Last Updated:
ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆಯಲ್ಲಿ ರೌಂಡ್ಸ್ ಹಾಕ್ತಿದ್ದಾರೆ. ಸರ್ಪ ಸಂಸ್ಕಾರ ಪೊಜೆ ನೆರವೇರಿಸಿದ ಕತ್ರಿನಾ, ಎರಡನೇ ದಿನವೂ ಆಶ್ಲೇಷಾ ಬಲಿ ಪೂಜೆ ಮಾಡಿದ್ದಾರೆ.
ಪುತ್ತೂರು: ದೈವಗಳ ನೆಲೆಬೀಡು ಅಂತಾನೇ ಕರೆಸಿಕೊಳ್ಳೋ ಕರಾವಳಿಯತ್ತ (karnataka coastal ) ಬಾಲಿವುಡ್ನ ನಟ-ನಟಿಯರು (bollywood actresses) ದಾಂಗುಡಿ ಇಟ್ಟಂತೆ ಕಾಣ್ತಿದೆ. ಒಬ್ರಾದ್ಮೇಲೆ ಒಬ್ರು ಬಂದು ಟೆಂಪಲ್ ರನ್ ಮಾಡ್ತಿದ್ದಾರೆ. ವಾರದ ಹಿಂದಷ್ಟೇ ಶಿಲ್ಪಾ ಶೆಟ್ಟಿ (shilpa shetty) ತನ್ನ ಇಡೀ ಕುಟುಂಬದ ಜೊತೆ ಬಂದು ಕಟೀಲು ತಾಯಿಗೆ ವಿಶೇಷ ಹರಕೆ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ನಟಿ ಕಮ್ ಸಂಸದೆ ಕಂಗನಾ ರಣಾವತ್ (kangana ranaut) ಕೂಡಾ ಕರಾವಳಿ ಮಣ್ಣಲ್ಲಿ ಸುತ್ತಾಡಿ ಹೋಗಿದ್ದರು. ಕಾಪು ಹಾಗೂ ಕಟೀಲು ಕ್ಷೇತ್ರಕ್ಕೆ ಹೋಗಿ ದೇವರ ಮಹಿಮೆಯನ್ನ ಕೊಂಡಾಡಿದ್ದರು. ಇಷ್ಟೇ ಅಲ್ಲ, ನಟಿ ಪೂಜಾ ಹೆಗಡೆ, ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ (surya kumar yadav) ದಂಪತಿ ಕೂಡ ಕರಾವಳಿಯಲ್ಲಿ ಒಂದು ಸುತ್ತು ದೈವ ಸಂಚಾರ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಬಾಲಿವುಡ್ನ ಕ್ಯಾಟ್ ಕತ್ರಿನಾ ಕೈಫ್ ಕೂಡಾ ಕುಕ್ಕೆ ಸುಬ್ರಹ್ಮಣ್ಯನ (kukke subramanya temple) ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಕುಂಭಮೇಳದಲ್ಲಿ ಮಿಂದೆದ್ದ ಕತ್ರಿಕಾ, ಕುಕ್ಕೆಯಲ್ಲಿ ಸರ್ಪಸಂಸ್ಕಾರ ಮಾಡಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯನ ಮೊರೆ ಹೋದ ಕತ್ರಿನಾ ಕೈಫ್!
ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಪವಾಡವನ್ನ ಬಲ್ಲವರೇ ಬಲ್ಲರು ಬಿಡಿ. ದೇಶ ವಿದೇಶದಿಂದ್ಲೂ ಈ ಸನ್ನಿಧಿಗೆ ಬರ್ತಾರೆ. ಕ್ರಿಕೆಟಿಗ ಸಚಿನ್ನಿಂದ ಹಿಡಿದು ಘಟಾನುಘಟಿಗಳೆಲ್ಲಾ ಬಂದೋಗಿದ್ದಾರೆ. ಸರ್ವ ದೋಷಗಳಲ್ಲಿ ಸರ್ಪದೋಷವೇ ದೊಡ್ಡದು ಅಂತಾರೆ. ಹೀಗಾಗಿಯೇ ಸರ್ವದೋಷ ನಿವಾರಣೆಗಾಗಿ ಈ ಕುಕ್ಕೆಗೆ ಬಂದು ವಿಶೇಷ ಪೂಜೆ ಮಾಡಿಸ್ತಾರೆ.
