Bannanje Govindacharya: ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ದಾರ್ಶನಿಕರಿಗೆ ಗೌರವ, ಬನ್ನಂಜೆ ಅವರಿಗೆ 90ರ ನಮನ! | ದಕ್ಷಿಣ ಕನ್ನಡ

Bannanje Govindacharya: ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ದಾರ್ಶನಿಕರಿಗೆ ಗೌರವ, ಬನ್ನಂಜೆ ಅವರಿಗೆ 90ರ ನಮನ! | ದಕ್ಷಿಣ ಕನ್ನಡ

Last Updated:

ಬನ್ನಂಜೆ ಗೋವಿಂದಾಚಾರ್ಯರ 90ನೇ ವರ್ಷದ ನೆನಪಿಗಾಗಿ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ದೇಶದಾದ್ಯಂತ ವಿಶ್ವ ಬನ್ನಂಜೆ 90 ರ ನಮನ ಕಾರ್ಯಕ್ರಮಗಳನ್ನು ಉಡುಪಿ മുതൽ ಹರಿದ್ವಾರವರೆಗೆ ಆಯೋಜಿಸಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ, ಕಾದಂಬರಿಕಾರ (Novelist), ಪತ್ರಕರ್ತ (Journalist) ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿರುವ ಬನ್ನಂಜೆ ಗೋವಿಂದಾಚಾರ್ಯರ (Bannanje Govindacharya) ನೆನಪಿಗಾಗಿ ಈ ವರ್ಷ ವಿಶ್ವ ಬನ್ನಂಜೆ 90 ರ ನಮನ ಎನ್ನುವ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಆಯೋಜಿಸಲು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ) ಬೆಂಗಳೂರು ಉದ್ದೇಶಿಸಿದೆ. ಬನ್ನಂಜೆ ಗೋವಿಂದಾಚಾರ್ಯರು ಬದುಕುಳಿಯುತ್ತಿದ್ದಲ್ಲಿ ಅಕ್ಟೋಬರ್ ಅವರಿಗೆ 90 ವರ್ಷಗಳಾಗುತ್ತದೆ (90 Years) ಎನ್ನುವ ಕಾರಣಕ್ಕೆ ವಿಶ್ವ ಬನ್ನಂಜೆ 90 ರ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದೇಶದ ಎಲ್ಲೆಡೆ ಸುಮಾರು 20 ಕಾರ್ಯಕ್ರಮ

ಈಗಾಗಲೇ ದೇಶದ ಎಲ್ಲೆಡೆ ಸುಮಾರು 20 ಕಾರ್ಯಕ್ರಮಗಳನ್ನು ನಡೆಸಲು ಪ್ರತಿಷ್ಠಾನ ತೀರ್ಮಾನಿಸಿದ್ದು, ಬನ್ನಂಜೆಯವರ ತವರು ಜಿಲ್ಲೆ ಉಡುಪಿಯಿಂದ ಈ ಕಾರ್ಯಕ್ರಮಗಳು ಆರಂಭಗೊಂಡು ಹರಿದ್ವಾರದವರೆಗೆ ಈ ಕಾರ್ಯಕ್ರಮಗಳು ನಡೆಯಲಿವೆ. ಉಡುಪಿ, ಎಂ.ಜಿ.ಎಂ, ಮೂಡಬಿದಿರೆ, ಮಂಗಳೂರು, ಸುಬ್ರಹ್ಮಣ್ಯ, ಪುತ್ತೂರು, ಗುಲ್ಬರ್ಗಾ,ಬಿಜಾಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಬನ್ನಂಜೆ ನಮನ ಕಾರ್ಯಕ್ರಮಗಳು ನಡೆಯಲಿದ್ದು, ಬನ್ನಂಜೆ ಅಭಿಮಾನಿಗಳು ದೇಶದೆಲ್ಲೆಡೆ ಈ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು, ಹರಿದ್ವಾರದಲ್ಲಿ ಕೊನೆಯ ಕಾರ್ಯಕ್ರಮ ನಡೆಯಲಿದೆ.

ವಿವಿಧ ಕ್ಷೇತ್ರಗಳ ಸಾಧನೆ

ಓರ್ವ ಪ್ರಖ್ಯಾತ ಪ್ರವಚನಕಾರರಾಗಿಯೂ ಗುರುತಿಸಿಕೊಂಡಿದ್ದ ಬನ್ನಂಜೆ ಗೋವಿಂದಾಚಾರ್ಯರು ದೇಶದೆಲ್ಲೆಡೆ ಸಂಚರಿಸಿ ತಮ್ಮ ಅಗಾಧ ಪಾಂಡಿತ್ಯವನ್ನು ತಮ್ಮ ಅನುಯಾಯಿಗಳಿಗೆ ಧಾರೆ ಎರೆದಿದ್ದಾರೆ. ಶಂಕರಾಚಾರ್ಯ, ಮಧ್ವಾಚಾರ್ಯರ ಕೃತಿಗಳನ್ನು ಸಿನಿಮಾ ರೂಪಕ್ಕೆ ಭಾಷಾಂತರಿಸಿದ್ದ ಬನ್ನಂಜೆ , ಉಡುಪಿಯ ಪಲಿಮಾರು ಮಠದಲ್ಲಿದ್ದ ಸುಮಾರು 500 ವರ್ಷಗಳ ಹಳೆಯದಾದ ತಾಳೆಗರಿ ಲಿಪಿಗಳನ್ನು ಭಾಷಾಂತರಿಸಿ,