Last Updated:
ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ಕೊಟ್ಟವರಲ್ಲಿ ಬಹುತೇಕರು ನೇತ್ರಾವತಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಆದ್ರೆ ಹೆಚ್ಚಿನ ಭಕ್ತಾದಿಗಳು ಪಾಪ ತೊಳೆಯುವ ಭರದಲ್ಲಿ ನೇತ್ರಾವತಿ ನದಿಯನ್ನು ಸಂಪೂರ್ಣ ಮಲಿನಗೊಳಿಸಿದ್ದರು.
ದಕ್ಷಿಣ ಕನ್ನಡ: ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದವರು ಸ್ನಾನಘಟ್ಟಗಳಲ್ಲಿ ಪುಣ್ಯಸ್ನಾನ ಮಾಡುವುದು ಸಹಜ. ಆದರೆ ಭಕ್ತಾದಿಗಳ ಬೇಜವಾಬ್ದಾರಿಯಿಂದ ಪವಿತ್ರ ಪುಣ್ಯನದಿಗಳು(River) ತಮ್ಮ ಸ್ವಚ್ಛತೆಯನ್ನೇ ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ(Dharmastala Netravati River) ಬೃಹತ್ ಸ್ವಚ್ಛತಾ ಆಂದೋಲನವೇ(Big Cleaning Campaign) ನಡೆದಿದೆ.
ದಕ್ಷಿಣ ಭಾರತದ ಪ್ರಸಿದ್ದ ಪುಣ್ಯಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ಕೊಟ್ಟವರಲ್ಲಿ ಬಹುತೇಕರು ನೇತ್ರಾವತಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಆದ್ರೆ ಹೆಚ್ಚಿನ ಭಕ್ತಾದಿಗಳು ಪಾಪ ತೊಳೆಯುವ ಭರದಲ್ಲಿ ನೇತ್ರಾವತಿ ನದಿಯನ್ನು ಸಂಪೂರ್ಣ ಮಲಿನಗೊಳಿಸಿದ್ದರು. ಎಲ್ಲಿ ನೋಡಿದರೂ ಬಟ್ಟೆ, ಶಾಂಪೂ, ಸಾಬೂನುಗಳ ರಾಶಿಯಿಂದ ಕಲುಷಿತಗೊಂಡಿದ್ದ ನೇತ್ರಾವತಿ ಈಗ ಪಾವನಗೊಂಡಿದ್ದಾಳೆ. ಬೆಳ್ತಂಗಡಿಯ ʼಬದುಕು ಕಟ್ಟೋಣ ಬನ್ನಿʼ ತಂಡ ಯಶಸ್ವಿ ನೇತ್ರಾವತಿ ಸ್ವಚ್ಛತಾ ಅಭಿಯಾನ ನಡೆಸಿದೆ.
ಇದನ್ನೂ ಓದಿ: Belagavi: ಗಡಿಯಲ್ಲಿ ಅದ್ದೂರಿ ಹೋಳಿ ಆಚರಣೆ- ಬಣ್ಣದೋಕುಳಿ ಆಡಿದ ಯುವಕರು!
ಕೆಲವು ದಿನಗಳ ಹಿಂದಷ್ಟೇ ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಪುಣ್ಯಕ್ಷೇತ್ರಗಳ ಅಧೀನದಲ್ಲಿ ಬರುವ ನದಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಶಾಂಪೂ, ಸೋಪುಗಳ ಮಾರಾಟಕ್ಕೆ ನಿರ್ಬಂಧ ಹೇರಬೇಕು ಹಾಗೂ ಭಕ್ತಾದಿಗಳು ಬಟ್ಟೆಗಳನ್ನು ಸ್ನಾನಘಟ್ಟದ ಬಳಿಯೇ ಬಿಟ್ಟು ಹೋಗದಂತೆ ಸೂಕ್ತ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಇದೀಗ 1 ಸಾವಿರಕ್ಕೂ ಅಧಿಕ ಜನರು ಒಂದಾಗಿ ನೇತ್ರಾವತಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಸ್ವಚ್ಛತಾ ಕಾರ್ಯದ ಸಮಯದಲ್ಲಿ ನೇತ್ರಾವತಿಯ ಒಡಲಲ್ಲಿ ಲೋಡ್ಗಟ್ಟಲೇ ಬಟ್ಟೆಗಳು, ಶಾಂಪೂ, ಸೋಪಿನ ಪ್ಯಾಕೆಟ್ಗಳು ದೊರಕಿವೆ. ಬೆಳ್ತಂಗಡಿ ಪೊಲೀಸ್ ಇಲಾಖೆ ಹಾಗೂ ಎಸ್ಡಿಎಂ ಕಾಲೇಜು ವಿದ್ಯಾರ್ಥಿಗಳ ಈ ಮಹತ್ಕಾರ್ಯದಿಂದ ನೇತ್ರಾವತಿ ಇದೀಗ ಶುದ್ಧವಾಗಿದ್ದಾಳೆ.
ಇನ್ನಾದರೂ ಭಕ್ತರು ತಮ್ಮ ಪಾಪ ತೊಳೆದುಕೊಳ್ಳುವ ಭರದಲ್ಲಿ ಪುಣ್ಯನದಿಗಳ ಮಲಿನವಾಗದಂತೆ ನೋಡಿಕೊಳ್ಳಬೇಕಿದೆ. ಈ ಮೂಲಕ ಮುಂದಿನ ವರ್ಷ ಈ ರೀತಿ ನೇತ್ರಾವತಿ ಸ್ವಚ್ಛತಾ ಅಭಿಯಾನ ನಡೆಸುವಂತ ಪರಿಸ್ಥಿತಿ ನಿರ್ಮಾಣ ಮಾಡಬಾರದು ಎಂಬುದೇ ಈ ಕಾರ್ಯಕ್ರಮದ ಆಶಯ.
Dakshina Kannada,Karnataka
March 17, 2025 12:09 PM IST