Actor Ramesh Aravind: ಖ್ಯಾತ ಬಹುಭಾಷಾ ನಟ ರಮೇಶ್ ಅರವಿಂದ್ ಕರಾವಳಿ ಬಗ್ಗೆ ಹೇಳಿದ್ದೇನು? | Actor Ramesh Aravind: What did famous multilingual actor Ramesh Aravind say about the coast?

Actor Ramesh Aravind: ಖ್ಯಾತ ಬಹುಭಾಷಾ ನಟ ರಮೇಶ್ ಅರವಿಂದ್ ಕರಾವಳಿ ಬಗ್ಗೆ ಹೇಳಿದ್ದೇನು? | Actor Ramesh Aravind: What did famous multilingual actor Ramesh Aravind say about the coast?

Last Updated:

ಕರಾವಳಿಯನ್ನು ಮರೆಯಲು ಸಾಧ್ಯವಿಲ್ಲ. ಕರಾವಳಿ ಹೈವೇ ಬ್ಯೂಟಿ ಸೆನ್ಸ್ ಯಾರು ಮಾಡಿದ್ದಾರೋ… ಜನರು, ಕಟ್ಟಡ, ರಸ್ತೆಗಳಲ್ಲಿ ಇರುವ ಅಭಿರುಚಿ ಹೆಚ್ಚು ಶ್ರೀಮಂತವಾಗಿದೆ ಎಂದು ಹೇಳಿದರು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಖ್ಯಾತ ಬಹುಭಾಷಾ ನಟ ರಮೇಶ್ ಅರವಿಂದ(Actor Ramesh Aravind) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ(Puttur) ಭೇಟಿ ನೀಡಿದ್ದರು. ಜಿಲ್ಲೆಯ ಅತೀ ಹಳೆದ ಚಿನ್ನದ ಜ್ಯುವೆಲ್ಲರಿ ಆಗಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್‌ನ ಬ್ರ್ಯಾಂಡ್ ಅಂಬಾಸಿಡರ್(Muliya Gold and Daimond Brand Ambassador) ಆಗಿ ಆಯ್ಕೆಯಾದ ರಮೇಶ್ ಕರಾವಳಿ ಭಾಗದ ತನ್ನ ಅನುಭವವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಚಿತ್ರರಂಗದ ಏಳು, ಬೀಳು, ಆಗಬೇಕಾದ ಬದಲಾವಣೆ, ಕರಾವಳಿ ಮೊದಲಾದ ವಿಚಾರಗಳ ಕುರಿತು ಅವರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡರು.

ಕರಾವಳಿಯಲ್ಲಿ ಏನು ಇಷ್ಟ ಇಲ್ಲ ಎಂದು ಕೇಳಿದರೆ ಸುಲಭದಲ್ಲಿ ಉತ್ತರಿಸಬಹುದು. ಏನು ಇಷ್ಟ ಎಂದು ಕೇಳಿದರೆ ಹೇಳ್ತಾನೇ ಇರಬೇಕಾಗುತ್ತದೆ. ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ ಎಲ್ಲಾ ಬೀಚ್‌ಗಳಲ್ಲೂ ಕುಣಿದಿದ್ದೇನೆ ನಾನು. ಕಾಪು, ಉಡುಪಿ, ಹೊನ್ನಾವರ ಸೇರಿದಂತೆ ಪ್ರತಿ ಬೀಚ್‌ಗಳಲ್ಲೂ ಶೂಟ್ ಮಾಡಿದ್ದೇವೆ. ಆಗ ರೊಮ್ಯಾಂಟಿಕ್ ಸಿನೆಮಾ ತುಂಬಾ ಮಾಡ್ತಿದ್ದೆ. ಹಾಡು ಬೇಕು ಅಂದರೆ ಬೀಚ್‌ಗೆ ಬರುತ್ತಿದ್ದೆವು. ಕರಾವಳಿಯನ್ನು ಮರೆಯಲು ಸಾಧ್ಯವಿಲ್ಲ. ಕರಾವಳಿ ಹೈವೇ ಬ್ಯೂಟಿ ಸೆನ್ಸ್ ಯಾರು ಮಾಡಿದ್ದಾರೋ… ಜನರು, ಕಟ್ಟಡ, ರಸ್ತೆಗಳಲ್ಲಿ ಇರುವ ