Virat Kohli Retirement: ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಿಸಿಸಿಐ! ಆ ಕಾರಣಕ್ಕಾಗಿಯೇ ದಿಢೀರ್ ನಿವೃತ್ತಿ ಘೋಷಿಸಿದ್ರಾ ವಿರಾಟ್? | Virat Kohli Test Cricket Retirement BCCI Stance Change Shocks

Virat Kohli Retirement: ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಿಸಿಸಿಐ! ಆ ಕಾರಣಕ್ಕಾಗಿಯೇ ದಿಢೀರ್ ನಿವೃತ್ತಿ ಘೋಷಿಸಿದ್ರಾ ವಿರಾಟ್? | Virat Kohli Test Cricket Retirement BCCI Stance Change Shocks

Last Updated:

ವಿರಾಟ್ ಕೊಹ್ಲಿ ನಿವೃತ್ತಿ ಹಿಂದೆ ಬಿಸಿಸಿಐ ಇದೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇರುವುದು ಕೂಡ ಅವರ ದಿಢೀರ್ ನಿವೃತ್ತಿ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ವಿರಾಟ್ ಕೊಹ್ಲಿವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಟೀಂ ಇಂಡಿಯಾದ (Team India) ಸ್ಟಾರ್, ಚೇಸಿಂಗ್ ಕಿಂಗ್ ದಾಖಲೆಗಳ ಸರದಾರ ಅಂತಲೇ ಕರೆಸಿಕೊಳ್ಳತ್ತಿದ್ದ ವಿರಾಟ್ ಕೊಹ್ಲಿ (Virat Kohli) ಮೇ 12ರಂದು ಟೆಸ್ಟ್ ಕ್ರಿಕೆಟ್‌ಗೆ (Test Cricket) ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದರು. ಅವರ ದಿಢೀರ್ ನಿವೃತ್ತಿ ಕುರಿತು ಅನೇಕ ಊಹಾಪೋಹಗಳು ಹರಿದಾಡಲು ಆರಂಭಗೊಂಡಿವೆ. ಸದ್ಯ ಅವರ ನಿವೃತ್ತಿ ಹಿಂದೆ ಬಿಸಿಸಿಐ (BCCI) ಇದೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇರುವುದು ಕೂಡ ಅವರ ದಿಢೀರ್ ನಿವೃತ್ತಿ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

8 ವರ್ಷ ಯಶಸ್ವಿಯಾಗಿ ಟೀಂ ಇಂಡಿಯಾ ಮುನ್ನಡೆಸಿದ್ದ ಕೊಹ್ಲಿ

ವಿರಾಟ್ ಕೊಹ್ಲಿ ಭಾರತದ ಪರ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಡಿಸೆಂಬರ್ 2014 ರಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ ಅಂದಿನಿಂದ ಜನವರಿ 2022ರವರೆಗೆ ಅವರು ನಾಯಕರಾಗಿ 68 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು ಮತ್ತು ಅವುಗಳಲ್ಲಿ 40 ಪಂದ್ಯಗಳಲ್ಲಿ ಗೆಲುವು ಸಾಧಿಸುತ್ತಾರೆ. ಇದು ಭಾರತೀಯ ನಾಯಕನೊಬ್ಬ ಸಾಧಿಸಿದ ಅತೀ ಹೆಚ್ಚು ಗೆುವಾಗಿದೆ.

ಕೊಟ್ಟ ಮಾತು ಉಳಿಸಿಕೊಳ್ಳಲಿಲ್ವಾ ಬಿಸಿಸಿಐ

ವಿರಾಟ್ ಕೊಹ್ಲಿ, ಸದ್ಯ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದ್ರೆ, ಅಸಲಿಗೆ ಅವರು ನಿವೃತ್ತಿ ಹೊಂದುವ ಇಂಗಿತ ಹೊಂದಿರಲಿಲ್ಲ ಬದಲಾಗಿ ಅವರು ಮುಂಬರುವ ಜೂನ್ 20 ರಿಂದ ಲೀಡ್ಸ್‌ನಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಬಂದಿರುವ ವರದಿಯ ಪ್ರಕಾರ ಅವರು ಮತ್ತೆ ಭಾರತೀಯ ಟೆಸ್ಟ್ ತಂಡದ ನಾಯಕನಾಗಲು ಬಯಸಿದ್ದರು ಮತ್ತು ಬಿಸಿಸಿಐ ಕೂಡ ಅವರಿಗೆ ಭರವಸೆ ನೀಡಿತ್ತು ಎಂದು ವರದಿಯಾಗಿದೆ. ಆದ್ರೆ, ಬಿಸಿಸಿಐ ತನ್ನ ಮನಸ್ಸನ್ನು ಬದಲಾಯಿಸಿದ್ದರಿಂದ ಅವರು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಬಳಿಕ ನಾಯಕತ್ವಕ್ಕೆ ಆಹ್ವಾನ

