Dakshina Kannada: ತರಕಾರಿ ಬೆಳೆದು ಮುಖ್ಯಮಂತ್ರಿಗಳ ಗಮನ ಸೆಳೆದ ಸರಕಾರಿ ಶಾಲೆಯ ಮಕ್ಕಳು! | Government school children growing vegetables in Dakshina Kannada

Dakshina Kannada: ತರಕಾರಿ ಬೆಳೆದು ಮುಖ್ಯಮಂತ್ರಿಗಳ ಗಮನ ಸೆಳೆದ ಸರಕಾರಿ ಶಾಲೆಯ ಮಕ್ಕಳು! | Government school children growing vegetables in Dakshina Kannada

Last Updated:

ಇತ್ತೀಚೆಗೆ ಇಲ್ಲಿನ ಮಕ್ಕಳು ತಾವು ಬೆಳೆದ ತರಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿದ್ದರು. ಮಕ್ಕಳ ಈ ಸಾಧನೆಯನ್ನು ಮೆಚ್ಚಿಕೊಂಡಿರುವ ಮುಖ್ಯಮಂತ್ರಿಗಳು ಈ ವಿಚಾರವನ್ನು ತನ್ನ ಎಕ್ಸ್ ಖಾತೆಯಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಪಠ್ಯದ(Education) ಜೊತೆಗೆ ‌ಕೃಷಿಗೂ(Agriculture) ಒತ್ತು ನೀಡಿ ಶಾಲಾ ಆವರಣದಲ್ಲಿ ಸಾವಯವ ತರಕಾರಿ(Organic Vegetables) ಬೆಳೆದು ಸರಕಾರಿ ಶಾಲೆ ಮಕ್ಕಳು ಇದೀಗ ರಾಜ್ಯದ ಮುಖ್ಯಮಂತ್ರಿಗಳ(Chief Minister) ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು(Government School Students) ಈ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುಗ್ರಾಮವಾದ ಕುತ್ಲೂರು ಎನ್ನುವ ಪ್ರದೇಶದಲ್ಲಿರುವ ಈ ಶಾಲೆಯ ಮಕ್ಕಳು ಪಠ್ಯದ ಜೊತೆಗೆ ಕೃಷಿ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಪಠ್ಯದ ಜೊತೆಗೆ ಕೃಷಿಗೂ ತಮ್ಮ ಸಮಯವನ್ನು ಕೊಡುತ್ತಿರುವ ಇಲ್ಲಿನ ವಿದ್ಯಾರ್ಥಿಗಳು ತಮ್ಮ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದಷ್ಟು ತರಕಾರಿಗಳನ್ನು ತಾವೇ ಬೆಳೆಯುತ್ತಿದ್ದಾರೆ.‌ ಸುಮಾರು ನಾಲ್ಕು ಎಕರೆ ಜಾಗವನ್ನು ಹೊಂದಿರುವ ಈ ಸರಕಾರಿ ಶಾಲೆಯಲ್ಲಿ ಒಂದು ಕಡೆಯಲ್ಲಿ ತರಕಾರಿ, ಇನ್ನೊಂದು ಕಡೆಯಲ್ಲಿ ಸುಮಾರು 500 ಅಡಿಕೆ ಗಿಡಗಳನ್ನು ನೆಟ್ಟು ತೋಟ ಬೆಳೆಸಿದ್ದಾರೆ.

ಇದನ್ನೂ ಓದಿ: Kolar: ಅದ್ದೂರಿಯಾಗಿ ನಡೆದ ಸೀತಿ ಜಾತ್ರಾ ಮಹೋತ್ಸವ- ಧನ್ಯತಾಭಾವ ಮೆರೆದ ಭಕ್ತರು!

ಇತ್ತೀಚೆಗೆ ಇಲ್ಲಿನ ಮಕ್ಕಳು ತಾವು ಬೆಳೆದ ತರಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿದ್ದರು. ಮಕ್ಕಳ ಈ ಸಾಧನೆಯನ್ನು ಮೆಚ್ಚಿಕೊಂಡಿರುವ ಮುಖ್ಯಮಂತ್ರಿಗಳು ಈ ವಿಚಾರವನ್ನು ತನ್ನ ಎಕ್ಸ್ ಖಾತೆಯಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ. ತೋಟದಲ್ಲಿ ಬೆಳೆದ ಬೆಂಡೆ, ಅಲಸಂಡೆ, ಹೀರೆಕಾಯಿ, ಬದನೆ, ಸೋರೆಕಾಯಿ, ಕುಂಬಳಕಾಯಿ, ನುಗ್ಗೆಕಾಯಿ ಹೀಗೆ ತಮಗೆ ಯಾವುದೆಲ್ಲಾ ಬೆಳೆಯಲು ಸಾಧ್ಯವೋ ಅದನ್ನೆಲ್ಲಾ ಬೆಳೆದು, ಬಳಸುತ್ತಿದ್ದಾರೆ. ಮಕ್ಕಳಿಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರೂ ಸಹಕಾರ ನೀಡುತ್ತಿದ್ದಾರೆ.

ತರಕಾರಿಯನ್ನು ಸಂಪೂರ್ಣ ಸಾವಯವ ಗೊಬ್ಬರವನ್ನು ಬಳಸಿಕೊಂಡು ಬೆಳೆಯಲಾಗುತ್ತಿದೆ. ಅಲ್ಲದೆ ಅಡಿಕೆ ತೋಟಕ್ಕೆ ಶಾಲೆಯ ಪಕ್ಕದಲ್ಲೇ ಇರುವ ಕೃಷಿಕರೊಬ್ಬರು ಗೋವಿನ ಸಗಣಿ ಮತ್ತು ಸ್ಲರಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದರಿಂದ ಕೃಷಿಗೆ ಅತ್ಯುತ್ತಮ ಗುಣಮಟ್ಟದ ಗೊಬ್ಬರ ದೊರೆಯುತ್ತಿದೆ. ಕಟಾವಿಗೆ ಸಿದ್ಧಗೊಂಡಾಗ ಸುಮಾರು 10 ಕೆ‌ಜಿಗೂ ಹೆಚ್ಚಿನ ತರಕಾರಿಯನ್ನು ಈ ತೋಟದಿಂದ ಕಟಾವು ಮಾಡಲಾಗುತ್ತಿದೆ. ಬಿಸಿಯೂಟಕ್ಕೆ ಬಳಸಿ, ಹೆಚ್ಚಾದ ತರಕಾರಿಗಳನ್ನು ಗ್ರಾಮದಲ್ಲಿ ಯಾವುದಾದರೂ ಕ್ಷೇತ್ರಗಳಲ್ಲಿ ಬ್ರಹ್ಮಕಲಶೋತ್ಸವ ಅಥವಾ ಇತರ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ನೀಡುತ್ತಿದ್ದಾರೆ.

ಸುಮಾರು ಐದು ವರ್ಷಗಳ ಹಿಂದಿನಿಂದ ದೊಡ್ಡ ಮಟ್ಟದಲ್ಲಿ ಮಕ್ಕಳು ತರಕಾರಿ ಬೆಳೆಯಲು ಆರಂಭಿಸಿದ್ದು, ಉತ್ತಮ ಪ್ರತಿಫಲವನ್ನೂ ಪಡೆಯುತ್ತಿದ್ದಾರೆ.