Last Updated:
ಕಳೆದ 17 ವರ್ಷಗಳಿಂದ ಈ ನಿಶ್ಚಿತಾರ್ಥ ಮತ್ತು ವಿವಾಹ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿಕೊಂಡು ಬರುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ತುಂಗಪ್ಪ ಬಂಗೇರ ಈ ಕಾರ್ಯಕ್ರಮವನ್ನು ಆರಂಭಿಸಿದ್ದು, ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ದಕ್ಷಿಣ ಕನ್ನಡ: ಬಡ ಕುಟುಂಬಗಳಿಗೆ(Poor Families) ತಮ್ಮ ಮಕ್ಕಳಿಗೆ ಮದುವೆ ಮಾಡಿಸೋದು ಅಂದ್ರೆ ಕೊಂಚ ಕಷ್ಟ ಸಾಧ್ಯ. ಇದೇ ಕಾರಣಕ್ಕೆ ಕೆಲವು ದೇವಸ್ಥಾನಗಳು(Temples), ಸಂಘಸಂಸ್ಥೆಗಳು ಸಾಮೂಹಿಕ ವಿವಾಹ(Mass Marriage) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಡವರ ಮಕ್ಕಳ ಮದುವೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ಇಂಥಹುದೇ ಒಂದು ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ(Bantwal) ತಾಲೂಕಿನಲ್ಲಿದೆ. ಈ ಸಂಸ್ಥೆ ಕೇವಲ ಮದುವೆ ಮಾಡಿಸುವುದಲ್ಲದೆ, ಮದುವೆಯ(Marriage) ಮೊದಲು ನಿಶ್ಚಿತಾರ್ಥವನ್ನೂ (Engagement) ಮಾಡುವ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದೆ.
ಸಾಮೂಹಿಕ ಮದುವೆ ಎನ್ನುವ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸಾಮೂಹಿಕ ವಿವಾಹಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದು, ಈವರೆಗೆ ಸಾವಿರಾರು ಸಂಖ್ಯೆಯ ಜೋಡಿಗಳಿಗೆ ಇಲ್ಲಿ ವಿವಾಹ ಮಾಡಿಕೊಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪೂಂಜಾಲುಕಟ್ಟೆಯ ಸ್ವಸ್ಥಿಕ್ ಫ್ರೆಂಡ್ಸ್ ಎನ್ನುವ ಸಂಸ್ಥೆ ಕೇವಲ ಸಾಮೂಹಿಕ ವಿವಾಹ ಮಾತ್ರವಲ್ಲ, ವಿವಾಹಕ್ಕೆ ಮೊದಲು ಮಾಡುವ ನಿಶ್ಚಿತಾರ್ಥದ ಸೌಭಾಗ್ಯವನ್ನು ಬಡ ಕುಟುಂಬಗಳ ಮಕ್ಕಳಿಗೆ ನೀಡುತ್ತಾ ಬರುತ್ತಿದೆ.
ಇದನ್ನೂ ಓದಿ: Mandya: ವಿಜೃಂಭಣೆಯಿಂದ ನಡೆದ ಬೇಬಿ ಬೆಟ್ಟದ ರಥೋತ್ಸವ!
