Vaibhav Suryavamshi: ಸ್ಫೋಟಕ ಶತಕ ಸಿಡಿಸಿ ಮಿಂಚಿದ 14 ವರ್ಷದ ವೈಭವ್! ತಮ್ಮ ಮೊದಲ ಸೆಂಚುರಿಯ ಕ್ರೆಡಿಟ್ ಆ ಇಬ್ಬರಿಗೆ ಸಲ್ಲಬೇಕೆಂದ ಯುವ ಆಟಗಾರ | 14 year old Vaibhav Suryavanshi says he will dedicate his first IPL century to his parents

Vaibhav Suryavamshi: ಸ್ಫೋಟಕ ಶತಕ ಸಿಡಿಸಿ ಮಿಂಚಿದ 14 ವರ್ಷದ ವೈಭವ್! ತಮ್ಮ ಮೊದಲ ಸೆಂಚುರಿಯ ಕ್ರೆಡಿಟ್ ಆ ಇಬ್ಬರಿಗೆ ಸಲ್ಲಬೇಕೆಂದ ಯುವ ಆಟಗಾರ | 14 year old Vaibhav Suryavanshi says he will dedicate his first IPL century to his parents

ಸೂರ್ಯವಂಶಿ ಶತಕ ಆರ್‌ಆರ್ ಸುಲಭ ಗೆಲುವು

ವೈಭವ್ ಸೂರ್ಯಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ತಂಡ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ಸುಲಭವಾಗಿ ಗೆದ್ದು ಬೀಗಿತು. ಆರಂಭಿಕರಾದ ವೈಭವ್ ಮತ್ತು ಯಶಸ್ವಿ ಜೈಸ್ವಾಲ್ 166 ರನ್‌ಗಳ ಆರಂಭಿಕ ಜೊತೆಯಾಟ ಆಡಿದರು. ವೈಭವ್ ಅವರ ಇನ್ನಿಂಗ್ಸ್ ಕಂಡು ಸ್ವತಂ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರೇ ಶ್ಲಾಘಿಸಿದ್ದಾರೆ. ಪಂದ್ಯದ ಬಳಿಕ ವೈಭವ್ ಸೂರ್ಯವಂಶಿ ಕೂಡ ಭಾವುಕರಾದಂತೆ ಕಂಡುಬಂದರು. ಆ ಸಮಯದಲ್ಲಿ, ಅವರು ತಮ್ಮ ಕುಟುಂಬಕ್ಕೆ ಶತಕವನ್ನು ಸಮರ್ಪಿಸಿದರು.

ನನ್ನ ತಾಯಿ ಪ್ರತಿದಿನ 2 ಗಂಟೆಗೆ ಏಳುತ್ತಿದ್ದರು!

ನನ್ನ ಯಶಸ್ಸಿನ ಹಿಂದೆ ನನ್ನ ಹೆತ್ತವರ ಪಾತ್ರ ದೊಡ್ಡದು. ನನ್ನ ತಾಯಿ ಪ್ರತಿದಿನ 2 ಗಂಟೆಗೆ ಎದ್ದು ನನಗೆ ಆಹಾರ ತಯಾರಿಸುತ್ತಿದ್ದರು. ರಾತ್ರಿ 11 ಗಂಟೆಗೆ ಮಲಗಿದ ನಂತರ, ಅವರು ಕೇವಲ 3 ಗಂಟೆಗಳ ಕಾಲ ಮಾತ್ರ ಮಲಗುತ್ತಿದ್ದರು. ತಂದೆ ಕೆಲಸ ಬಿಡಬೇಕಾಯಿತು. ಅವರು ನನಗೆ ಬೆಂಬಲ ನೀಡಿದರು ಮತ್ತು ಕ್ರಿಕೆಟ್ ಆಡಲು ಪ್ರೋತ್ಸಾಹಿಸಿದರು. ಆದ್ದರಿಂದ, ಕಷ್ಟಪಟ್ಟು ಕೆಲಸ ಮಾಡುವ ಯಾರನ್ನೂ ದೇವರು ವಿಫಲಗೊಳಿಸಲು ಬಿಡುವುದಿಲ್ಲ. ಆದ್ದರಿಂದ, ನನ್ನ ಯಶಸ್ಸಿನ ಕೀರ್ತಿ ನನ್ನ ಹೆತ್ತವರಿಗೆ ಸಲ್ಲುತ್ತದೆ ಎಂದು ಹೇಳುತ್ತಾ ವೈಭವ್ ಸೂರ್ಯವಂಶಿ ಭಾವುಕರಾದರು.

