Mangaluru: ಮೀನುಗಾರರು ತಟ್ಟಿದ ಹೀಟ್​​​ವೇವ್ ಬಿಸಿ; ಮೀನು ಸಿಗದೆ ಕಂಗಾಲಾದ ಮೊಗವೀರರು! | Mangaluru Fishermen suffer from heatwave panicked as they could not catch fish

Mangaluru: ಮೀನುಗಾರರು ತಟ್ಟಿದ ಹೀಟ್​​​ವೇವ್ ಬಿಸಿ; ಮೀನು ಸಿಗದೆ ಕಂಗಾಲಾದ ಮೊಗವೀರರು! | Mangaluru Fishermen suffer from heatwave panicked as they could not catch fish

Last Updated:

ಕರಾವಳಿಗೆ ಹೀಟ್‌ವೇವ್ ಅಂದರೆ ಬಿಸಿಗಾಳಿಯ ಆಘಾತ ತಟ್ಟಿದೆ. ಸದ್ಯ ಮಂಗಳೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನ ದಾಖಲಾಗಿದೆ. ಪರಿಣಾಮ ಈ ಬಿಸಿಲಾಘಾತಕ್ಕೆ ಸಮುದ್ರದ ನೀರು ಬಿಸಿಯಾಗುತ್ತಿದ್ದು, ಮೀನುಗಳು ಸಮುದ್ರದಾಳಕ್ಕೆ ಹೋಗಿರುವುದರಿಂದ ಅಪಾರ ನಷ್ಟ ಎದುರಾಗಿದೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಕರಾವಳಿಯಲ್ಲಿ (Coastal Karnataka) ಸದ್ಯ ಮೂರು ನಾಲ್ಕು ದಿನಗಳಿಂದ ಬಿಸಿಯಾದ ವಾತಾವರಣವಿದ್ದು (Karnataka Weather Update), ಮಧ್ಯಾಹ್ನದ ಬಳಿಕ ರಸ್ತೆಗೆ ಇಳಿಯುವುದು ಅಸಾಧ್ಯವೆನಿಸಿದೆ. ಇದೀಗ ಮೀನುಗಾರಿಕೆಗೂ (Fishing) ಹೀಟ್‌ವೇವ್ ಬಿಸಿತಟ್ಟಿದ್ದು, ಮೀನುಗಾರಿಕೆಗೆ ಹೋದವರು ನಿಗದಿತ ಪ್ರಮಾಣದಲ್ಲಿ ಮೀನು ದೊರಕದೆ ಕಂಗಾಲಾಗಿದ್ದಾರೆ.

ಖಾಲಿ ಬೋಟ್‌ನೊಂದಿಗೆ ಮರಳಿ ದಡಕ್ಕೆ

ಹೌದು, ಕರಾವಳಿಗೆ ಹೀಟ್‌ವೇವ್ ಅಂದರೆ ಬಿಸಿಗಾಳಿಯ ಆಘಾತ ತಟ್ಟಿದೆ. ಸದ್ಯ ಮಂಗಳೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನ ದಾಖಲಾಗಿದೆ. ಪರಿಣಾಮ ಈ ಬಿಸಿಲಾಘಾತಕ್ಕೆ ಸಮುದ್ರದ ನೀರು ಬಿಸಿಯಾಗುತ್ತಿದ್ದು, ಮೀನುಗಳು ಸಮುದ್ರದಾಳಕ್ಕೆ ಹೋಗಿ, ಬಹಳಷ್ಟು ನಾಟಿಕಲ್ ದೂರ ಹೋಗಿ ರಕ್ಷಣೆ ಪಡೆಯುತ್ತಿದೆ. ಇದರಿಂದ ಮೀನುಗಾರಿಕೆಗೆ ತೆರಳಿದ ಬೋಟುಗಳು ನಿಗದಿತ ಪ್ರಮಾಣದ ಮೀನುಗಳು ದೊರಕದೆ ಖಾಲಿ ಬೋಟ್‌ನೊಂದಿಗೆ ಮರಳಿ ದಡ ಸೇರುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲಾಳಕ್ಕೆ ಮೀನುಗಾರಿಕೆಗೆ ತೆರಳುವ ಮೀನುಗಾರರು ಕೈಸುಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಮೀನುಗಾರರಿಗೆ ಬಿಸಿಗಾಳಿಯಘಾತ

ಈ ಋತುವಿನ ಆರಂಭದಲ್ಲಿ ಅಧಿಕ ಮಳೆಯಾಗಿ ಮೀನುಗಾರಿಕೆ ನಿಷೇಧವಾಗಿ ಸಮುದ್ರಕ್ಕೆ ಬೋಟ್ ಇಳಿಸದೆ ಮೀನುಗಾರರು ತೊಂದರೆ ಅನುಭವಿಸಿದ್ದರು. ಆ ಬಳಿಕದ ದಿನಗಳಲ್ಲಿ ಮೀನುಗಳು ದೊರಕದೆ, ಆ ನಷ್ಟವನ್ನು ಭರಿಸಲು ಯತ್ನಿಸುತ್ತಿದ್ದ ಮೀನುಗಾರರಿಗೆ ಇದೀಗ ಬಿಸಿಗಾಳಿಯಘಾತ ಭಾರೀ ದೊಡ್ಡ ಹೊಡೆತ ನೀಡಿದೆ‌. ಸಂಪೂರ್ಣ ನಷ್ಟ ಹೊಂದಿರುವ ಮೀನುಗಾರರಿಗೆ ರಾಜ್ಯ ಸರಕಾರ ಈ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕು.

ಇದನ್ನೂ ಓದಿ: Kolar: ಅದ್ಧೂರಿಯಾಗಿ ನಡೆದ ಭಯಾನಕ ಸ್ಮಶಾನ ಪೂಜಾ ಮಹೋತ್ಸವ; ತರಕಾರಿಗಾಗಿ ಮುಗಿಬಿದ್ದ ಭಕ್ತರು!

ಬಡ ಮೀನುಗಾರರು ಬೀದಿಗೆ ಬೀಳುವ ಪರಿಸ್ಥಿತಿ

ಅಲ್ಲದೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ವೆಸ್ಟ್ ಕೋಸ್ಟ್ ಹಾಗೂ ಈಸ್ಟ್ ಕೋಸ್ಟ್ ಮೀನುಗಾರರಿಗೆ ಒಂದೇ ರೀತಿಯ ಕಾನೂನು ಜಾರಿಗೊಳಿಸಿದರೆ ಕರ್ನಾಟಕದ ಬಡ ಮೀನುಗಾರರು ಬದುಕಲು ಸಾಧ್ಯ. ಇಲ್ಲದಿದ್ದಲ್ಲಿ ಸಾಲ-ಸೋಲ ಮಾಡಿ, ಚಿನ್ನಾಭರಣ ಅಡವಿಟ್ಟು ಮೀನುಗಾರಿಕೆ ನಡೆಸುವ ಮೀನುಗಾರರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸರಕಾರ ಮೀನುಗಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ತುರ್ತು ಅಗತ್ಯವಿದೆ.