Dakshina Kannada: ಯಾಂತ್ರೀಕರಣದ ಹೊಡೆತ- ಮಾಯವಾಗುವ ಹಂತಕ್ಕೆ ತಲುಪಿದ ಸಾಂಪ್ರದಾಯಿಕ ಕಮ್ಮಾರಿಕೆ ವೃತ್ತಿ! | the traditional profession of blacksmithing has reached the point of disappearing!

Dakshina Kannada: ಯಾಂತ್ರೀಕರಣದ ಹೊಡೆತ- ಮಾಯವಾಗುವ ಹಂತಕ್ಕೆ ತಲುಪಿದ ಸಾಂಪ್ರದಾಯಿಕ ಕಮ್ಮಾರಿಕೆ ವೃತ್ತಿ! | the traditional profession of blacksmithing has reached the point of disappearing!

Last Updated:

ದಕ್ಷಿಣ ಕನ್ನಡ: ಸಾಂಪ್ರದಾಯಿಕ ಕಮ್ಮಾರಿಕೆ ಯಾಂತ್ರೀಕರಣದ ಹೊಡೆತದಿಂದ ಮಾಯವಾಗುವ ಹಂತಕ್ಕೆ ತಲುಪಿದೆ. ಆದರೂ ಗ್ರಾಮೀಣ ಭಾಗದಲ್ಲಿ ಇಂದಿಗೂ ಬೇಡಿಕೆಯಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸಾಂಪ್ರದಾಯಿಕ ಕಮ್ಮಾರ ಕಸುಬು(Blacksmithing) ಇಂದು ಮಾಯವಾಗುವ ಹಂತಕ್ಕೆ‌ ತಲುಪಿದ್ದು, ಈಗ ಏನಿದ್ದರೂ ಯಂತ್ರೋಪಕರಣಗಳಿಂದ ಮಾಡಿದ ಕಬ್ಬಿಣದ ಆಯುಧಗಳೇ ಮಾರುಕಟ್ಟೆಯನ್ನು(Market) ತುಂಬಿಕೊಂಡಿವೆ. ಹೆಚ್ಚಾಗಿ ಕೃಷಿಗೆ ಬಳಸುವ ಕತ್ತಿ, ಹಾರೆ, ಪಿಕ್ಕಾಸು ಮೊದಲಾದ ಉಪಕರಣಗಳನ್ನು ಸಿದ್ಧಪಡಿಸುವ ಕಾಯಕವನ್ನು ನಡೆಸಿಕೊಂಡು ಬರುವವರನ್ನು ಕಮ್ಮಾರರು ಎಂದು ಕರೆಯಲಾಗುತ್ತಿತ್ತು. ಕಬ್ಬಿಣದ ಕೆಲಸವನ್ನು ಅತ್ಯಂತ ನಾಜೂಕಾಗಿ ಮಾಡುವ ಈ ವೃತ್ತಿ ತನ್ನ ಸಾಂಪ್ರದಾಯಿಕ ಶೈಲಿಯಿಂದ ಯಾಂತ್ರಿಕ ಶೈಲಿಗೆ ಬದಲಾವಣೆಯಾಗಿದೆ. ಆದರೂ ಗ್ರಾಮೀಣ ಭಾಗದಲ್ಲಿ(Rural Side) ಇಂದಿಗೂ ಇದೇ ಕಮ್ಮಾರರಿಗೆ ಹೆಚ್ಚಿನ ಬೇಡಿಕೆಯಿದೆ.

ಕೃಷಿಗೆ ಬಳಸುವ ಕತ್ತಿ ಹಾಗು ಇತರ ಆಯುಧಗಳನ್ನು ಸರಿಪಡಿಸುವ, ಹೊಸದಾಗಿ ತಯಾರಿಸುವ ಈ ಕುಲ ಕಸುಬುದಾರರು ಗ್ರಾಹಕನಿಗೆ ಬೇಕಾದ ರೀತಿಯಲ್ಲಿ ಗಟ್ಟಿ ಮುಟ್ಟಾದ ಮತ್ತು ಹೆಚ್ಚು ಬಾಳಿಕೆಗೆ ಬರುವ ಆಯುಧಗಳನ್ನು ತಯಾರಿಸಿ ಕೊಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಇದೇ ಕಾರಣಕ್ಕಾಗಿಯೇ ಯಂತ್ರಗಳನ್ನು ಬಳಸಿ ಕಬ್ಬಿಣದ ಆಯುಧಗಳನ್ನು ತಯಾರಿಸುವ ಸಾಕಷ್ಟು ವ್ಯವಸ್ಥೆಗಳಿದ್ದರೂ, ಸಾಂಪ್ರದಾಯಿಕವಾಗಿ ಆಯುಧ ತಯಾರಿಸುವ ಈ‌ ಕೆಲಸಗಾರರಿಗೆ ಮಾತ್ರ ಬೇಡಿಕೆ ಮಾತ್ರ ಕುಸಿದಿಲ್ಲ.