ಇದನ್ನೂ ಓದಿ: Vaibhav Suryavamshi: ರೋಹಿತ್, ವಿರಾಟ್‌ರಂತಹ ದಿಗ್ಗಜರಿಂದಲೇ ಸಾಧ್ಯವಾಗದ ದಾಖಲೆ ಬರೆದ 14ರ ಪೋರ! ಈತನ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್

ರಾಹುಲ್ ಸರ್ ಮಾರ್ಗದರ್ಶನ ಹೆಲ್ಪ್ ಆಯ್ತು

ನಾನು ಈಗಷ್ಟೇ ಕ್ರಿಕೆಟ್ ಪ್ರಾರಂಭಿಸಿದ್ದೇನೆ. ನಾನು ಇನ್ನೂ ಚೆನ್ನಾಗಿ ಆಡಲು ಭಯಸುತ್ತೇನೆ. ನಾನು ಟ್ರಯಲ್ಸ್ ಸಂದರ್ಭದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದೆ, ಆದ್ದರಿಂದ ರಾಬಿನ್ ಸರ್ ನನಗೆ ಆತ್ಮವಿಶ್ವಾಸ ತುಂಬಿದರು. ನಾನು ರಾಜಸ್ಥಾನ ತಂಡಕ್ಕೆ ಆಯ್ಕೆಯಾದಾಗ, ನನಗೆ ಮೊದಲು ಅವರಿಂದ ಕರೆ ಬಂದಿತ್ತು ಮತ್ತು ಅವರು ನನ್ನನ್ನು ರಾಹುಲ್ ಸರ್ ಜೊತೆ ಮಾತನಾಡುವಂತೆ ಮಾಡಿದರು. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಕಲಿಯುವುದು ನನ್ನ ಕನಸಾಗಿತ್ತು. ನನಗೆ ಕೋಚಿಂಗ್ ಸಿಬ್ಬಂದಿಯಿಂದಲೂ ಬೆಂಬಲ ಸಿಗುತ್ತಿದೆ ಎಂದರು.

ಕೋಚಿಂಗ್ ಸಿಬ್ಬಂದಿ ಸಹಾಯ ಮಾಡಿದರು

ಕೋಚಿಂಗ್ ಸಿಬ್ಬಂದಿ ನನಗೆ ಮಾನಸಿಕವಾಗಿ ಸಹಾಯ ಮಾಡಿದರು. ಹಾಗಾಗಿ ನನ್ನ ನಂಬಿಕೆ ಯಾವಾಗಲೂ ಚೆನ್ನಾಗಿತ್ತು. ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ಚೆಂಡು ನನ್ನ ಕಣ್ಣಿಗೆ ಬಿದ್ದರೆ, ನಾನು ಅದನ್ನು ಹೊಡೆಯುತ್ತೇನೆ ಎಂಬುದು ನನ್ನ ಮನಸ್ಥಿತಿಯಾಗಿತ್ತು. ನಾನು ಟೀಮ್ ಇಂಡಿಯಾ ಪರ ಆಡಲು ಬಯಸುತ್ತೇನೆ. “ನಾನು ಆ ಗುರಿಯನ್ನು ತಲುಪುವವರೆಗೆ ಆಟವಾಡುತ್ತಲೇ ಇರುತ್ತೇನೆ ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತೇನೆ” ಎಂದು ವೈಭವ್ ಸೂರ್ಯವಂಶಿ ಹೇಳಿದರು.