Puttur: ಹಾವಿನ ಮೊಟ್ಟೆಗಳಿಗೆ ಕೃತಕ ಕಾವು; ಸುಳ್ಯದಲ್ಲಿ 14 ಹೆಬ್ಬಾವಿನ ಮರಿಗಳಿಗೆ ಜೀವದಾನ | Tejas Bannur rescues and releases 14 snake eggs safely in puttur

Puttur: ಹಾವಿನ ಮೊಟ್ಟೆಗಳಿಗೆ ಕೃತಕ ಕಾವು; ಸುಳ್ಯದಲ್ಲಿ 14 ಹೆಬ್ಬಾವಿನ ಮರಿಗಳಿಗೆ ಜೀವದಾನ | Tejas Bannur rescues and releases 14 snake eggs safely in puttur

Last Updated:

ತೇಜಸ್ ಬನ್ನೂರು ಪುತ್ತೂರಿನಲ್ಲಿ 14 ಹೆಬ್ಬಾವಿನ ಮೊಟ್ಟೆಗಳನ್ನು ಸಂರಕ್ಷಿಸಿ, ಅವುಗಳನ್ನು ಸುರಕ್ಷಿತವಾಗಿ ವಾಸಸ್ಥಾನಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಹಾವುಗಳನ್ನು (Snake) ಕಂಡಲ್ಲಿ ಕೆಲವರು ಕೊಲ್ಲಲು ಮುಂದಾಗುತ್ತಾರೆ. ಇನ್ನು ಕೆಲವರು ಅವುಗಳನ್ನು ಕಂಡ ಕೂಡಲೇ ಓಡಿ ಹೋಗುತ್ತಾರೆ. ಈ ರೀತಿಯ ವ್ಯಕ್ತಿಗಳ ನಡುವೆ ಹಾವುಗಳನ್ನು ಸದ್ದಿಲ್ಲದೇ ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದು, ಹಾವು, ಹಾವಿನ ಅನಾಥ ಮೊಟ್ಟೆಗಳು (Egg) ದೊರೆತಲ್ಲಿ ಅವುಗಳನ್ನು ಸಂರಕ್ಷಿಸಿ ಕಾಪಾಡುವ ಕೆಲಸದಲ್ಲಿ ನಿರತರಾಗುತ್ತಾರೆ. ಹೀಗೆ ಹಾವುಗಳನ್ನು, ಹಾವುಗಳ ಮೊಟ್ಟೆಗಳನ್ನು ಸಂರಕ್ಷಿಸಿ ಅವುಗಳನ್ನು ಅವುಗಳ ವಾಸಸ್ಥಾನಕ್ಕೆ ಬಿಡುವ ಕೆಲಸವನ್ನು (Work) ಮಾಡುತ್ತಿರುವ ದಕ್ಷಿಣ ಕನ್ನಡದ ಪುತ್ತೂರಿನ (Puttur) ತೇಜಸ್ ಬನ್ನೂರು ಇದೀಗ ಮತ್ತೆ ಸುದ್ಧಿಯಲ್ಲಿದ್ದಾರೆ.

ಮೊಟ್ಟೆ ದೊರತು ಸುಮಾರು 1 ತಿಂಗಳು ಕಳೆದ ಬಳಿಕ ಹಾವಿನ ಮರಿಗಳು ಮೊಟ್ಟೆಯಿಂದ ಹೊರ ಬಂದಿವೆ. ಅರಣ್ಯ ಇಲಾಖೆಗೆ ಈ ವಿಚಾರವನ್ನು ತಿಳಿಸಿ ಅರಣ್ಯ ಇಲಾಖೆಯ ಅನುಮತಿಯ ಪ್ರಕಾರವೇ ತೇಜಸ್ ಈ ಹೆಬ್ಬಾವಿನ ಮೊಟ್ಟೆಗಳನ್ನು ಕಾವು ಕೊಟ್ಟು ಸಂರಕ್ಷಿಸಿದ್ದಾರೆ.

ಇದನ್ನೂ ಓದಿ: Heart Attack: ಹಾಸನದಲ್ಲಿ ಹೃದಯಾಘಾತದ ಸಾವಿನ ಯಾತ್ರೆ! 1 ತಿಂಗಳು, 17 ಸಾವು, ಇದು ಹೃದಯಗಳ ವಿಷ್ಯ!

ಎಲ್ಲಾ ಮರಿಗಳು ಸ್ವತಂತ್ರವಾಗಿ ಹರಿದಾಡಲು ಸಿದ್ಧವಾದ ಬಳಿಕ ಇದೀಗ ಎಲ್ಲಾ ಮರಿಗಳನ್ನು ಮೊಟ್ಟೆ ದೊರೆತ ಜಾಗದಲ್ಲೇ ಬಿಡಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲೇ ಹಾವುಗಳನ್ನು ಬಿಡುವ ಕಾರ್ಯ ನಡೆದಿದೆ. ಒಂದು ಬಾರಿ ಮೊಟ್ಟೆಯಿಂದ ಬಂದ ಮರಿಗಳು ಸ್ವತಂತ್ರವಾಗಿ ಬದುಕಲು ಸಿದ್ಧವಾಗುತ್ತದೆಯಲ್ಲದೆ, ತನ್ನ ಗುಂಪಿನಿಂದ ಪ್ರತ್ಯೇಕಗೊಂಡು ಏಕಾಂಗಿಯಾಗುತ್ತದ. ತನಗೆ ಬೇಕಾದ ಆಹಾರವನ್ನು ಸಂಗ್ರಹಿಸಿ ತಿನ್ನುವ ಹಂತಕ್ಕೂ ಈ ಮರಿಗಳು ಮೊಟ್ಟೆಯಿಂದ ಹೊರ ಬಂದ ತಕ್ಷಣವೇ ಬರುತ್ತವೆ.