Last Updated:
ಶಿಲ್ಪಾ ಶೆಟ್ಟಿಯ ಸರಳತೆ, ಹುಟ್ಟೂರ ಮೇಲಿನ ಪ್ರೀತಿಗೆ ಫೀದಾ ಆಗಿದ್ದಾರೆ. ಬೆಳೆದ ಬಳಿಕ ಹುಟ್ಟೂರನ್ನೇ ಮರೆಯುವ ನಟಿಗಳ ನಡುವೆ ಹುಟ್ಟೂರ ಬಗ್ಗೆ ಅತೀವ ಪ್ರೀತಿ ಹೊಂದಿದ ಶಿಲ್ಪಾ ಶೆಟ್ಟಿ ಬಗ್ಗೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಅಧಿದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ (Sri Durgaaparameshwari Temple). ಕಟೀಲಿನ ಶ್ರೀದೇವಿ ಇಡೀ ಜಿಲ್ಲೆಯ ಜನರ ಆರಾಧ್ಯ ದೇವಿ.ಕಟೀಲು ಭ್ರಮರಾಂಭಿಕೆಯ ಪಾದತಳ ಎಲ್ಲರಿಗೂ ಇಷ್ಟವಾದ ಜಾಗ.ಹಾಗೇಯೇ ಜನಸಾಮಾನ್ಯರಿಂದ ಹಿಡಿದು ಕರಾವಳಿ ಮೂಲದ ಸ್ಟಾರ್ ಗಳೆಲ್ಲಾ ಕಟೀಲು ದೇವಿಯ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಮಾಡುತ್ತಾರೆ.ಕಟೀಲು ಶ್ರೀ ದೇವಿಯನ್ನು ಅಮ್ಮ ಎಂದು ಕರೆಯುವ ಬಾಲಿವುಡ್ (Bollywood) ಸ್ಟಾರ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ತನ್ನ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕಟೀಲು ಸಮೀಪದ ನಿಡ್ಡೋಡಿಯಲ್ಲಿರುವ ಕುಟುಂಬದ ಮನೆಗೆ ಭೇಟಿ ನೀಡಲು ಬರುವ ಸಂದರ್ಭದಲ್ಲಿ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಪ್ರತೀ ಭಾರಿ ಮನೆಗೆ ಭೇಟಿ ನೀಡುವ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಶಿಲ್ಪಾ ಶೆಟ್ಟಿ. ಅಂತೆಯೇ ಈ ಬಾರಿಯೂ ನಟಿ ತನ್ನ ತಾಯಿ ಸುನಂದಾ ಶೆಟ್ಟಿ ಮತ್ತು ತಂಗಿ ಶಮಿತಾ ಶೆಟ್ಟಿಯೊಂದಿಗೆ ದೇವಿಯ ದರ್ಶನ ಪಡೆದಿದ್ದಾರೆ.
ಶಿಲ್ಪಾ ಶೆಟ್ಟಿ , ಕಟೀಲು ದೇವಿಗೆ ಮಲ್ಲಿಗೆ ಹೂವು, ಸೀರೆಯನ್ನು ಸಮರ್ಪಣೆ ಮಾಡಿದ್ದಾರೆ. ದೇವಿಯ ಮಲ್ಲಿಗೆ ಪ್ರಸಾದವನ್ನು ಅರ್ಚಕರಿಂದ ಸ್ವೀಕರಿಸಿದ ಶಿಲ್ಪಾ ಬಳಿಕ ಅದೇ ಮಲ್ಲಿಗೆ ಹೂವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿ ಬ್ಯಾಕ್ ಟು ಹೋಮ್. ನಮ್ಮ ತುಳುನಾಡು ಅಂತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Basava Sagar Reservoir: ನಾರಾಯಣಪುರ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಬಿಡುಗಡೆ; ನೀರು ಬಿಟ್ರೆ ತಪ್ಪೇನು ಅಂದ್ರು ಸಚಿವರು
ಶಿಲ್ಪಾ ಶೆಟ್ಟಿಯ ಸರಳತೆ, ಹುಟ್ಟೂರ ಮೇಲಿನ ಪ್ರೀತಿಗೆ ಫೀದಾ ಆಗಿದ್ದಾರೆ. ಬೆಳೆದ ಬಳಿಕ ಹುಟ್ಟೂರನ್ನೇ ಮರೆಯುವ ನಟಿಗಳ ನಡುವೆ ಹುಟ್ಟೂರ ಬಗ್ಗೆ ಅತೀವ ಪ್ರೀತಿ ಹೊಂದಿದ ಶಿಲ್ಪಾ ಶೆಟ್ಟಿ ಬಗ್ಗೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಶಿಲ್ಪಾ ಶೆಟ್ಟಿ ಭೇಟಿ ನೀಡಿದ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ ಇತರರು ಉಪಸ್ಥಿತರಿದ್ದರು.
Dakshina Kannada,Karnataka
February 28, 2025 1:05 PM IST