ್ಕೋರ್ ಮಾಡಲು ಹೆಚ್ಚು ಅವಕಾಶವಿದೆ.

ಡೆಲ್ಲಿ ಕ್ಯಾಪಿಟಲ್ಸ್‌‌ ನಾಯಕ ಹೇಳಿದ್ದೇನು?

“ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಇದು ಇಬ್ಬನಿ ಅಂಶ, ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ, ಅದಕ್ಕಾಗಿ ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ನಾನು ಪಂತ್ ಜೊತೆ ಹಿಂದಿನಿಂದ ಆಡಿದ್ದೇನೆ, ಅವರು ನನ್ನನ್ನು ತಿಳಿದಿದ್ದಾರೆ ಮತ್ತು ನಾನು ಅವರನ್ನು ತಿಳಿದಿದ್ದೇನೆ. ನಮಗೆ ನಮ್ಮ ತಂತ್ರಗಳು ಗೊತ್ತಿವೆ. ನಾನು ಕ್ಯಾಪಿಟಲ್ಸ್ ಪರ ಬಹಳಷ್ಟು ಆಡಿದ್ದೇನೆ, ನಮಗೆ ಸಮತೋಲಿತ ತಂಡವಿದೆ. ಕೆಲವೊಮ್ಮೆ ಇಬ್ಬನಿ ಬೀಳುತ್ತದೆ, ಯಾವಾಗಲೂ ಅಲ್ಲ. ನಾನು ಮೂರು ವರ್ಷಗಳಿಂದ ಡಿಸಿ ಜೊತೆಗಿದ್ದೇನೆ, ನಾನು ನಾಯಕತ್ವದ ಗುಂಪಿನಲ್ಲಿದ್ದೇನೆ” ಎಂದು ಅಕ್ಷರ್‌ ಪಟೇಲ್‌ ಹೇಳಿದರು.