Good News: ಹಸಿರು ನೆಟ್‌ ನಲ್ಲಿ ಕಂಗೊಳಿಸುತ್ತಿದೆ ಮಂಗಳೂರಿನ ಹೆದ್ದಾರಿ! ಅರಣ್ಯ ಇಲಾಖೆ ಮಾಡಿದ ಮಹತ್ವದ ನಿರ್ಧಾರವಿದು..! | Mangaluru Kadur highway Forest Department unveils plan to plant 4000 trees | ದಕ್ಷಿಣ ಕನ್ನಡ

Good News: ಹಸಿರು ನೆಟ್‌ ನಲ್ಲಿ ಕಂಗೊಳಿಸುತ್ತಿದೆ ಮಂಗಳೂರಿನ ಹೆದ್ದಾರಿ! ಅರಣ್ಯ ಇಲಾಖೆ ಮಾಡಿದ ಮಹತ್ವದ ನಿರ್ಧಾರವಿದು..! | Mangaluru Kadur highway Forest Department unveils plan to plant 4000 trees | ದಕ್ಷಿಣ ಕನ್ನಡ

Last Updated:

ಮಂಗಳೂರು-ಕಡೂರು ಹೆದ್ದಾರಿ ಅಗಲೀಕರಣದ ಬಳಿಕ ವೇಣೂರು ವಲಯ ಅರಣ್ಯ ಇಲಾಖೆ 1200 ಗಿಡಗಳನ್ನು ನೆಟ್ಟು, 4000 ಗಿಡಗಳ ಯೋಜನೆ ರೂಪಿಸಿದೆ. ಹಸಿರು ನೆಟ್ ಸಂರಕ್ಷಣೆ ವಿಶೇಷ ಆಕರ್ಷಣೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಹೊಸ ರಸ್ತೆ (New Road) ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯೋದು ಸಾಮಾನ್ಯ. ಮರಗಳನ್ನು (Tree)  ಕಡಿದು ರಸ್ತೆ ನಿರ್ಮಿಸಿದ ಬಳಿಕ ಮತ್ತೆ ರಸ್ತೆ ಪಕ್ಕದಲ್ಲಿ ಮರ-ಗಿಡಗಳನ್ನು ನೆಡುವ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ (Forest Department) ಮಾಡುತ್ತದೆ. ಕಳೆದ ಹಲವಾರು ವರ್ಷಗಳಿಂದ ಇದೇ ರೀತಿಯ ಕೆಲಸವನ್ನು ಅರಣ್ಯ ಇಲಾಖೆ ನಿರ್ವಹಿಸಿಕೊಂಡು ಬಂದಿದೆ.

ಕಡಿದಲ್ಲೇ ಚಿಗುರಿತಿಹವು ಸಾವಿರಾರು ವೃಕ್ಷ ಸಂತತಿ

ಅದೇ ಪ್ರಕಾರ ಇದೀಗ ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಈ ರಸ್ತೆಗಾಗಿ ಹಲವಾರು ಮರಗಳನ್ನು ಕಡಿಯಲಾಗಿದೆ. ರಸ್ತೆಯ ಪಕ್ಕದಲ್ಲಿದ್ದ ಮರಗಳನ್ನು ಕಡಿದ ಬಳಿಕ ಆ ಭಾಗದಲ್ಲಿ ಮತ್ತೆ ಗಿಡಗಳನ್ನು ನೆಡುವ ಪ್ರಕ್ರಿಯೆ ಆರಂಭಗೊಂಡಿದೆ. ಪೂಂಜಾಲುಕಟ್ಟೆಯಿಂದ ಗುರುವಾಯನಕೆರೆ ತನಕ ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿರುವ ಗಿಡಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿಯೂ ಗುರುತಿಸಲ್ಪಟ್ಟಿದೆ. ವೇಣೂರು ವಲಯ ಅರಣ್ಯ ಇಲಾಖೆ ವತಿಯಿಂದ ಈ ಗಿಡಗಳನ್ನು ನೆಡುವ ಕಾರ್ಯ ಆರಂಭವಾಗಿದ್ದು, ಈಗಾಗಲೇ ಸುಮಾರು 1200 ಗಿಡಗಳನ್ನು ಹೆದ್ದಾರಿಯ ಎರಡೂ ಪಕ್ಕದಲ್ಲಿ ನೆಡಲಾಗಿದೆ.

