RCB vs KKR: ನಾಳೆ ಬೆಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ! ಕೆಕೆಆರ್ vs ಆರ್​ಸಿಬಿ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಹೇಗಿದೆ ನೋಡಿ ಪ್ಲೇ ಆಫ್ ಲೆಕ್ಕಾಚಾರ | RCB vs KKR Match Under Threat Rain Could Decide kkr Playoff Fate

RCB vs KKR: ನಾಳೆ ಬೆಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ! ಕೆಕೆಆರ್ vs ಆರ್​ಸಿಬಿ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಹೇಗಿದೆ ನೋಡಿ ಪ್ಲೇ ಆಫ್ ಲೆಕ್ಕಾಚಾರ | RCB vs KKR Match Under Threat Rain Could Decide kkr Playoff Fate

ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಇದೇ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ. ನಾಳೆಯ ಪಂದ್ಯಕ್ಕಾಗಿ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಈಗಾಗಲೇ ಬೆಂಗಳೂರಿಗೆ ಬಂದಿವೆ. ಮಳೆಯಿಂದಾಗಿ ಎರಡೂ ತಂಡಗಳ ಅಭ್ಯಾಸ ಅವಧಿಗಳು ರದ್ದಾಗಿದ್ದವು. ಆಟಗಾರರು ಡ್ರೆಸ್ಸಿಂಗ್ ಕೋಣೆಗಳಿಗೆ ಸೀಮಿತರಾಗಿದ್ದಾರೆ.

ಕೆಕೆಆರ್​​ಗೆ ನಿರ್ಣಾಯಕ ಪಂದ್ಯ

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಈ ಪಂದ್ಯ ಬಹಳ ಮುಖ್ಯವಾಗಿದ್ದು, ಆರ್​​ಸಿಬಿ ಈ ಪಂದ್ಯವನ್ನು ಗೆದ್ದರೆ ಖಚಿತವಾಗಿ ಪ್ಲೇಆಫ್ ಟಿಕೆಟ್ ಖಚಿತವಾಗಲಿದೆ. ಇತ್ತ ಕೆಕೆಆರ್ ಗೆದ್ದರೆ ಅದರ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ, ಒಂದು ವೇಳೆ ಸೋತರೆ ಅದು ಕೂಡ ನಾಲ್ಕನೇ ತಂಡವಾಗಿ ಲೀಗ್​​ನಿಂದಹೊರಬೀಳಲಿದೆ. ಕೆಕೆಆರ್ ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು, 6 ಸೋಲು ಹೀಗಾಗಿ ಈ ಪಂದ್ಯ ನಡೆಯಲಿ ಎಂದು ಎರಡೂ ತಂಡಗಳು ದೇವರ ಬಳಿ ಮೊರೆ ಇಟ್ಟಿವೆ. ಈಗಾಗಲೇ ಸಿಎಸ್​ಕೆ, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ, ಕೇವಲ ಒಂದು ಅಂಕದೊಂದಿಗೆ ಅಗ್ರ ಸ್ಥಾನಕ್ಕೆ ಏರಲಿದೆ. ಒಂದು ವೇಳೆ ಗೆದ್ದರೆ ನಾಳೆಯೇ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ಆದರೆ ಅಗ್ರಸ್ಥಾನ ಪಡೆಯುವುದಕ್ಕೆ ಮುಂದಿನ 2 ಪಂದ್ಯಗಳನ್ನ ಗೆಲ್ಲಬೇಕೆಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಪಂದ್ಯ ರದ್ಧಾದರೆ ಕೆಕೆಆರ್ ಅಭಿಯಾನ ಅಂತ್ಯ

ಹಾಲಿ ಚಾಂಪಿಯನ್ ಕೆಕೆಆರ್ ತನ್ನ ಉಳಿದ 2 ಪಂದ್ಯಗಳನ್ನ ಗೆದ್ದರೂ, ಪ್ಲೇ ಆಫ್​ ಪ್ರವೇಶಿಸಲು ಉಳಿದ ತಂಡಗಳ ಫಲಿತಾಂಶವನ್ನ ಅವಲಂಭಿಸಿದೆ. 2 ಪಂದ್ಯ ಗೆದ್ದರೆ ಕೆಕೆಆರ್ ಅಂಕ 15ಕ್ಕೆ ಏರಲಿದೆ. ಹೀಗಾದರೆ, ಮುಂಬೈ, ಡೆಲ್ಲಿ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ತಮ್ಮ ಉಳಿದೆಲ್ಲಾ ಪಂದ್ಯಗಳನ್ನ ಸೋಲಲಿ ಎಂದು ಪ್ರಾರ್ಥಿಸಬೇಕಿದೆ. ನಾಳೆ ಆರ್​ಸಿಬಿ ಪಂದ್ಯದ ನಂತರ ಮುಂದಿನ ಭಾನುವಾರ ಏಪ್ರಿಲ್ 25ರಂದು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

ಪಾಟಿದಾರ್, ಹ್ಯಾಜಲ್‌ವುಡ್ ದೂರ

ಆರ್‌ಸಿಬಿ ನಾಯಕ ರಜತ್ ಪಟಿದಾರ್ ನಾಳೆಯ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಲೀಗ್ ಮುಂದೂಡಲ್ಪಡುವ ಮೊದಲು ಅವರು ಗಾಯಗೊಂಡಿದ್ದರು ಮತ್ತು ಇನ್ನೂ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ನಾಳೆಯ ಪಂದ್ಯದಲ್ಲಿ ಪಾಟಿದಾರ್ ಬದಲಿಗೆ ಜಿತೇಶ್ ಶರ್ಮಾ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

ಮತ್ತೊಂದೆಡೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಕಾರಣ ತವರಿಗೆ ಮರಳಿದ್ದ ತಂಡದ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ಕೂಡ ನಾಳೆಯ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಹ್ಯಾಜಲ್‌ವುಡ್ ಲೀಗ್‌ನ ಮುಂದಿನ ಲೆಗ್‌ನಲ್ಲಿ ಆಡಲು ಒಪ್ಪಿಕೊಂಡಿದ್ದರೂ, ಅವರು ಇನ್ನೂ ಭಾರತಕ್ಕೆ ಮರಳಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಕನಿಷ್ಠ ಓವರ್​ ಆಟ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇರುವುದರಿಂದ, ಭಾರೀ ಮಳೆ ಬಂದರೂ ಸಹ ನಾಳೆಯ ಪಂದ್ಯವನ್ನು ಕನಿಷ್ಠ ಕೆಲವು ಓವರ್‌ಗಳವರೆಗೆ ಆಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಪಂದ್ಯ ಮಳೆಯಿಂದ 14 ಓವರ್​ಗಳಿಗೆ ಸೀಮಿತವಾಗಿತ್ತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

RCB vs KKR: ನಾಳೆ ಬೆಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ! ಕೆಕೆಆರ್ vs ಆರ್​ಸಿಬಿ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಹೇಗಿದೆ ನೋಡಿ ಪ್ಲೇ ಆಫ್ ಲೆಕ್ಕಾಚಾರ