Dakshina Kannada: ಯೆಣ್ಮಕಜೆ ಮನೆತನದಲ್ಲಿ ನಡೆದ ಪಿಲಿಚಾಂಡಿ ದೈವದ ನೇಮೋತ್ಸವ! | Dakshina Kannada Pilichandi Devis ceremony held in the Yenmakaje family

Dakshina Kannada: ಯೆಣ್ಮಕಜೆ ಮನೆತನದಲ್ಲಿ ನಡೆದ ಪಿಲಿಚಾಂಡಿ ದೈವದ ನೇಮೋತ್ಸವ! | Dakshina Kannada Pilichandi Devis ceremony held in the Yenmakaje family


Last Updated:

ವರ್ಷಕ್ಕೆ ಒಂದು ಬಾರಿ ಭತ್ತದ ನಾಟಿ ಮಾಡುವ ಗದ್ದೆಯಲ್ಲಿ ಈ ದೈವದ ನರ್ತನ ಸೇವೆ ನಡೆಯುತ್ತದೆ‌. ಅದರಲ್ಲೂ ಈ ದೈವವನ್ನು ಹುಲಿಯಾಕಾರದ ರಥದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಎಳೆಯುವುದು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

X

ವಿಡಿಯೋ

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕೇರಳದ ಕಾಸರಗೋಡು ಜಿಲ್ಲೆಯ(Kerala Kasargoud District) ಅತ್ಯಂತ ಪುರಾತನ ಮನೆತನವಾದ ಯೆಣ್ಮಕಜೆ ಮನೆತನದ ಪ್ರಭಾವಶಾಲಿ ದೈವ ಪಿಲಿಚಾಂಡಿ ದೈವದ ನೇಮೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ. ಸುಮಾರು 500 ವರ್ಷಗಳ ಇತಿಹಾಸವಿರುವ ಯೆಣ್ಮಕಜೆ ಮನೆತನ ಹಿಂದಿನಿಂದಲೂ ಧರ್ಮಚಾವಡಿ ಎನ್ನುವ ಹೆಸರಿನಲ್ಲಿ ಗುರುತಿಸಿಕೊಂಡಿತ್ತು. ಗ್ರಾಮದ ಜನರಿಗೆ ಯಾವುದೇ ಸಮಸ್ಯೆ, ತೊಂದರೆಗಳಾದರೂ(Problems) ಅವುಗಳು ಈ ಧರ್ಮ ಚಾವಡಿಯಲ್ಲಿ ಇತ್ಯರ್ಥವಾಗುತ್ತಿತ್ತು. ಇಲ್ಲಿನ ಪ್ರಧಾನ ದೈವ ಪಿಲಿಚಾಂಡಿ ಚಾವಡಿಯ ಮುಂದೆಯೇ ನ್ಯಾಯ ತೀರ್ಮಾನವಾಗುವ ಕಾರಣ ಎಲ್ಲರೂ ಈ ದೈವದ ಮೇಲಿನ ನಂಬಿಕೆಯಿಂದಲೇ ತೊಂದರೆಗಳಿಗೆ ಪರಿಹಾರಗಳನ್ನು(Solutions) ಕಂಡುಕೊಳ್ಳುತ್ತಿದ್ದರು.

ತುಳುನಾಡಿನಲ್ಲಿ ಆರಾಧಿಸಿಕೊಂಡು ಬರುತ್ತಿರುವ ದೈವಗಳಲ್ಲಿ ಅತ್ಯಂತ ಪ್ರಭಾವಶಾಲಿ ದೈವ ಪಿಲಿಚಾಂಡಿ. ತುಳುವಿನಲ್ಲಿ ಪಿಲಿ ಅಂದರೆ ಹುಲಿ, ಚಾಂಡಿ ಎಂದರೆ ಚಾಮುಂಡಿ ಎನ್ನುವ ಅರ್ಥವಿದೆ. ಕಾಸರಗೋಡು ಜಿಲ್ಲೆಯ ಯೆಣ್ಮಕಜೆ ಮನೆತನದಲ್ಲಿ ಈ ದೈವಗಳನ್ನು ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿದ್ದಾರೆ. ಈ ದೈವದ ಮಹತ್ವದಿಂದಲೇ ಯೆಣ್ಮಕಜೆ ಮನೆತನದ ಹೆಸರನ್ನೇ ಇಲ್ಲಿನ ಗ್ರಾಮಪಂಚಾಯತ್ ಗೂ ಇಡಲಾಗಿದ್ದು, ಪ್ರತೀ ವರ್ಷಕ್ಕೊಮ್ಮೆ ಇಲ್ಲಿನ ಗ್ರಾಮಸ್ಥರ ಕೂಡುವಿಕೆಯಲ್ಲಿ ದೈವದ ನೇಮೋತ್ಸವ ನಡೆಯುತ್ತದೆ. ಮುಳಿ ಹುಲ್ಲಿನ ಮೇಲ್ಛಾವಣಿಯ ದೈವಸ್ಥಾನದಲ್ಲಿ ಪಿಲಿಚಾಂಡಿ ದೈವವನ್ನು ಆರಾಧಿಸಿಕೊಂಡು ಬರುತ್ತಿದ್ದರು. 1994 ರಲ್ಲಿ ಈ ದೈವಸ್ಥಾನಕ್ಕೆ ಬೆಂಕಿಯ ಚೆಂಡೊಂದು ಬಿದ್ದು, ಇಡೀ ಧೈವಸ್ಥಾನವೇ ಭಸ್ಮವಾಗಿ ಹೋಗಿತ್ತು.

