Champions Trophy: ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ 58 ಕೋಟಿ ಬಂಪರ್! ಯಾರಿಗೆ ಎಷ್ಟು ಕೋಟಿ ಸಿಕ್ತು? ಇಲ್ಲಿದೆ ಮಾಹಿತಿ | Indian Cricket Team s Champions Trophy Reward A Breakdown of BCCI s ₹58 Crore Prize

Champions Trophy: ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ 58 ಕೋಟಿ ಬಂಪರ್! ಯಾರಿಗೆ ಎಷ್ಟು ಕೋಟಿ ಸಿಕ್ತು? ಇಲ್ಲಿದೆ ಮಾಹಿತಿ | Indian Cricket Team s Champions Trophy Reward A Breakdown of BCCI s ₹58 Crore Prize

ಆಟಗಾರರಿಗೆ ತಲಾ 3 ಕೋಟಿ

ANIಗೆ ಮಾತನಾಡಿದ ಸೈಕಿಯಾ, ” ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತದ ಪ್ರತಿ ಆಟಗಾರನಿಗೆ 3 ಕೋಟಿ ನೀಡಲಾಗುವುದು. ಮುಖ್ಯ ಕೋಚ್ ಗೌತಮ್ ಗಂಭೀರ್‌ಗೂ ರೂ. 3 ಕೋಟಿ ಸಿಗಲಿದೆ. ಸಹಾಯಕ ತರಬೇತುದಾರರಾದ ರಯಾನ್ ಟೆನ್ ಡೊಶಾಟ್, ಅಭಿಷೇಕ್ ನಾಯರ್, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್‌ಗೆ ತಲಾ ₹50 ಲಕ್ಷ ದೊರೆಯಲಿದೆ. ಉಳಿದ ಸಹಾಯಕ ಸಿಬ್ಬಂದಿಗೆ ತಲಾ 50 ಲಕ್ಷ ರೂ ಮತ್ತು ಬಿಸಿಸಿಐ ಅಧಿಕಾರಿಗಳಿಗೆ ತಲಾ 25 ಲಕ್ಷ ರೂ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಿನ್ನೆ 16 ಬೌಂಡರಿ, 10 ಸಿಕ್ಸರ್, ಅಜೇಯ 144 ರನ್​! ಇಂದು ಕ್ಯಾಪ್ಟನ್ ಆಗಿ ಘೋಷಣೆ! ಅದೃಷ್ಟ ಅಂದ್ರೆ ಇದು!

ಹೈಬ್ರಿಡ್ ಮಾದರಿಯಲ್ಲಿ ಟೂರ್ನಮೆಂಟ್

ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತವು ಐದು ಪಂದ್ಯಗಳಲ್ಲಿ ಅಜೇಯವಾಗಿ ಉಳಿದು ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಟೂರ್ನಮೆಂಟ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತಾದರೂ, ಭದ್ರತಾ ಕಾರಣಗಳಿಂದ ಬಿಸಿಸಿಐ ತಂಡವನ್ನು ಅಲ್ಲಿಗೆ ಕಳುಹಿಸಲು ನಿರಾಕರಿಸಿತು. ಐಸಿಸಿಯ ಮಧ್ಯಸ್ಥಿಕೆಯೊಂದಿಗೆ, ಹೈಬ್ರಿಡ್ ಮಾದರಿಯನ್ನು ಅಳವಡಿಸಲಾಯಿತು. ಇದರಂತೆ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತು.

9 ತಿಂಗಳಲ್ಲಿ 2 ಟ್ರೋಫಿ

2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ, ಟಿ20 ವಿಶ್ವಕಪ್ 2024ರಲ್ಲಿ ಅಜೇಯವಾಗಿ ಗೆದ್ದು ಕಮ್​ಬ್ಯಾಕ್ ಮಾಡಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಈ ಗೆಲುವಿನೊಂದಿಗೆ ಭಾರತವು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ದೇವಜಿತ್ ಸೈಕಿಯಾ, ಈ ಗೆಲುವು ಭಾರತದ ಕ್ರಿಕೆಟ್ ಪ್ರಾಬಲ್ಯವನ್ನು ದೃಢೀಕರಿಸಿದೆ. ಆಟಗಾರರು ಮತ್ತು ಸಿಬ್ಬಂದಿಯ ಶ್ರಮಕ್ಕೆ ಈ ಬಹುಮಾನ ಸೂಕ್ತ ಗೌರವ ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2025: ಐಸಿಸಿ ನಿಷೇಧಿಸಿದ್ದ ನಿಯಮವನ್ನು ಮತ್ತೆ ಜಾರಿಗೆ ತಂದ BCCI! ಈ ಬಾರಿ ಐಪಿಎಲ್ ಮತ್ತಷ್ಟು ರೋಚಕ

ಚಾಂಪಿಯನ್ಸ್ ಟ್ರೋಪಿ ಗೆದ್ದ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ರಿಷಭ್ ಪಂತ್.

ತರಬೇತಿ ಸಿಬ್ಬಂದಿ: ಗೌತಮ್ ಗಂಭೀರ್ (ಮುಖ್ಯ ಕೋಚ್), ಅಭಿಷೇಕ್ ನಾಯರ್, ರಯಾನ್ ಟೆನ್ ಡೊಶಾಟ್​, ಟಿ. ದಿಲೀಪ್, ಮಾರ್ನ್​ ಮೋರ್ಕೆಲ್.