Last Updated:
ಪಂದ್ಯದ ಸಂದರ್ಭದಲ್ಲಿ ತಿಲಕ್ ವರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ತಂಡಕ್ಕೆ ವಿಕೆಟ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಾದರೂ, ದೊಡ್ಡ ಮೊತ್ತ ಸಿಡಿಸಲು ವಿಫಲರಾದರು. ಕೊನೆಯ ಓವರ್ಗಳಲ್ಲೂ ಬೌಂಡರಿ ಸಿಡಿಸಲು ವಿಫಲರಾಗಿದ್ದರಿಂದ ಅವರನ್ನ ನಿವೃತ್ತಿಗೊಳಿಸಲಾಯಿತು.
ಐಪಿಎಲ್ 2025 (IPL 2025) ರಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯದಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯಿತು. ಈ ಪಂದ್ಯದಲ್ಲಿ ಯುವ ಆಟಗಾರ ತಿಲಕ್ ವರ್ಮಾ ಅವರನ್ನು ರಿಟರ್ಡ್ ಔಟ್ ಮಾಡಿಸಲಾಯಿತು. ಕಿವೀಸ್ ನಾಯಕ ಸ್ಯಾಂಟ್ನರ್ ಕಳಿಹಿಸಲು ಅವರನ್ನ ನಿವೃತ್ತಿಗೊಳಿಸುವ ನಿರ್ಧಾರವು ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಆದರೆ ಈ ನಿರ್ಧಾರದ ಹಿಂದೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ತೀರ್ಮಾನವನ್ನು ತೆಗೆದುಕೊಂಡವರು ಬೇರೊಬ್ಬರು ಎಂದು ವರದಿಗಳು ತಿಳಿದುಬಂದಿದೆ.
ಹಾರ್ದಿಕ್ ಪಾಂಡ್ಯ ನಿರ್ಧಾರವಲ್ಲ
ಪಂದ್ಯದ ಸಂದರ್ಭದಲ್ಲಿ ತಿಲಕ್ ವರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ತಂಡಕ್ಕೆ ವಿಕೆಟ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಾದರೂ, ದೊಡ್ಡ ಮೊತ್ತ ಸಿಡಿಸಲು ವಿಫಲರಾದರು. ಕೊನೆಯ ಓವರ್ಗಳಲ್ಲೂ ಬೌಂಡರಿ ಸಿಡಿಸಲು ವಿಫಲರಾಗಿದ್ದರಿಂದ ಅವರನ್ನ ನಿವೃತ್ತಿಗೊಳಿಸಲಾಯಿತು (ರಿಟೈರ್ಡ್ ಔಟ್). ಇದು ಕ್ರಿಕೆಟ್ನಲ್ಲಿ ಅಪರೂಪದ ಘಟನೆಯಾಗಿದ್ದು, ಇದರ ಹಿಂದಿನ ಕಾರಣಗಳು ತಂಡದ ತಂತ್ರಗಾರಿಕೆಗೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ನಿರ್ಧಾರವನ್ನು ಹಾರ್ದಿಕ್ ಪಾಂಡ್ಯ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ಬದಲಿಗೆ ತಂಡದ ಒಳಗಿನ ಇನ್ನೊಬ್ಬ ಪ್ರಮುಖ ವ್ಯಕ್ತಿಯೇ ಈ ತೀರ್ಮಾನಕ್ಕೆ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಏರ್ಪೋರ್ಟ್ನಲ್ಲಿ 9 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ
ಹೆಡ್ ಕೋಚ್ ಮಹೇಲಾ ಜಯವರ್ದನೆ ನಿರ್ಧಾರ
ವರದಿಗಳ ಪ್ರಕಾರ, ಈ ಘಟನೆಯ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎನ್ನಲಾಗಿದೆ. ಕೆಲವರು ಇದು ತಂಡದ ಒಳಗಿನ ತಂತ್ರಗಾರಿಕೆಯ ಭಾಗವಾಗಿರಬಹುದು ಎಂದು ಊಹಿಸುತ್ತಿದ್ದಾರೆ, ಇನ್ನು ಕೆಲವರು ಇದು ತಪ್ಪು ನಿರ್ಧಾರವಾಗಿತ್ತು ಎಂದು ಟೀಕಿಸುತ್ತಿದ್ದಾರೆ. ತಿಲಕ್ ವರ್ಮಾ ಅವರಂತಹ ಪ್ರತಿಭಾವಂತ ಆಟಗಾರನನ್ನು ಈ ರೀತಿ ನಿವೃತ್ತಿಗೊಳಿಸುವುದು ತಂಡದ ಆಟದ ಮೇಲೆ ಪರಿಣಾಮ ಬೀರಿತು ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೆಹ್ವಾಗ್, ಹರ್ಭಜನ್ ಸಿಂಗ್ ಅಸಮಾಧಾನ
ತಿಲಕ್ ವರ್ಮಾ ಬದಲಿಗೆ ಮಿಚೆಲ್ ಸ್ಯಾಂಟ್ನರ್ ಅವರನ್ನ ಕಳುಹಿಸುವ ನಿರ್ಧಾರ ತಪ್ಪು ಎಂದು ಭಾರತದ ಮಾಜಿ ಕ್ರಿಕೆಟಿಗರಾದ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆಯ ಓವರ್ನಲ್ಲಿ ತಂಡಕ್ಕೆ 22 ರನ್ಗಳ ಅಗತ್ಯವಿದ್ದ ಸಂದರ್ಭದಲ್ಲಿ ಬೌಂಡರಿ, ಸಿಕ್ಸರ್ ಬೇಕಿರುತ್ತದೆ. ಸ್ಯಾಂಟ್ನರ್ಗೆ ಹೋಲಿಸಿದರೆ ತಿಲಕ್ ವರ್ಮಾಗೆ ಹೆಚ್ಚಿನ ಸಾಮರ್ಥ್ಯವಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ಗೆ ಮತ್ತೆ ಮುಖಭಂಗ! 5 ಬಾರಿಯ ಚಾಂಪಿಯನ್ಸ್ ವಿರುದ್ಧ 12 ರನ್ಗಳ ರೋಚಕ ಜಯ ಸಾಧಿಸಿದ LSG
ಸೂರ್ಯಕುಮಾರ್ ಬೇಸರ
ಸ್ಯಾಂಟ್ನರ್ ಮೈದಾನಕ್ಕೆ ಹೋಗುತ್ತಿದ್ದನ್ನ ಕಂಡ ಅನೇಕರು ಆಶ್ಚರ್ಯಚಕಿತರಾದರು. ಸ್ವತಃ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಕೈ ಸನ್ನೆ ಮಾಡುತ್ತಾ ಏಕೆ ಈ ನಿರ್ಧಾರ ಎಂದು ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದದ್ದು ಕಂಡುಬಂದಿತು. ನಂತರ ಜಯವರ್ದನೆ ಸೂರ್ಯ ಬಳಿ ಬಂದು ಸಮರ್ಥನೆ ನೀಡುವ ಪ್ರಯತ್ನ ಮಾಡಿದರು. ಆದರೆ ಸೂರ್ಯ ತೃಪ್ತರಾದಂತೆ ಕಾಣಲಿಲ್ಲ. ಸೂರ್ಯಕುಮಾರ್ ನಾಯಕತ್ವದಲ್ಲಿ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ನಿನ್ನೆಯ ತಂಡದ ನಿರ್ಧಾರ ಅವರ ಆತ್ಮವಿಶ್ವಾಸವನ್ನ ಕುಗ್ಗಿಸಬಹುದು ಎಂದು ಹಲವರು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.
April 05, 2025 4:34 PM IST