Ashwin’s Dindigul Dragons Cleared of Ball-Tampering Allegations in TNPL

Ashwin’s Dindigul Dragons Cleared of Ball-Tampering Allegations in TNPL

Last Updated:

ಮಧುರೈ ತಂಡವು ಅಶ್ವಿನ್ ಮತ್ತು ಅವರ ತಂಡದ ಮೇಲೆ ಚೆಂಡು ವಿರೂಪಗೊಳಿಸಿದ್ದಾರೆಂದು ಎಂದು ಆರೋಪ ಮಾಡಿತ್ತು. ಶನಿವಾರ ನಡೆದ ಪಂದ್ಯದ ವೇಳೆ ಅಶ್ವಿನ್ ಮತ್ತು ಅವರ ತಂಡವು ಚೆಂಡನ್ನು ವಿರೂಪಗೊಳಿಸಲು ಟವಲ್ ಬಳಸಿದೆ ಎಂದು ಆರೋಪಿಸಲಾಗಿತ್ತು.

ರವಿಚಂದ್ರನ್ ಅಶ್ವಿನ್ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್

ಟಿಎನ್‌ಪಿಎಲ್ (TNPL) ಅಂದರೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ಮೇಲೆ ಮಾಡಲಾಗಿದ್ದ ಚೆಂಡು ವಿರೂಪಗೊಳಿಸಿದ ಆರೋಪದಿಂದ ಖುಲಾಸೆಗೊಳಿಸಲಾಗಿದೆ. ಅವರ ವಿರುದ್ಧದ ಆರೋಪಗಳು ಸುಳ್ಳು ಮತ್ತು ಆಧಾರರಹಿತವೆಂದು ಘೋಷಿಸಲಾಗಿದೆ. ಜೂನ್ 14 ರಂದು ನಡೆದ ಪಂದ್ಯದಲ್ಲಿ ಅಶ್ವಿನ್ ಮೇಲೆ ಮಧುರೈ ತಂಡ ಆರೋಪ ಮಾಡಿತ್ತು. ಆ ಪಂದ್ಯದಲ್ಲಿ ಅವರ ತಂಡ ದಿಂಡಿಗಲ್ ಡ್ರಾಗನ್ಸ್ (Dindigul Dragons), ಮಧುರೈ ಪ್ಯಾಂಥರ್ಸ್ (Madurai Panthers) ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು. ಭಾರತದ ಮಾಜಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಸ್ತುತ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕರಾಗಿದ್ದಾರೆ.

ದೂರು ನೀಡಿದವರು ಯಾರು?

ಮಧುರೈ ತಂಡವು ಅಶ್ವಿನ್ ಮತ್ತು ಅವರ ತಂಡದ ಮೇಲೆ ಚೆಂಡು ವಿರೂಪಗೊಳಿಸಿದ್ದಾರೆಂದು ಎಂದು ಆರೋಪ ಮಾಡಿತ್ತು. ಶನಿವಾರ ನಡೆದ ಪಂದ್ಯದ ವೇಳೆ ಅಶ್ವಿನ್ ಮತ್ತು ಅವರ ತಂಡವು ಚೆಂಡನ್ನು ವಿರೂಪಗೊಳಿಸಲು ಟವಲ್ ಬಳಸಿದೆ ಎಂದು ಆರೋಪಿಸಲಾಗಿತ್ತು.ಪಂದ್ಯದ ಸಮಯದಲ್ಲಿ ಅಶ್ವಿನ್ ರಾಸಾಯನಿಕಗಳಲ್ಲಿ ನೆನೆಸಿದ ಟವಲ್ ಬಳಸಿ ಚೆಂಡಿನ ಸ್ಥಿತಿಯನ್ನು ವಿರೂಪಗೊಳಿಸಿದ್ದಾರೆ ಎಂದು ಅದು ಹೇಳಿಕೊಂಡಿತ್ತು. ಪ್ಯಾಂಥರ್ಸ್ ಸಿಇಒ ಮಹೇಶ್ ಎಸ್ ಆ ಟವೆಲ್‌ಗಳ ಬಗ್ಗೆ ತನಿಖೆ ನಡೆಸಬೇಕೆಂದು ಟಿಎನ್‌ಪಿಎಲ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಟವಲ್​ಗಳನ್ನ ನೀಡಿರುವುದು ಆಡಳಿತ ಮಂಡಳಿ

ಈ ವಿಷಯಕ್ಕೆ ಸಂಬಂಧಿಸಿದಂತೆ, ಟಿಎನ್‌ಪಿಎಲ್ ಸಿಇಒ ಪ್ರಸನ್ನ ಕಣ್ಣನ್ ಅವರು, ಈ ವಿಷಯದಲ್ಲಿ ಆಂತರಿಕ ತನಿಖೆ ನಡೆಸಲಾಗಿದ್ದು, ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಬಾಲ್​ ಟ್ಯಾಂಪರಿಂಗ್ ಮಾಡಲು ಬಳಸಲಾಗಿದೆ ಎನ್ನಲಾದ ಟವೆಲ್‌ಗಳನ್ನು ಟಿಎನ್‌ಸಿಎ ಒದಗಿಸಿದೆ ಮತ್ತು ಎರಡೂ ತಂಡಗಳಿಗೆ ವಿತರಿಸಲಾಗಿದೆ ಎಂದು ಕಣ್ಣನ್ ಹೇಳಿದ್ದಾರೆ.

ಪುರಾವೆ ಒದಗಿಸಿದ ಮಧುರೈ ತಂಡ

ಫೀಲ್ಡ್ ಅಂಪೈರ್ ಮತ್ತು ಮ್ಯಾಚ್ ರೆಫರಿ ಸೇರಿದಂತೆ ಆಟವನ್ನು ನಿಯಂತ್ರಿಸುವ ತಂಡವು ಪಂದ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಆಟದ ಸಮಯದಲ್ಲಿ ಯಾವುದೇ ಕಳವಳಗಳು ವ್ಯಕ್ತವಾಗಿಲ್ಲ. ಅಲ್ಲದೆ, ಯಾವುದೇ ಪುರಾವೆಗಳನ್ನು ಸಿಕ್ಕಿಲ್ಲ. ಜೂನ್ 17 ರಂದು ಮಧ್ಯಾಹ್ನ 3 ಗಂಟೆಯೊಳಗೆ ಪ್ಯಾಂಥರ್ಸ್ ತಂಡವು ಯಾವುದೇ ದೃಢವಾದ ಪುರಾವೆಗಳನ್ನು ಪ್ರಸ್ತುತಪಡಿಸಿದರೆ, ಸ್ವತಂತ್ರ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಟಿಎನ್‌ಪಿಎಲ್ ಹೇಳಿತ್ತಿ, ಆದರೆ ಮಧುರೈ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.

ಈ ಪಂದ್ಯದಲ್ಲಿ ಅಶ್ವಿನ್ ನಾಲ್ಕು ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆದಾಗ್ಯೂ, ಅಶ್ವಿನ್ ಬ್ಯಾಟಿಂಗ್‌ನಲ್ಲಿ ಗಮನಾರ್ಹ ಕೊಡುಗೆ ನೀಡಿದರು. ಅವರು 29 ಎಸೆತಗಳಲ್ಲಿ 49 ರನ್ ಸಿಡಿಸಿದ್ದರು. ಇದು ತಂಡವು 150 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಲು ಸಹಾಯ ಮಾಡಿತು. ದಿಂಡಿಗಲ್ 12.3 ಓವರ್‌ಗಳಲ್ಲಿ ಈ ಗುರಿಯನ್ನು ಮುಟ್ಟಿತ್ತು.