ವರದಿಯ ಪ್ರಕಾರ, 36 ವರ್ಷದ ವಿರಾಟ್ ಕೊಹ್ಲಿ ಅವರನ್ನು 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ 3-1 ರಿಂದ ಸರಣಿ ಸೋತ ಬಳಿಕ ಮತ್ತೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕನನ್ನಾಗಿ ಮಾಡಬಹುದೆಂಬ ಸುಳಿವನ್ನು ಬಿಸಿಸಿಐ ನೀಡಿತ್ತು ಎಂದು ವರದಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಭಾರತ ಮೂರು ದಿನಗಳಲ್ಲಿ ಸೋತ ನಂತರ ಕೊಹ್ಲಿ ನಾಯಕತ್ವಕ್ಕೆ ಮರಳುವ ಸುಳಿವನ್ನು ಬಿಸಿಸಿಐ ನೀಡಿತ್ತು ಎಂದು ಸ್ಪೋರ್ಟ್ಸ್ ಟುಡೇ ವೀಡಿಯೊ ಮೂಲಕ ವರದಿ ಮಾಡಿದೆ.

ನಿಲುವು ಬದಲಿಸಿಕೊಂಡ ಬಿಸಿಸಿಐ

ಅಡಿಲೇಡ್ ಟೆಸ್ಟ್ ಪಂದ್ಯದ ಬಳಿಕ ಅವರು ಮತ್ತೆ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಸುಳಿವು ಅವರಿಗೆ ನೀಡಲಾಗಿತ್ತು ಎಂದು ಅವರ ಆಪ್ತರು ಹೇಳಿದ್ದಾರೆ. ಆದರೆ ನಂತರ ಪರಿಸ್ಥಿತಿ ಬದಲಾಗಿದ್ದರಿಂದ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು ಎಂದು ವರದಿ ಮಾಡಿದೆ. ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 3-1ರ ಅಂತರದಿಂದ ಸೋತ ನಂತರ ಬಿಸಿಸಿಐ ತನ್ನ ನಿಲುವು ಬದಲಿಸಿಕೊಂಡು ತಂಡಕ್ಕೆ ಯುವ ಆಟಗಾರನನ್ನು ನಾಯಕನನ್ನಾಗಿಸುವ ಇಂಗಿತ ವ್ಯಕ್ತಪಡಿಸಿರುವ ಕುರಿತು ವರದಿಯಾಗಿದೆ.

ನಾಯಕನಾಗುವ ಆಸೆಯಲ್ಲೇ ರಣಜಿ ಆಡಿದ್ರಾ ಕೊಹ್ಲಿ

ಕೊಹ್ಲಿ ಆ ಸಂದರ್ಭದಲ್ಲಿ ನಾಯಕಯತ್ವ ಪಡೆಯುವ ವಿಶ್ವಾಸ ಹೊಂದಿದ್ದರಿಂದಲೇ ಅವರು ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದರು ಎಂದು ವರದಿ ತಿಳಿಸಿದೆ. ಆದ್ರೆ, ಏಪ್ರಿಲ್‌ನಲ್ಲಿ ಅವರನ್ನು ನಾಯಕನನ್ನಾಗಿ ಮತ್ತೆ ನೋಡಲು ಸಾಧ್ಯವಿಲ್ಲ ಕೇವಲ ಆಟಗಾರನಾಗಿ ಮುಂದುವರೆಯಬಹುದು ಎಂದು ಬಿಸಿಸಿಐ ಸೂಚಿಸಿದ್ದರಿಂದ ಅವರು ದಿಢೀರ್ ನಿವೃತ್ತಿ ಘೋಷಿಸಿದರು ಎಂದು ವರದಿಯಾಗಿದೆ.