ಕಳೆದ 17 ವರ್ಷಗಳಿಂದ ಈ ಸಂಸ್ಥೆ ಬಡ ಕುಟುಂಗಳಿಗೆ ಸೇರಿದ ಮಕ್ಕಳಿಗೆ ಮತ್ತು ಆಸಕ್ತ ಜೋಡಿಗಳಿಗೆ ಉಚಿತವಾಗಿ ಸಾಮೂಹಿಕ ವಿವಾಹದ ಜೊತೆಗೆ ನಿಶ್ಚಿತಾರ್ಥವನ್ನೂ ಏರ್ಪಡಿಸಿಕೊಂಡು ಬರುತ್ತಿದೆ. ಸಂಸ್ಥೆಯ ಪದಾಧಿಕಾರಿಗಳೇ ಸಾಮೂಹಿಕ ವಿವಾಹ ಮಾಡಲು ಉದ್ಧೇಶಿಸಿರುವ ಜೋಡಿಗಳಿಗೆ ವರನ ಮತ್ತು ವಧುವಿನ ಕಡೆಯವರಾಗುತ್ತಾರೆ. ತುಳುನಾಡಿನ ಸಂಪ್ರದಾಯದಂತೆ ನಿಶ್ಚಿತಾರ್ಥದ ಪ್ರಮುಖ ಘಟ್ಟವಾದ ಎಲೆ ಅಡಿಕೆಯನ್ನು ವಧು ಮತ್ತು ವರನ ಸಂಬಂಧಿಗಳು ವಿನಿಮಯ ಮಾಡಿಕೊಳ್ಳುತ್ತಾರೆ. ಬಳಿಕ ವಧು-ವರನ ಸಂಬಂಧಿಕರ ಸಮ್ಮುಖದಲ್ಲಿ ಪರಸ್ಪರ ಉಂಗುರವನ್ನು ಹಾಕುವ ಮೂಲಕ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮದ ಬಳಿ ಬಂದ ಎಲ್ಲಾ ಅತಿಥಿಗಳಿಗೆ ಭೋಜನದ ವ್ಯವಸ್ಥೆಯನ್ನೂ ಈ ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.
ಕಳೆದ 17 ವರ್ಷಗಳಿಂದ ಈ ನಿಶ್ಚಿತಾರ್ಥ ಮತ್ತು ವಿವಾಹ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿಕೊಂಡು ಬರುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ತುಂಗಪ್ಪ ಬಂಗೇರ ಈ ಕಾರ್ಯಕ್ರಮವನ್ನು ಆರಂಭಿಸಿದ್ದು, ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ತನ್ನ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ಮಾಡಿಕೊಂಡ ಬಳಿಕ ಸಾಲದ ಸುಳಿಯಲ್ಲಿ ಸಿಲುಕಿದ್ದ ತುಂಗಪ್ಪ ಬಂಗೇರರಿಗೆ, ಮದುವೆಯಾಗಲು ಎಷ್ಟು ಕಷ್ಟವಿದೆ ಎನ್ನುವುದು ತಿಳಿದಿತ್ತು. ಆ ಕಾರಣಕ್ಕಾಗಿಯೇ ಬಡ ಕುಟುಂಬದ ಮಕ್ಕಳ ಮದುವೆಯನ್ನು ಅವರ ಕುಟುಂಬಕ್ಕೆ ಯಾವುದೇ ರೀತಿಯ ಹೊರೆಯಾಗದಂತೆ ಅದ್ಧೂರಿಯಾಗಿ ಮಾಡಬೇಕು ಎನ್ನುವ ಯೋಚನೆಯಲ್ಲಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶುರು ಮಾಡಿದರು. ವಿವಾಹವಾಗುವ ಜೋಡಿಗಳೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವುದಕ್ಕೆ ಸಂತಸವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 450 ಕ್ಕೂ ಮಿಕ್ಕಿದ ಬಡ ಕುಟುಂಬದ ಮಕ್ಕಳಿಗೆ ಇಲ್ಲಿ ವಿವಾಹವನ್ನು ಮಾಡಲಾಗಿದ್ದು, ವಧು-ವರರಿಗೆ ಬೇಕಾದ ಬಟ್ಟೆ-ಬರೆ ಸೇರಿದಂತೆ ಎಲ್ಲಾ ಸಾಮಾಗ್ರಿಗಳನ್ನು ಸಂಸ್ಥೆಯ ವತಿಯಿಂದಲೇ ನೀಡಲಾಗುತ್ತದೆ.
Dakshina Kannada,Karnataka
March 10, 2025 2:08 PM IST