Dakshina Kannada: ಮನೆಗೆ ಸೈನಿಕನ ಹೆಸರಿಟ್ಟು ಗೌರವ- ಯಾರೀ ಸೈನಿಕ ಗೊತ್ತಾ? | Dakshina Kannada: Honor the name of the soldier

Dakshina Kannada: ಮನೆಗೆ ಸೈನಿಕನ ಹೆಸರಿಟ್ಟು ಗೌರವ- ಯಾರೀ ಸೈನಿಕ ಗೊತ್ತಾ? | Dakshina Kannada: Honor the name of the soldier

Last Updated:

ದಕ್ಷಿಣ ಕನ್ನಡದ ಕುಶಾಲಪ್ಪರು ತಮ್ಮ ಮನೆಗೆ ವಿಂಗ್ ಕಮಾಂಡರ್ ಅಭಿನಂದನ್ ಹೆಸರಿಟ್ಟಿದ್ದಾರೆ. 2019ರಲ್ಲಿ ಪುಲ್ವಾಮ ದಾಳಿ ನಂತರ ಅಭಿನಂದನ್ ಪಾಕ್ ವಶದಲ್ಲಿದ್ದಾಗ, ಅವರ ಶೌರ್ಯಕ್ಕೆ ಗೌರವ ಸೂಚಿಸಲು ಈ ಹೆಸರನ್ನು ಇಡಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ದೇಶ ಸೇವೆಗಾಗಿ(Country Service) ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಬಿದಿಗಿಟ್ಟು ಸೇವೆ ಮಾಡುವ ಸೈನಿಕನಿಗೆ(Soldier) ಸಾಮಾನ್ಯ ಜನ ಎಷ್ಟು ಗೌರವಿಸಿದರೂ(Respect) ಕಡಿಮೆಯೇ. ಇಂಥ ಸೈನಿಕನಿಗೆ ತನ್ನ ಕೈಲಾದ ಗೌರವ ಕೊಡಬೇಕು ಎನ್ನುವ ಉದ್ಧೇಶದಿಂದ ತನ್ನ ಮನೆಗೆ ಓರ್ವ ಸಾಹಸಿ ಸೈನಿಕನ ಹೆಸರಿಟ್ಟ ದೇಶಪ್ರೇಮಿಯೊಬ್ಬರು(Nation Lover) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸುಣ್ಣಾಜೆ ಎಂಬಲ್ಲಿದ್ದಾರೆ.

ಸುಣ್ಣಾಜೆ ನಿವಾಸಿ ಕುಶಾಲಪ್ಪ ಎಂಬವರು ಆರು ವರ್ಷದ ಹಿಂದೆ ಸುಣ್ಣಾಜೆ ಎಂಬ ಪ್ರದೇಶದಲ್ಲಿ ಮನೆ ಕಟ್ಟುವ ಕೆಲಸ ಆರಂಭಿಸಿದ್ದರು. ಮನೆಯ ಕೆಲಸ ಮುಕ್ಕಾಲು ಭಾಗ ಪೂರ್ಣಗೊಂಡು ಇನ್ನೇನು ಫಿನಿಶಿಂಗ್ ಸ್ಟೇಜ್ ಗೆ ಬಂದ ಸಮಯವದು. ಭಾರತದಲ್ಲಿ ಉಗ್ರಗಾಮಿ ದಾಳಿಯನ್ನು ನಡೆಸಿತ್ತು. 2019 ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮದಲ್ಲಿ ಸಿ.ಆರ್.ಪಿ.ಎಫ್ ಯೋಧರು ಸಂಚರಿಸುತ್ತಿದ್ದ ವಾಹನದ ಮೇಲೆರಗಿದ್ದ ಉಗ್ರರು ಬಾಂಬ್ ದಾಳಿ ನಡೆಸಿ 40 ಸಿ.ಆರ್.ಪಿ.ಎಫ್ ಯೋಧರನ್ನು ಕೊಂದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯಸೇನೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ವಾಯುದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಪಾಕಿಸ್ತಾನ ಸೇನೆಯ ಯುದ್ಧ ವಿಮಾನಗಳನ್ನೂ ಹೊಡೆದುರುಳಿಸಿತ್ತು.

