IPL 2025: ಹಾರ್ದಿಕ್ ಪಾಂಡ್ಯ ಅಲ್ಲ, ತಿಲಕ್ ವರ್ಮಾರನ್ನ ರಿಟೈರ್ಡ್ ಔಟ್ ಮಾಡಿಸಿದ್ದು ಈತನಂತೆ! | The Man Behind Tilak Varma’s Retried Out Decision Against LSG Revealed

IPL 2025: ಹಾರ್ದಿಕ್ ಪಾಂಡ್ಯ ಅಲ್ಲ, ತಿಲಕ್ ವರ್ಮಾರನ್ನ ರಿಟೈರ್ಡ್ ಔಟ್ ಮಾಡಿಸಿದ್ದು ಈತನಂತೆ! | The Man Behind Tilak Varma’s Retried Out Decision Against LSG Revealed

Last Updated:

ಪಂದ್ಯದ ಸಂದರ್ಭದಲ್ಲಿ ತಿಲಕ್ ವರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ತಂಡಕ್ಕೆ ವಿಕೆಟ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಾದರೂ, ದೊಡ್ಡ ಮೊತ್ತ ಸಿಡಿಸಲು ವಿಫಲರಾದರು. ಕೊನೆಯ ಓವರ್​ಗಳಲ್ಲೂ ಬೌಂಡರಿ ಸಿಡಿಸಲು ವಿಫಲರಾಗಿದ್ದರಿಂದ ಅವರನ್ನ ನಿವೃತ್ತಿಗೊಳಿಸಲಾಯಿತು.

ತಿಲಕ್ ವರ್ಮಾತಿಲಕ್ ವರ್ಮಾ
ತಿಲಕ್ ವರ್ಮಾ

ಐಪಿಎಲ್ 2025 (IPL 2025) ರಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯದಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯಿತು. ಈ ಪಂದ್ಯದಲ್ಲಿ ಯುವ ಆಟಗಾರ ತಿಲಕ್ ವರ್ಮಾ ಅವರನ್ನು ರಿಟರ್ಡ್​ ಔಟ್ ಮಾಡಿಸಲಾಯಿತು. ಕಿವೀಸ್ ನಾಯಕ ಸ್ಯಾಂಟ್ನರ್​ ಕಳಿಹಿಸಲು ಅವರನ್ನ ನಿವೃತ್ತಿಗೊಳಿಸುವ ನಿರ್ಧಾರವು ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಆದರೆ ಈ ನಿರ್ಧಾರದ ಹಿಂದೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ತೀರ್ಮಾನವನ್ನು ತೆಗೆದುಕೊಂಡವರು ಬೇರೊಬ್ಬರು ಎಂದು ವರದಿಗಳು ತಿಳಿದುಬಂದಿದೆ.

ಹಾರ್ದಿಕ್ ಪಾಂಡ್ಯ ನಿರ್ಧಾರವಲ್ಲ

ಪಂದ್ಯದ ಸಂದರ್ಭದಲ್ಲಿ ತಿಲಕ್ ವರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ತಂಡಕ್ಕೆ ವಿಕೆಟ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಾದರೂ, ದೊಡ್ಡ ಮೊತ್ತ ಸಿಡಿಸಲು ವಿಫಲರಾದರು. ಕೊನೆಯ ಓವರ್​ಗಳಲ್ಲೂ ಬೌಂಡರಿ ಸಿಡಿಸಲು ವಿಫಲರಾಗಿದ್ದರಿಂದ ಅವರನ್ನ ನಿವೃತ್ತಿಗೊಳಿಸಲಾಯಿತು (ರಿಟೈರ್ಡ್ ಔಟ್). ಇದು ಕ್ರಿಕೆಟ್‌ನಲ್ಲಿ ಅಪರೂಪದ ಘಟನೆಯಾಗಿದ್ದು, ಇದರ ಹಿಂದಿನ ಕಾರಣಗಳು ತಂಡದ ತಂತ್ರಗಾರಿಕೆಗೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ನಿರ್ಧಾರವನ್ನು ಹಾರ್ದಿಕ್ ಪಾಂಡ್ಯ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ಬದಲಿಗೆ ತಂಡದ ಒಳಗಿನ ಇನ್ನೊಬ್ಬ ಪ್ರಮುಖ ವ್ಯಕ್ತಿಯೇ ಈ ತೀರ್ಮಾನಕ್ಕೆ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಏರ್​ಪೋರ್ಟ್​​ನಲ್ಲಿ 9 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ

