Last Updated:
ಸಂತೆ, ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಮತ್ತು ಹಸಿ ತ್ಯಾಜ್ಯದ ಬಗ್ಗೆಯೇ ಹೆಚ್ಚಿನ ಗಮನಹರಿಸಬೇಕು ಮತ್ತು ಅದನ್ನ ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ವಿಚಾರಕಷ್ಟೇ ಈ ತಂಡ ತನ್ನ ಗಮನವನ್ನು ಕೇಂದ್ರೀಕರಿಸಿ ನಾಟಕ ಪ್ರದರ್ಶನವನ್ನು ನೀಡುತ್ತಿದೆ.
ದಕ್ಷಿಣ ಕನ್ನಡ: ಕರಾವಳಿ ಉಭಯ ಜಿಲ್ಲೆಗಳಾದ ಉಡುಪಿ(Udupi) ಮತ್ತು ದಕ್ಷಿಣ ಕನ್ನಡದ(Dakshina Kannada) ಮಣ್ಣು ಮತ್ತು ನೀರಿನ ಮೂಲವನ್ನು ಶುದ್ಧಗೊಳಿಸಲು ಪಣ ತೊಟ್ಟಿರುವ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್(Green Impact Foundation) ಇದೀಗ ತನ್ನ ಈ ಯೋಜನೆಯಲ್ಲಿ ಸ್ಥಳೀಯ ಆಡಳಿತಗಳನ್ನೂ ಸೇರಿಸಿಕೊಂಡಿದೆ. ಈ ದೂರಗಾಮಿ ಯೋಜನೆಯ ಮೊದಲ ಪ್ರಯತ್ನವಾಗಿ ಜನಸಾಮಾನ್ಯನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ, ಜನರಿಗೆ ಅತೀ ಸುಲಭವಾಗಿ ತಲುಪುವ ಬೀದಿ ನಾಟಕದ(Street Drama) ಪ್ರಯೋಗ ಇದೀಗ ಆರಂಭಗೊಂಡಿದೆ.
ಮಾರುಕಟ್ಟೆ, ಸಂತೆ, ಜಾತ್ರೆ, ಜನ ಸೇರುವ ಇತರ ಕಡೆಗಳನ್ನೇ ಗುರಿಯಾಗಿಸಿ ಗ್ರೀನ್ ಇಂಪ್ಯಾಕ್ಟ್ ಫೌಂಡೇಷನ್ ನ ಬೀದಿ ನಾಟಕ ತಂಡ ಎಲ್ಲಾ ಕಡೆಗಳಲ್ಲಿ ತಮ್ಮ ಪ್ರದರ್ಶನವನ್ನು ನೀಡುತ್ತಿದೆ. ಜನರ ಸೇರುವಿಕೆಯ ಉದ್ಧೇಶವನ್ನು ಗುರುತಿಸಿಕೊಂಡು ಆಯಾಯ ಸನ್ನಿವೇಶಕ್ಕೆ ತಕ್ಕದಾದ ಕಥೆಯನ್ನು ಈ ತಂಡ ನಾಟಕದ ಮೂಲಕ ತೋರಿಸುತ್ತಿದೆ. ಸಂತೆ, ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಮತ್ತು ಹಸಿ ತ್ಯಾಜ್ಯದ ಬಗ್ಗೆಯೇ ಹೆಚ್ಚಿನ ಗಮನಹರಿಸಬೇಕು ಮತ್ತು ಅದನ್ನ ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ವಿಚಾರಕಷ್ಟೇ ಈ ತಂಡ ತನ್ನ ಗಮನವನ್ನು ಕೇಂದ್ರೀಕರಿಸಿ ನಾಟಕ ಪ್ರದರ್ಶನವನ್ನು ನೀಡುತ್ತಿದೆ.
ಸಾಮಾನ್ಯವಾಗಿ ಸಂತೆಗಳಲ್ಲಿ ನಗರಪ್ರದೇಶದ ಸೇರಿದಂತೆ ಗ್ರಾಮೀಣ ಭಾಗದ ಜನರೂ ಹೆಚ್ಚಾಗಿ ಸೇರುತ್ತಾರೆ. ಈ ಜನರನ್ನು ನಾಟಕದ ಮೂಲಕ ಆಕರ್ಷಿಸಿ ಪ್ಲಾಸ್ಟಿಕ್ ಎಂದರೇನು? ಈ ಪ್ಲಾಸ್ಟಿಕ್ ನ ಅತಿಯಾದ ಬಳಕೆಯಿಂದ ಜನರ ಮತ್ತು ಪ್ರಕೃತಿಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಾಟಕದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೆಸರಾಂತ ಕಲಾವಿದರಿರುವ ಈ ಬೀದಿ ನಾಟಕ ತಂಡ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇಂಥ ಪ್ರದರ್ಶನಗಳನ್ನು ನೀಡಲಿದೆ.
ಪ್ರಕೃತಿಯಲ್ಲಾದ ಬದಲಾವಣೆಯನ್ನು ಒಂದು ನಿರ್ದಿಷ್ಟ ಸಮಯದೊಳಗೆ ಸರಿಪಡಿಸುತ್ತೇವೆ ಎನ್ನುವ ಗುರಿಯನ್ನು ಇಡುವುದಕ್ಕಿಂತ, ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಪರಿವರ್ತನೆ ಮಾಡುವ ಉದ್ಧೇಶ ಈ ಯೋಜನೆಯ ಹಿಂದಿದ್ದು, ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಬೀದಿ ನಾಟಕ ಆರಂಭಗೊಂಡಿದೆ.
Dakshina Kannada,Karnataka