ಹೆದ್ದಾರಿ ಪಕ್ಕದ ಪ್ರಮುಖ ಆಕರ್ಷಣೆ ಈ ಗಿಡಗಳು

ಹೆದ್ದಾರಿಯ ಪಕ್ಕದಲ್ಲಿ ಎಲ್ಲೆಲ್ಲಿ ಖಾಲಿ ಜಾಗಗಳು ಸಿಗುತ್ತೋ ಅಲ್ಲೆಲ್ಲಾ ಈ ಗಿಡಗಳನ್ನು ನೆಡಲು ವೇಣೂರು ವಲಯ ಅರಣ್ಯ ಇಲಾಖೆ ನಿರ್ಧರಿಸಿದೆ. ಅತ್ಯಂತ ಶಿಸ್ತುಬದ್ಧವಾಗಿ ಗಿಡಗಳನ್ನು ನೆಡುವ ಜೊತೆಗೆ ಈ ಗಿಡಗಳಿಗೆ ಯಾವುದೇ ತೊಂದರೆಯಾಗದಿರಲಿ ಅನ್ನೋ ಕಾರಣಕ್ಕೆ ಗಿಡಗಳ ಸುತ್ತ ವೃತ್ತಾಕಾರದಲ್ಲಿ ಹಸಿರು ಬಣ್ಣದ ನೆಟ್ ಅನ್ನು ಸುತ್ತಿ ಸಂರಕ್ಷಿಸಲಾಗಿದೆ. ರಸ್ತೆಯುದ್ದಕ್ಕೂ ಹಸಿರಾಗಿ ಕಾಣುವ ಈ ಗಿಡಗಳು ಮತ್ತು ಭದ್ರತಾ ನೆಟ್ ಹೆದ್ದಾರಿ ಪ್ರಯಾಣಿಕರನ್ನೊಮ್ಮೆ ಅತ್ತ ಕಡೆ ತಿರುಗಿ ನೋಡುವಂತೆ ಆಕರ್ಷಿಸುತ್ತಿವೆ.

4000 ಗಿಡಗಳನ್ನು ನೆಡಲು ಯೋಜನೆ

ಪೂಂಜಾಲುಕಟ್ಟೆಯಿಂದ ವೇಣೂರು, ನಾರಾವಿ, ಅಳದಂಗಡಿ, ಮೂಡಬಿದಿರೆ ತನಕದ ರಸ್ತೆ ಪಕ್ಕದಲ್ಲಿ ಈ ಗಿಡಗಳನ್ನು ನೆಡಲಾಗಿದ್ದು, ಒಟ್ಟು 4000 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಗಿಡ ನೆಡುವ ಕಾರ್ಯ ಆರಂಭಗೊಂಡಿದ್ದು, ಇವುಗಳ ನಿರ್ವಹಣೆಯನ್ನೂ ಅರಣ್ಯ ಇಲಾಖೆಯೇ ನೋಡಿಕೊಳ್ಳಲಿದೆ.

ಇಲ್ಲಿರುವ ತಳಿಗಳ ವಿಧ ಹೀಗಿದೆ

ಇದನ್ನೂ ಓದಿ: Dakshina Kannada forest: ಅಕೇಶಿಯಾ ಕಾಡುಗಳ ಮುಂದೆ ಮರೆಯಾಗುತ್ತಿವೆಯಾ ನೈಸರ್ಗಿಕ ಮರ-ಗಿಡಗಳು?

ಹಲಸು, ಹೆಬ್ಬಲಸು, ಮಾವು, ಧೂಪ ಹೀಗೆ ಹಲವು ಜಾತಿಯ ಗಿಡಗಳನ್ನು ಹೆದ್ದಾರಿಯ ಎರಡೂ ಪಕ್ಕದಲ್ಲಿ ನೆಡಲಾಗಿದೆ. ರಸ್ತೆ ಪಕ್ಕದಲ್ಲಿ ಎಲ್ಲೆಲ್ಲಿ ಜಾಗ ಸಿಗುತ್ತೋ ಅಲ್ಲೆಲ್ಲಾ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಹೆದ್ದಾರಿಯ ಅಗಲೀಕರಣ‌ ಕಾಮಗಾರಿಯ ಜೊತೆಗೇ ಗಿಡಗಳನ್ನು‌ ನೆಡುವ ಕೆಲಸವೂ ಒಟ್ಟಿಗೆ‌ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ‌ ಗಿಡಗಳು ಮರಗಳಾಗಿ ರಸ್ತೆ ಪ್ರಯಾಣಿಕರಿಗೆ ತಂಪಿನ‌ ಅನುಭವವನ್ನು‌ ನೀಡಲಿದೆ.