ಹೆಡ್ ಕೋಚ್ ಮಹೇಲಾ ಜಯವರ್ದನೆ ನಿರ್ಧಾರ

ವರದಿಗಳ ಪ್ರಕಾರ, ಈ ಘಟನೆಯ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎನ್ನಲಾಗಿದೆ. ಕೆಲವರು ಇದು ತಂಡದ ಒಳಗಿನ ತಂತ್ರಗಾರಿಕೆಯ ಭಾಗವಾಗಿರಬಹುದು ಎಂದು ಊಹಿಸುತ್ತಿದ್ದಾರೆ, ಇನ್ನು ಕೆಲವರು ಇದು ತಪ್ಪು ನಿರ್ಧಾರವಾಗಿತ್ತು ಎಂದು ಟೀಕಿಸುತ್ತಿದ್ದಾರೆ. ತಿಲಕ್ ವರ್ಮಾ ಅವರಂತಹ ಪ್ರತಿಭಾವಂತ ಆಟಗಾರನನ್ನು ಈ ರೀತಿ ನಿವೃತ್ತಿಗೊಳಿಸುವುದು ತಂಡದ ಆಟದ ಮೇಲೆ ಪರಿಣಾಮ ಬೀರಿತು ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೆಹ್ವಾಗ್, ಹರ್ಭಜನ್​ ಸಿಂಗ್ ಅಸಮಾಧಾನ

ತಿಲಕ್ ವರ್ಮಾ ಬದಲಿಗೆ ಮಿಚೆಲ್ ಸ್ಯಾಂಟ್ನರ್​ ಅವರನ್ನ ಕಳುಹಿಸುವ ನಿರ್ಧಾರ ತಪ್ಪು ಎಂದು ಭಾರತದ ಮಾಜಿ ಕ್ರಿಕೆಟಿಗರಾದ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆಯ ಓವರ್​​ನಲ್ಲಿ ತಂಡಕ್ಕೆ 22 ರನ್​ಗಳ ಅಗತ್ಯವಿದ್ದ ಸಂದರ್ಭದಲ್ಲಿ ಬೌಂಡರಿ, ಸಿಕ್ಸರ್ ಬೇಕಿರುತ್ತದೆ. ಸ್ಯಾಂಟ್ನರ್​ಗೆ ಹೋಲಿಸಿದರೆ ತಿಲಕ್ ವರ್ಮಾಗೆ ಹೆಚ್ಚಿನ ಸಾಮರ್ಥ್ಯವಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ಗೆ ಮತ್ತೆ ಮುಖಭಂಗ! 5 ಬಾರಿಯ ಚಾಂಪಿಯನ್ಸ್​ ವಿರುದ್ಧ 12 ರನ್​ಗಳ ರೋಚಕ ಜಯ ಸಾಧಿಸಿದ LSG

ಸೂರ್ಯಕುಮಾರ್ ಬೇಸರ

ಸ್ಯಾಂಟ್ನರ್ ಮೈದಾನಕ್ಕೆ ಹೋಗುತ್ತಿದ್ದನ್ನ ಕಂಡ ಅನೇಕರು ಆಶ್ಚರ್ಯಚಕಿತರಾದರು. ಸ್ವತಃ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್​ ಕೂಡ ಕೈ ಸನ್ನೆ ಮಾಡುತ್ತಾ ಏಕೆ ಈ ನಿರ್ಧಾರ ಎಂದು ಮ್ಯಾನೇಜ್​ಮೆಂಟ್ ನಿರ್ಧಾರಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದದ್ದು ಕಂಡುಬಂದಿತು. ನಂತರ ಜಯವರ್ದನೆ ಸೂರ್ಯ ಬಳಿ ಬಂದು ಸಮರ್ಥನೆ ನೀಡುವ ಪ್ರಯತ್ನ ಮಾಡಿದರು. ಆದರೆ ಸೂರ್ಯ ತೃಪ್ತರಾದಂತೆ ಕಾಣಲಿಲ್ಲ. ಸೂರ್ಯಕುಮಾರ್​ ನಾಯಕತ್ವದಲ್ಲಿ ತಿಲಕ್​ ವರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ನಿನ್ನೆಯ ತಂಡದ ನಿರ್ಧಾರ ಅವರ ಆತ್ಮವಿಶ್ವಾಸವನ್ನ ಕುಗ್ಗಿಸಬಹುದು ಎಂದು ಹಲವರು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.