Last Updated:
ದಿನದಲ್ಲಿ ದುಡಿದ ಬಾಡಿಗೆ ಹಣದಲ್ಲಿ ಒಂದು ಪಾಲು ಕಾರ್ಯಕ್ರಮಕ್ಕೆ ಆಟೋ ಚಾಲಕರು ಮೀಸಲಿಡುತ್ತಾರೆ. ಎಲ್ಲಾ ಜಾತಿ, ಧರ್ಮದ ಜನರನ್ನು ಇಫ್ತಾರ್ ಕಾರ್ಯಕ್ರಮಕ್ಕೆ ಅಹ್ವಾನಿಸಿ, ಒಟ್ಟಿಗೆ ಕುಳಿತು ಇಫ್ತಾರ್ ಮಾಡುತ್ತಾರೆ.
ಮಂಗಳೂರು: ಕರಾವಳಿಗೆ (Coastal Karnataka ) ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಇದೆ. ಆದರೆ ಆ ಹಣೆಪಟ್ಟಿಯನ್ನು ಅಳಿಸು ಹಾಕುವ ಕೆಲಸ ಸದ್ದಿಲ್ಲದೇ ನಡೆಯುತ್ತಲೇ ಇದೆ. ಮಂಗಳೂರು ನಗರ (Mangaluru) ಹೊರವಲಯದ ಮುಡಿಪು ಪ್ರದೇಶದ ಆಟೋ ರಾಜಾ ಕನ್ಮಾರ್ ಆಟೋ ಬಳಗದಿಂದ (Auto Raja Kanmar Auto Group) ಸೌಹಾರ್ದ ಇಫ್ತಾರ್ ಕೂಟ (Iftar Party) ನಡೆಸಿ ಮಾದರಿಯಾಗಿದೆ.
ಕಳೆದ ಎಂಟು ವರ್ಷದಿಂದ ಸಮಾಜ ಸೇವಾ ಚಟುವಟಿಕೆಗಳನ್ನು ಈ ಬಳಗ ಮಾಡಿಕೊಂಡು ಬರುತ್ತಿದೆ. ಕಳೆದ ಎರಡು ವರ್ಷಗಳಿಂದ ರಂಜಾನ್ ಸಮಯದಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಸುತ್ತಿದೆ. ಈ ಆಟೋ ಬಳಗದಲ್ಲಿ 70 ಆಟೋ ಚಾಲಕರು ಸೇರಿದಂತೆ, ಬರೋಬ್ಬರಿ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಕಳೆದ ಐದು ವರ್ಷಗಳಿಂದ ಇಫ್ತಾರ್ ಕೂಟ ಸರಳವಾಗಿ ನಡೆಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಅದ್ಧೂರಿಯಾಗಿ ಇಫ್ತಾರ್ ಕೂಟ ನಡೆಸಲಾಗುತ್ತಿದೆ. ಎಲ್ಲಾ ಆಟೋ ಚಾಲಕರು ಸೇರಿ ಈ ಇಫ್ತಾರ್ ಕೂಟ ಆಯೋಜನೆ ಮಾಡುತ್ತಾರೆ.
ದಿನದಲ್ಲಿ ದುಡಿದ ಬಾಡಿಗೆ ಹಣದಲ್ಲಿ ಒಂದು ಪಾಲು ಕಾರ್ಯಕ್ರಮಕ್ಕೆ ಆಟೋ ಚಾಲಕರು ಮೀಸಲಿಡುತ್ತಾರೆ. ಎಲ್ಲಾ ಜಾತಿ, ಧರ್ಮದ ಜನರನ್ನು ಇಫ್ತಾರ್ ಕಾರ್ಯಕ್ರಮಕ್ಕೆ ಅಹ್ವಾನಿಸಿ, ಒಟ್ಟಿಗೆ ಕುಳಿತು ಇಫ್ತಾರ್ ಮಾಡುತ್ತಾರೆ.
ಇದನ್ನೂ ಓದಿ: Mysuru: ಬೇಸಿಗೆಯಲ್ಲೂ ಕೂಲ್ ಕೂಲ್ ಆಗಿರುತ್ತೆ ಮೈಸೂರಿನ ಈ ಮನೆ; ಇಲ್ಲಿದೆ ನೋಡಿ ಕಾರಣ!
ಆಟೋ ಚಾಲಕರ ಸಮಸ್ಯೆಗಳಿಗೆ ಈ ಬಳಗ ಸ್ಪಂದನೆ ಮಾಡುತ್ತಿದೆ. ರಕ್ತದಾನ ಶಿಬಿರ, ಮದುವೆ, ಚಾಲಕರ ಸಹೋದರಿಯರ ಮದುವೆಗೆ ನೆರವವನ್ನು ಈ ಬಳಗ ನೀಡುತ್ತಿದೆ. ಒಟ್ಟಿನ್ನಲ್ಲಿ ಕೋಮು ಸೌಹಾರ್ದ ವನ್ನು ಬೆಳೆಸುವಂತಹ ಕೆಲಸವನ್ನು ಆಟೋ ಚಾಲಕರು ಮಾಡುತ್ತಿದ್ದು, ಈ ಕೆಲಸ ಮತ್ತಷ್ಟು ನಡೆಯಲಿ ಎಂಬುವುದು ಸಾರ್ವಜನಿಕರ ಆಶಯವಾಗಿದೆ.
Dakshina Kannada,Karnataka
March 28, 2025 9:18 AM IST