ಆ ಸಂದರ್ಭದಲ್ಲಿ ಭಾರತೀಯ ವಾಯಸೇನೆಯ ಯುದ್ಧ ವಿಮಾನ ಮಿಗ್ 21 ಅನ್ನು ಗುರಿಯಾಗಿಸಿ ಪಾಕ್ ಸೇನೆ ದಾಳಿ ನಡೆಸಿದ ಹಿನ್ನಲೆಯಲ್ಲಿ ವಿಮಾನದ ಪೈಲೆಟ್ ಆಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್ ನೆಲದಲ್ಲಿ ಬಿದ್ದಿದ್ದರು. ಈ ಘಟನೆ ವಿಶ್ವ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪಾಕ್ ಯುದ್ಧ ವಿಮಾನಗಳನ್ನು ಭಾರತೀಯ ನೆಲೆಯಿಂದ ಬೆನ್ನಟ್ಟಿದ್ದ ಅಭಿನಂದನ್ ಬಳಿಕ ಪಾಕ್ ಸೇನೆಯ ವಶವಾಗುತ್ತಾರೆ. ಅಭಿನಂದನ್ ಶೌರ್ಯಕ್ಕೆ ಇಡೀ‌ ದೇಶವೇ ಅಭಿಮಾನ ಪಡುತ್ತಿದ್ದ ಆ ಸಮಯದಲ್ಲಿ ಕುಶಾಲಪ್ಪರಿಗೆ ತನ್ನ ಮನೆಗೆ ಅಭಿನಂದನ್‌ ಹೆಸರನ್ನೇ ಇಡಬೇಕು ಎನ್ನುವ ಚಿಂತನೆ ಬಂದಿತ್ತು. ಪಾಕ್ ವಶದಲ್ಲಿದ್ದ ಅಭಿನಂದನ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಕುಶಾಲಪ್ಪರ ಮನೆಯೂ ಗೃಹಪ್ರವೇಶಕ್ಕೆ ಸಿದ್ಧಗೊಂಡು ಅಭಿನಂದನ್ ಎನ್ನುವ ಹೆಸರಿನಲ್ಲಿ ಮನೆ ಕರೆಯಲ್ಪಟ್ಟಿತು.

ಮನೆಯ ಮುಂಭಾಗದಲ್ಲಿ ಅಭಿನಂಧನ್ ಫೋಟೋ ಜೊತೆಗೆ ಹೆಸರನ್ನೂ ಕೆತ್ತಲಾಗಿದ್ದು, ಇದೊಂದು ಭಾರತೀಯ ಸೈನಿಕನಿಗೆ ನಮ್ಮ ಸಣ್ಣ ಗೌರವ ಎಂದು ಕುಶಾಲಪ್ಪ ತಿಳಿಸಿದ್ದಾರೆ. ಸಾಮಾನ್ಯ ಜನರಾದ ನಮಗೆ ಬೇರೇನನ್ನೂ ಮಾಡಲು ಸಾಧ್ಯವಿಲ್ಲ. ಈ ರೀತಿಯಾದರೂ ಸೈನಿಕನಿಗೆ ಗೌರವ ಕೊಡಬಹುದು ಎಂದು ತೋಚಿದಾಗ ಸೈನಿಕನ ಹೆಸರನ್ನೇ ಇಟ್ಟಿರುವುದಾಗಿ ಅವರು ಹೇಳಿದ್ದಾರೆ. ವ್ಯಕ್ತಿಯ ಜೀವನದಲ್ಲಿ ಸ್ವಂತ ಮನೆ, ಕಟ್ಟಡ ಕಟ್ಟೋದು ನಿಜಕ್ಕೂ ಒಂದು‌ ಕನಸಾಗಿದ್ದು, ಆ ಕನಸು ನನಸಾದಾಗ ತನ್ನ ಮನೆಗೆ, ತನ್ನ ಕಟ್ಟಡಕ್ಕೆ ದೇವರ ಇಲ್ಲವೇ ತನಗೆ ಇಷ್ಟವಾದವರ ಹೆಸರನ್ನು ಇಡುತ್ತಾರೆ. ಆದರೆ ಕುಶಾಲಪ್ಪ ಕುಟುಂಬ ಅಭಿನಂದನ್ ಹೆಸರಿಟ್ಟಿರೋದು‌ ನಿಜಕ್ಕೂ ಅಭಿನಂದನಾರ್ಹ ಎನ್ನುತ್ತಾರೆ ಮಾಜಿ ತಾಲೂಕು ಪಂಚಾಯತ್‌ ಸದಸ್ಯ ಮಂಜುನಾಥ್ ಸಾಲ್ಯಾನ್ ಬಾರ್ಯ.