ಇದನ್ನೂ ಓದಿ: Mandya: ಲೋಕ ಕಲ್ಯಾಣಕ್ಕಾಗಿ 48 ಗಂಟೆಗಳ ನಿರಂತರ ಮಹಾಯಾಗ!

ಬಳಿಕ ಆರಾಧನೆಯಿಲ್ಲದ ಕಾರಣ ಗ್ರಾಮದ ಜನ ಹಲವು ಸಂಕಷ್ಟಗಳನ್ನು ಅನಿಭವಿಸಬೇಲಾಗಿತ್ತು. ಆ ಬಳಿಕ ಅನಿವಾಸಿ ಭಾರತೀಯರಾದ ಯೆಣ್ಮಕಜೆ ಮನೆತನದ ಸುಧೀರಗ ಕುಮಾರ್ ಶೆಟ್ಟಿ ಈ ದೈವಸ್ಥಾನದ ಸಂಪೂರ್ಣ ಜೀರ್ಣೋದ್ಧಾರದ ಜವಾಬ್ದಾರಿಯನ್ನು ಹೊತ್ತು ಹಿಂದಿನ ಸ್ಥಳದಲ್ಲೇ ಹೊಸ ದೈವಸ್ಥಾನವನ್ನು ಕಟ್ಟಿ 2004 ಕ್ಕೆ ದೈವಕ್ಕೆ ಸಮರ್ಪಿಸಿದ್ದರು. ಆ ಬಳಿಕ ಇಲ್ಲಿನವರೆಗೂ ಇಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಪಿಲಿಚಾಂಡಿ ದೈವದ ನೇಮೋತ್ಸವ ನಡೆದುಕೊಂಡು ಬರುತ್ತಿದ್ದು, ಸಾವಿರ ಸಂಖ್ಯೆಯಲ್ಲಿ ಗ್ರಾಮಸ್ಥರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ವರ್ಷಕ್ಕೆ ಒಂದು ಬಾರಿ ಭತ್ತದ ನಾಟಿ ಮಾಡುವ ಗದ್ದೆಯಲ್ಲಿ ಈ ದೈವದ ನರ್ತನ ಸೇವೆ ನಡೆಯುತ್ತದೆ‌. ಅದರಲ್ಲೂ ಈ ದೈವವನ್ನು ಹುಲಿಯಾಕಾರದ ರಥದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಎಳೆಯುವುದು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೈವದ ಮೇಲಿನ ಅಪಾರ ಭಕ್ತಿ-ಗೌರವದ ಕಾರಣಕ್ಕಾಗಿಯೇ ಉರಿ ಬಿಸಿಲಿನಲ್ಲೂ ಈ ದೈವದ ನರ್ತನ ಸೇವೆಯಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರುತ್ತಾರೆ.

ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವಗಳಲ್ಲಿ ಪಿಲಿಚಾಂಡಿಯೂ ಒಂದಾಗಿದ್ದು, ಹುಲಿಯಂತೆ ನರ್ತನ ಮಾಡುವ ಈ ದೈವ ನಂಬಿದವರಿಗೆ ಇಂಬು ಕೊಡುತ್ತದೆ ಎನ್ನುವ ಬಲವಾದ ನಂಬಿಕೆ ಭಕ್ತರಲ್ಲಿದೆ.