In this school teachers Contribute their money for Students
ಎಲ್ಲಾ ಶಿಕ್ಷಕರು ತಮ್ಮ ಖರ್ಚಿನ ಮೊತ್ತದಲ್ಲಿ ಕಿಂಚಿತ್ತು ಹಣವನ್ನು ಪ್ರತೀದಿನ ತಮ್ಮ ಶಾಲೆಯ ಮಕ್ಕಳಿಗಾಗಿ ಕೂಡಿಡುವುದೇ ‘ಗುರು ಕಾಣಿಕೆ’ಯ ಮುಖ್ಯ ಉದ್ದೇಶ. ಪ್ರತೀ ತಿಂಗಳ ಮೊದಲ ವಾರ ಕಾಣಿಕೆ ಡಬ್ಬಿ ತೆರೆದು ಹಣವನ್ನು ‘ಲಕ್ಕಿ ಕ್ಲಾಸ್’ಗೆ ವಿನಿಯೋಗಿಸಲಾಗುತ್ತದೆ.
ದಕ್ಷಿಣ ಕನ್ನಡ: ಸಾಧಾರಣವಾಗಿ ತಮ್ಮ ವ್ಯಾಸಂಗ ಮುಗಿದ ಬಳಿಕ, ಶಿಕ್ಷಕರಿಗೆ(Teachers) ವಿದ್ಯಾರ್ಥಿಗಳು(Students) ‘ಗುರು ಕಾಣಿಕೆ’ ನೀಡುವುದನ್ನು ನಾವು ಕೇಳುತ್ತಿರುತ್ತೇವೆ. ಆದರೆ, ವಿದ್ಯೆ ನೀಡುವ ಗುರುಗಳೇ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ‘ಗುರು ಕಾಣಿಕೆ’ ನೀಡುವ ಶಾಲೆಯೊಂದು ಮಂಗಳೂರಿನಲ್ಲಿದೆ(Mangaluru). ಮಂಗಳೂರು ಶಕ್ತಿನಗರದ ನಾಲ್ಯಪದವು ಪಿ.ಎಂ. ಶ್ರೀ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School) ಮಕ್ಕಳಿಗೆ ಶಿಕ್ಷಕರೇ ‘ಗುರು ಕಾಣಿಕೆ’ ನೀಡುತ್ತಿದ್ದಾರೆ.
ಶಾಲೆಯ ಕಚೇರಿ ಕೊಠಡಿಯಲ್ಲಿ ‘ಗುರು ಕಾಣಿಕೆ’ಯ ಡಬ್ಬಿ ಇರಿಸಲಾಗಿದೆ. ಎಲ್ಕೆಜಿಯಿಂದ 8ನೇ ತರಗತಿವರೆಗೆ, ಆಂಗ್ಲ ಮಾಧ್ಯಮವೂ ಸೇರಿದಂತೆ ಇಲ್ಲಿ ಒಟ್ಟು 16 ತರಗತಿಗಳಿವೆ. ಒಟ್ಟು 24 ಶಿಕ್ಷಕರಿದ್ದಾರೆ. ಅವರೆಲ್ಲರೂ ದಿನಂಪ್ರತೀ ತಮಗೆ ಸಾಧ್ಯವಾದಷ್ಟು ಹಣವನ್ನು ‘ಗುರುಕಾಣಿಕೆ’ಯ ಡಬ್ಬಿಗೆ ಹಾಕುತ್ತಾರೆ. ಜೊತೆಗೆ ಶಾಲಾ ಸಿಬ್ಬಂದಿ, ಶಾಲೆಗೆ ಬರುವ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ, ಹಿತೈಷಿಗಳು ಕೂಡ ಈ ಡಬ್ಬಿಗೆ ಹಣ ಹಾಕುತ್ತಾರೆ. ಎಲ್ಲಾ ಶಿಕ್ಷಕರು ತಮ್ಮ ಖರ್ಚಿನ ಮೊತ್ತದಲ್ಲಿ ಕಿಂಚಿತ್ತು ಹಣವನ್ನು ಪ್ರತೀದಿನ ತಮ್ಮ ಶಾಲೆಯ ಮಕ್ಕಳಿಗಾಗಿ ಕೂಡಿಡುವುದೇ ‘ಗುರು ಕಾಣಿಕೆ’ಯ ಮುಖ್ಯ ಉದ್ದೇಶ. ಪ್ರತೀ ತಿಂಗಳ ಮೊದಲ ವಾರ ಕಾಣಿಕೆ ಡಬ್ಬಿ ತೆರೆದು ಹಣವನ್ನು ‘ಲಕ್ಕಿ ಕ್ಲಾಸ್’ಗೆ ವಿನಿಯೋಗಿಸಲಾಗುತ್ತದೆ.

ಒಟ್ಟು 16 ತರಗತಿಗಳ ಹೆಸರಿನ ಚೀಟಿ ಹಾಕಲಾಗುತ್ತದೆ. ಡ್ರಾದಲ್ಲಿ ಆಯ್ಕೆಯಾದ ತರಗತಿ ಟೀಚರ್ಗೆ ಈ ಮೊತ್ತವನ್ನು ನೀಡಲಾಗುತ್ತದೆ. ಅವರು ತಮ್ಮ ತರಗತಿಗೆ ಅಗತ್ಯವಿರುವ ಯಾವುದೇ ವಸ್ತು, ಪರಿಕರ, ಕಲಿಕಾ ಸಾಮಗ್ರಿಗಳನ್ನು ತರುತ್ತಾರೆ. ಆಯ್ಕೆಯಾದ ತರಗತಿಯನ್ನು ಮುಂದಿನ ಲಕ್ಕಿ ಡ್ರಾಕ್ಕೆ ಪರಿಗಣಿಸುವುದಿಲ್ಲ.
ಕಳೆದ ಆಗಸ್ಟ್ನಿಂದ ಗುರು ಕಾಣಿಕೆಯನ್ನು ಆರಂಭಿಸಲಾಗಿದೆ. ಶಿಕ್ಷಕರು 1ರೂಪಾಯಿಯಿಂದ ಅವರವರ ಶಕ್ತ್ಯಾನುಸಾರ ಡಬ್ಬಿಗೆ ಹಣ ಹಾಕುತ್ತಾರೆ. ತಿಂಗಳಿಗೆ 1, 2 ಅಥವಾ 3 ಸಾವಿರ ಹಣ ಸಂಗ್ರಹವಾಗುತ್ತದೆ.
Location :
Dakshina Kannada,Karnataka
First Published :
March 14, 2025 4:46 PM IST