ಯಂತ್ರಗಳಲ್ಲಿ ಆಯುಧಗಳನ್ನು‌ ತಯಾರಿಸುವ ಸಂದರ್ಭದಲ್ಲಿ ಕಬ್ಬಿಣದ ಗುಣಮಟ್ಟದ ಬಗ್ಗೆ ಕೆಲವೊಮ್ಮೆ ರಾಜಿ‌ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಆಯುಧಗಳನ್ನು ಹಿಡಿಯುವ ಮರದ‌ ಹಿಡಿಯಲ್ಲೂ ವ್ಯತ್ಯಾಸಗಳು‌ ಬರುತ್ತವೆ. ಅಲ್ಲದೆ ಆಯುಧಗಳು ಕೆಲವೊಮ್ಮೆ ವಕ್ರವಾಗಿ‌ ಇರೋದೂ ಕಂಡು ಬರುತ್ತದೆ. ಆದರೆ ಕಮ್ಮಾರರು ಸಿದ್ಧಪಡಿಸಿದ ಆಯುಧಗಳಲ್ಲಿ ನ್ಯೂನ್ಯತೆಗಳ‌‌ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಹೆಚ್ಚಾಗಿ ಕಮ್ಮಾರರು ಕಬ್ಬಿಣ ಆಯುಧಗಳು ಹೆಚ್ಚು ಬಾಳಿಕೆ ಬರಬೇಕು ಎನ್ನುವ ಕಾರಣಕ್ಕೆ ಬೀಡು ಕಬ್ಬಿಣವನ್ನೇ ಈ ಕೆಲಸಗಾರರು ಬಳಸುತ್ತಾರೆ. ವಾಹನಗಳ ಸ್ಪ್ರಿಂಗ್ ಗೆ ಬಳಸುವ ಕಬ್ಬಿಣವನ್ನು ಆಯುಧಗಳನ್ನು ತಯಾರಿಸಲು ಬಳಸಲಾಗುತ್ತಿದ್ದು, ಇದರಿಂದಾಗಿ ಆಯುಧಗಳು ಹೆಚ್ಚು ಬಾಳಿಕೆ ಮಾತ್ರವಲ್ಲದೆ ಉತ್ತಮ ಗುಣಮಟ್ಟದ ಆಯುಧವಾಗಿಯೂ ಇವುಗಳು ಬಳಕೆಯಾಗುತ್ತದೆ.

ಕಮ್ಮಾರಿಕೆ ವೃತ್ತಿಯನ್ನು ಇಂದಿನ ಯುವಜನತೆ ಸಂಪೂರ್ಣವಾಗಿ ಕೈ ಬಿಡುವ ಹಂತಕ್ಕೆ ತಲುಪಿದೆ. ಒಂದೆಡೆ ಯಾಂತ್ರೀಕರಣದ ಹೊಡೆತ ಇನ್ನೊಂದೆಡೆ ಅತ್ಯಂತ ಕಷ್ಟದ ಕೆಲಸವಾಗಿರುವ ಕಾರಣ ಕಮ್ಮಾರಿಕೆಯನ್ನು ತಮ್ಮ ಕುಲ ಕಸುಬು ಎಂದು ನೆಚ್ಚಿಕೊಂಡು ಬಂದ ಕುಟುಂಬಗಳ ಯುವ ಪೀಳಿಗೆ ಈ ವೃತ್ತಿಗೆ ಗುಡ್ ಬೈ ಹೇಳಿಯಾಗಿದೆ. ಇನ್ನೇನಿದ್ದರೂ ಹಳೆಯ ತಲೆಮಾರಿನ ಜನರಷ್ಡೇ ಈ ಕೆಲಸಗಳನ್ನು ಸದ್ಯದ ಮಟ್ಟಿಗೆ ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಈ ಕಸುಬು ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಅನ್ನೋದು ಮಾತ್ರ ಯಕ್ಷಪ್ರಶ್ನೆಯಾಗಿಯೇ ನಮ್ಮ, ನಿಮ್ಮ ಮುಂದಿದೆ.