Last Updated:
ಮಳೆಗಾಲದಲ್ಲಿ ಹರಿಯಾಣದ ಪಾಣಿಪತ್ ನಿಂದ ಬರುವ ಮಾರಾಟಗಾರರು ದಪ್ಪದ ಕಂಬಳಿ, ಬೆಡ್ ಶೀಟ್ ಗಳನ್ನು ಮನೆ ಮನೆಗೆ ತಂದು ಮಾರಾಟ ಮಾಡುತ್ತಾರೆ. ಇವರು ಚರ್ಚೆಗೆ ಅವಕಾಶ ನೀಡುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಾರೆ.
ಮಂಗಳೂರು: ಮುಂಗಾರು ಮಳೆಯ (Monsoon Rains) ಜೊತೆಗೆ ಚಳಿಯೂ ಹೆಚ್ಚಾಗುತ್ತಿದೆ. ಚಳಿಯಿಂದ (Cold) ತಪ್ಪಿಸಿಕೊಳ್ಳಲು ದಪ್ಪದ ಕಂಬಳಿ ಎಲ್ಲಿ ಸಿಗುತ್ತದೆ ಅನ್ನೋದನ್ನು ಹುಡುಕುತ್ತಾರೆ. ಈ ರೀತಿ ಹುಡುಕುವವರ ಬಳಿಯೇ ಕಂಬಳಿಗಳನ್ನು ಹೊತ್ತು ತರುವ ಮಾರಾಟಗಾರರು (Business) ಮಳೆಗಾಲ ಬಂತೆಂದರೆ ಪ್ರತ್ಯಕ್ಷರಾಗುತ್ತಾರೆ. ಇಡೀ ರಾಜ್ಯಕ್ಕೆ ಉತ್ತರ ಭಾರತದಿಂದ (North India) ತಂಡವೊಂದು ಬಂದು ಕಂಬಳಿ, ಬೆಡ್ ಶೀಟ್ ಹಾಗು ಚಳಿಗೆ ಬಟ್ಟೆಗಳನ್ನು ಮನೆ ಮನೆಗೆ (Door to Door) ತಂದು ಮಾರಾಟ ಮಾಡಲು ಆರಂಭಿಸಿದ್ದಾರೆ.
ಮಳೆಗಾಲದ ವ್ಯಾಪಾರ
ನೂರಾರು ಸಂಖ್ಯೆಯಲ್ಲಿ ಬರುವ ಈ ಮಾರಾಟಗಾರರು ಎಲ್ಲಾ ಜಿಲ್ಲೆಗಳಿಗೆ ಇಂತಿಷ್ಟು ಸಂಖ್ಯೆಯಲ್ಲಿ ಹಂಚಿ ಹೋಗಿ ಮಾರಾಟದಲ್ಲಿ ನಿರತರಾಗಿದ್ದಾರೆ. ಹರಿಯಾಣದ ಪಾಣಿಪತ್ ನಿಂದ ಈ ಬ್ಲಾಂಕೆಟ್, ಬೆಡ್ ಶೀಟ್ ಗಳನ್ನು ಲೋಡುಗಟ್ಟಲೇ ತಂದು ಮಳೆಗಾಲದ ಸಮಯದಲ್ಲಿ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಮಾಡುತ್ತಾರೆ. ಋತುಗಳ ಆಧಾರದಲ್ಲಿ ಈ ತಂಡ ಈ ಭಾಗಕ್ಕೆ ಬಂದು ಮಳೆಗಾಲದಲ್ಲಿ ಅತೀ ಜರೂರಾಗಿ ಬೇಕಾಗಿರುವ ಕಂಬಳಿಗಳನ್ನು ಮಾರಾಟ ಮಾಡುತ್ತದೆ. ಇನ್ನೂರು ರೂಪಾಯಿಯಿಂದ ಹಿಡಿದು ಎರಡೂವರೆ ಸಾವಿರ ರೂಪಾಯಿವರೆಗಿನ ಕಂಬಳಿಗಳು ಇವರ ಬಳಿಯಿದೆ.
ಪಾಣಿಪತ್ನಿಂದ ರಾಜ್ಯದಾದ್ಯಂತ ಕಂಬಳಿ
ಶಾಪಿಂಗ್ ಮಾಲ್ ಗಳಲ್ಲಿ ಖರೀದಿಸುವುದಕ್ಕೂ, ಮನೆ ಬಾಗಿಲಿಗೆ ಬರುವ ಈ ಮಾರಾಟಗಾರರಿಂದ ಖರೀದಿಸುವುದಕ್ಕೂ ವ್ಯತ್ಯಾಸವಿದೆ. ಶಾಪಿಂಗ್ ಮಾಲ್ ನಲ್ಲಿ ಚರ್ಚೆಗೆ ಅವಕಾಶವಿಲ್ಲ. ಆದರೆ ಮನೆ ಬಾಗಿಲಿಗೆ ಬರುವ ಈ ತಂಡದ ಮಾರಾಟಗಾರರಲ್ಲಿ ಚರ್ಚೆಗೆ ಸಾಕಷ್ಟು ಅವಕಾಶವಿದ್ದು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನೂ ಈ ಮಾರಾಟಗಾರರು ಸೆಳೆಯುತ್ತಾರೆ.
ಹರಿಯಾಣದ ಪಾಣಿಪತ್ ನಿಂದ ಕಂಬಳಿಗಳನ್ನು ತರುವ ಈ ತಂಡ ಮಳೆಗಾಲ ಮುಗಿಯುವುದರ ಒಳಗಾಗಿ ತನ್ನಲ್ಲಿರುವ ಎಲ್ಲಾ ಕಂಬಳಿಗಳನ್ನು ಮುಗಿಸಿ ಮತ್ತೆ ತಮ್ಮ ಊರುಗಳಿಗೆ ತೆರಳುತ್ತವೆ. ಪಾಣಿಪತ್ ಕಂಬಳಿ, ಬೆಡ್ ಶೀಟ್ ಮೊದಲಾದ ಉತ್ಪನ್ನಗಳನ್ನು ತಯಾರಿಸುವ ಹೆಚ್ಚಿನ ಕಾರ್ಖಾನೆಗಳಿರುವ ಪ್ರದೇಶವಾಗಿದ್ದು, ವಿಶ್ವ ಮಾರುಕಟ್ಟೆಯಲ್ಲೂ ಇಲ್ಲಿನ ಉತ್ಪನ್ನಗಳಿಗೆ ಬೇಡಿಕೆಯಿದೆ.
Dakshina Kannada,Karnataka
June 18, 2025 5:17 PM IST