ಅದರಲ್ಲೂ ಸಂತಾನ ಪ್ರಾಪ್ತಿಗೆ ಈ ಕ್ಷೇತ್ರ ಸುಪ್ರಸಿದ್ಧ. ಆಶ್ಲೇಷ ನಕ್ಷತ್ರದ ದಿನ ನಡೆಯೋ ಪೂಜೆ ತುಂಬಾ ಶ್ರೇಷ್ಠವಾದದ್ದು. ಯಾರೇ ಬಂದು ಕುಕ್ಕೆಯಲ್ಲಿ ಬೇಡಿಕೊಂಡರೂ ಇಷ್ಟಾರ್ಥ ನೆರವೇರುತ್ತೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿಯೇ ನಟಿ ಕತ್ರಿನಾ ಕೈಫ್ ಕೂಡಾ ತನ್ನ ಕುಟುಂಬಸ್ಥರ ಜೊತೆ ಬಂದು ಆದಿ ಸುಬ್ರಹ್ಮಣ್ಯಗೆ ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದರು. ಸಂತಾನ ಪ್ರಾಪ್ತಿ, ವೃತ್ತಿ ಬದುಕಿನಲ್ಲಿ ಸಫಲತೆ ಹಾಗೂ ಕುಟುಂಬದಲ್ಲಿ ಸದಾ ನೆಮ್ಮದಿ ನೆಲಸಿರಲಿ ಅತಾ ವಿಶೇಷ ಪೂಜೆ ಮಾಡಿಸಿದ್ದಾರೆ.
ಸಂತಾನ ಪ್ರಾಪ್ತಿಗಾಗಿ ಮಾಡಿಸಿದ್ರಾ ವಿಶೇಷ ಪೂಜೆ?
ಬಣ್ಣದ ಬದುಕಲ್ಲಿ ದೊಡ್ಡ ಹೆಸರು ಮಾಡಿರೋ ಕ್ಯಾಟ್ ಕತ್ರೀನಾ, ಮೂರು ವರ್ಷದ ಹಿಂದೆ ನಟ ವಿಕ್ಕಿ ಕೌಶಲ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಮೂರು ವರ್ಷವಾದರು ಮಕ್ಕಳಾಗಿಲ್ಲ. ಹೀಗಾಗಿಯೇ ಸಂತಾನ ಭಾಗ್ಯಕ್ಕಾಗಿ ಕುಕ್ಕೆಗೆ ಬಂದು ಪೂಜೆ ಮಾಡಿಸಿದ್ದಾರೆ ಅಂತಾನೇ ಹೇಳಲಾಗುತ್ತಿದೆ. ಇಂದು ಕೂಡಾ ಸರ್ಪ ಸಂಸ್ಕಾರ ಪೂಜೆ ನಡೆಯುತ್ತಿದ್ದು, ಕುಕ್ಕೆಯಲ್ಲೇ ಎರಡು ದಿನಗಳ ಕಾಲ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: Uttara Kannada: ಅಂದು ಮಾಲೀಕನನ್ನು ಕಳೆದುಕೊಂಡು ಅನಾಥ; ಇಂದು ಪೊಲೀಸ್ ಮ್ಯಾರಥಾನ್ನಲ್ಲಿ ಬೆಳ್ಳಿ ಗೆದ್ದ ಶ್ವಾನ
ವಿಕ್ಕಿ ಕೌಶಲ್ ರನ್ನು ಮದುವೆಯಾಗಿದ್ದೇ ಆಗಿದ್ದು, ಕತ್ರಿನಾ ಕೈಫ್ ದೈವ ಭಕ್ತೆಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕುಂಭಮೇಳಕ್ಕೆ ಹೋಗಿ ಪವಿತ್ರ ಸ್ನಾನ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಕುಕ್ಕೆಗೆ ಬಂದು ವಿಶೇಷ ಪೂಜೆ ನೆರವೇರಿಸಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಸ್ಟಾರ್ಸ್ಗಳು ಕರಾವಳಿ ದೈವಕ್ಕೆ ಶರಣಾಗಿರೋದಂತೂ ಸುಳ್ಳಲ್ಲ. (ವರದಿ: ಅಜಿತ್ ಕುಮಾರ್, ನ್ಯೂಸ್ 18, ಪುತ್ತೂರು)
Puttur,Dakshina Kannada,Karnataka
March 12, 2025 1:42 PM IST