Last Updated:
ಮಂಗಳೂರಿನಲ್ಲಿ ಮುಂಗಾರು ಮಳೆ ಪ್ರವಾಸಿಗರಿಗೆ ಖುಷಿ ತಂದಿದೆ. ತಣ್ಣೀರು ಬಾವಿ ಬೀಚ್ನಲ್ಲಿ ಮಳೆಯ ಹಿನ್ನಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಯುವತಿಯರು ರೀಲ್ಸ್, ಫೋಟೋ ಶೂಟ್ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಮುಂಗಾರು(Monsoon Rains) ಆಗಮನ ಇಳೆಗೆ ಖುಷಿ ತಂದಿದೆ. ಜಸ್ಟ್ ಒಂದು ವಾರದ ಹಿಂದೆ ‘ವಾ ಶೆಕೆ ಮಾರ್ರೆ, ಅಂತಾ ಹೇಳುತ್ತಿದ್ದ ಜನ ಈಗ ‘ವಾ ಬರ್ಸ ಮಾರ್ರೆ’ ಅಂತಾ ಹೇಳುವಷ್ಟು ವಾತಾವರಣ ಬದಲಾಗಿದೆ. ಕಳೆದ ಮೂರು ದಿನಗಳಿಂದ ಮಂಗಳೂರು ನಗರದಲ್ಲಿ ಎಡೆ ಬಿಡದೆ ಮಳೆಯಾಗುತ್ತಿದೆ. ಮಳೆಗಾಲದ(Rainy Season) ದಟ್ಟವಾದ ಮಳೆ ಮಂಗಳೂರು ನಗರವನ್ನು(Mangaluru City) ಆವರಿಸಿದೆ. ಮಂಗಳೂರು ಪ್ರವಾಸಿಗರಿಗೆ(Tourists) ಮಿನಿ ಊಟಿಯ(Mini Ooty) ಅನುಭವವನ್ನು ನೀಡುತ್ತಿದೆ.
ಸಾಮಾನ್ಯವಾಗಿ ಮೇ ತಿಂಗಳಲ್ಲಿ ಭಾರೀ ಬಿಸಿಲಿನ ವಾತಾವರಣ ಮಂಗಳೂರಿನಲ್ಲಿ ಇರುತ್ತದೆ. ಮಂಗಳೂರಿನಲ್ಲಿ ಬಿಸಿಲಿರುತ್ತದೆ ಅಂದುಕೊಂಡು ಮಂಗಳೂರಿಗೆ ಬಂದ ಪ್ರವಾಸಿಗರಿಗೆ ಮುಂಗಾರು ಮಳೆ ಖುಷಿಯನ್ನು ತಂದಿದೆ. ಮಂಗಳೂರಿನ ತಣ್ಣೀರು ಬಾವಿ ಬೀಚ್ ನಲ್ಲಿ ಮಳೆಯ ಹಿನ್ನಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಬೀಚ್ನ ಕುರ್ಚಿಗಳು ಖಾಲಿ ಖಾಲಿಯಾಗಿದೆ. ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆ, ಸಮುದ್ರಕ್ಕೆ ಇಳಿಯಲು ಪ್ರವಾಸಿಗರಿಗೆ ಅವಕಾಶ ಇಲ್ಲ. ಹಾಗಾಗಿ ಪ್ರವಾಸಿಗರು ದಡದಲ್ಲೇ ಎಂಜಾಯ್ ಮಾಡುತ್ತಿದ್ದಾರೆ.
ಹನಿ ಹನಿ ಮಳೆಯ ಜೊತೆಗೆ ಬೀಸುವ ತಂಗಾಳಿಗೆ ಮೈಯೊಡ್ಡಿ ಪ್ರವಾಸಿಗರು ಬೀಚ್ನಲ್ಲಿ ಮಜಾ ಮಾಡುತ್ತಿದ್ದಾರೆ. ಯುವತಿಯರು ರೀಲ್ಸ್, ಫೋಟೋ ಶೂಟ್ ಗಳನ್ನು ಮಾಡುತ್ತಿರುವ ದೃಶ್ಯ ತಣ್ಣೀರು ಬಾವಿ ಬೀಚ್ನಲ್ಲಿ ಕಂಡುಬಂದಿದೆ.
Mangalore,Dakshina Kannada,Karnataka
May 27, 2025 11:10 AM IST