Last Updated:
ಆರ್ಸಿಬಿ ಅನ್ಸೋಲ್ಡ್ ಈವೆಂಟ್ನಲ್ಲಿ ಆರ್ಸಿಬಿ ಅಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲ, ಇದೇ ಸಂದರ್ಭದಲ್ಲಿ ದಿವಂಗತ ನಟ ಡಾ. ಪುನೀತ್ ರಾಜ್ಕುಮಾರ್ ಜನ್ಮ ದಿನದ ಅಂಗವಾಗಿ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು.
ಬೆಂಗಳೂರು: ಇದೇ ಮಾರ್ಚ್ 22 ರಿಂದ ಐಪಿಎಲ್ (IPL Season 18) ಸೀಸನ್ 18 ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ (M Chinnaswamy) ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರ್ಸಿಬಿ ತಮ್ಮ 2025ನೇ ಸಾಲಿನ ಅನ್ಬಾಕ್ಸ್ ಈವೆಂಟ್ (Unbox Event) ಅನ್ನು ಅದ್ಧೂರಿಯಾಗಿ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಆರ್ಸಿಬಿ ಅಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲ, ಇದೇ ಸಂದರ್ಭದಲ್ಲಿ ದಿವಂಗತ ನಟ ಡಾ. ಪುನೀತ್ ರಾಜ್ಕುಮಾರ್ ಜನ್ಮ ದಿನದ ಅಂಗವಾಗಿ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು.
ಪುನೀತ್ ರಾಜಕುಮಾರ್ ಜನ್ಮದಿನಾಚರಣೆ
ಆರ್ಸಿಬಿ ಅಭಿಮಾನಿಗಳಿಗೆ ತಂಡದ ಹೊಸ ಆಟಗಾರರನ್ನು ಪರಿಚಯಿಸಿಕೊಡುವ ಈ ಸಮಾರಂಭದಲ್ಲಿ ಅಭಿಮಾನಿಗಳಿಗಾಗಿ ಮನರಂಜನೆ ಕಾರ್ಯಕ್ರಮ ಹಾಗೂ ಆಟಗಾರರಿಂದ ವಿಶೇಷ ಚಟುವಟಿಕೆಗಳನ್ನು ಕೂಡ ಮೈದಾನದಲ್ಲಿ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷವಾಗಿ ನಮನ ಸಲ್ಲಿಸಲಾಯಿತು.
ಮೊಬೈಲ್ ಟಾರ್ಚ್ ಬೆಳಗಿದ ಕೊಹ್ಲಿ
ಪುನಿತ್ ರಾಜ್ಕುಮಾರ್ ನಟನೆಯ ರಾಜಕುಮಾರ ಸಿನಿಮಾದ ಗೀತೆಯನ್ನು ಹಾಡುವ ಮೂಲಕ ಹಾಗೂ ಮೈದಾನದಲ್ಲಿ ಪುನೀತ್ ರಾಜ್ಕುಮಾರ್ ಬೃಹತ್ ಫೋಟೋ ಪ್ರದರ್ಶನ ಹಾಗೂ ಅನೇಕ ಕಲಾವಿದರು ಇದೇ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳು ಮೊಬೈಲ್ ಟಾರ್ಚ್ ಆನ್ ಮಾಡಿ, ನೀನೇ ರಾಜಕುಮಾರ ಹಾಡು ಹಾಡಿ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಮಾತ್ರವಲ್ಲ ಅಭಿಮಾನಿಗಳ ಜೊತೆಗೆ ವಿರಾಟ್ ಕೊಹ್ಲಿ ಕೂಡ ಮೊಬೈಲ್ ಟಾರ್ಚ್ ಹಾಕಿ ಗೌರವ ಸಲ್ಲಿಸಿದರು.
ಬೆಟ್ಟದ ಹೂವು ಮೂಲಕ ಸಿನಿಮಾ ರಂಗಕ್ಕೆ ಅಪ್ಪು ಎಂಟ್ರಿ
ಆರ್ಸಿಬಿ ಮ್ಯಾನೇಜ್ಮೆಂಟ್ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ 50 ನೇ ಜನ್ಮದಿನವನ್ನು ಸ್ಮರಿಸಿ ಗೌರವ ಸಲ್ಲಿಸಿತು. “ಪವರ್ ಸ್ಟಾರ್” ಎಂದು ಪ್ರೀತಿಯಿಂದ ಕರೆಯಲ್ಪಡುವ ಪುನೀತ್ ರಾಜ್ಕುಮಾರ್, ಕನ್ನಡ ಚಿತ್ರರಂಗದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾಗಿದ್ದರು. ಮಾರ್ಚ್ 17, 1975 ರಂದು ಜನಿಸಿದ ಅವರು ಬಾಲ ಕಲಾವಿದನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. “ಬೆಟ್ಟದ ಹೂವು” ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದರು.
ಇದನ್ನೂ ಓದಿ: Puneeth Rajkumar: ಅಪ್ಪುವಿನ 32 ಸಿನಿಮಾ ಹೆಸರು ಹಚ್ಚೆ, ಜಮೀನು ಮಧ್ಯೆ ಪುತ್ಥಳಿ! ಅಭಿಮಾನಿ ‘ಮುತ್ತು’ ಸೆಲೆಬ್ರೇಷನ್
ಅಪ್ಪು ಚಿತ್ರದ ಮೂಲಕ ನಾಯಕ ನಟ
“ಅಪ್ಪು” ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ ಅವರು “ಮಿಲನ”, “ರಾಜಕುಮಾರ” ಮತ್ತು “ಯುವರತ್ನ” ದಂತಹ ಅನೇಕ ಚಲನಚಿತ್ರಗಳಲ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಟನೆಗಾಗಿ ಕರ್ನಾಟಕ ಸರ್ಕಾರ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಕ್ಟೋಬರ್ 29, 2021 ರಂದು ಅವರ ಅಕಾಲಿಕ ನಿಧನ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗವನ್ನು ತೀವ್ರವಾಗಿ ದುಃಖಿತಗೊಳಿಸಿದೆ.
ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಇಡೀ ಆರ್ಸಿಬಿ ತಂಡವು “ಆರ್ಸಿಬಿ ಅನ್ಬಾಕ್ಸ್” ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಈ ಸಂದರ್ಭದಲ್ಲಿ ‘ಟೀಮ್ ರಜತ್ vs ಟೀಮ್ ಜಿತೇಶ್’ ನಡುವಿನ ಸ್ಕಿಲ್ ಚಾಲೆಂಜ್ ಕಾರ್ಯಕ್ರಮ ಎಲ್ಲರ ಮೆಚ್ಚಿನ ಕಾರ್ಯಕ್ರಮವಾಗಿತ್ತು.
Bangalore,Karnataka
March 17, 2025 8:53 PM IST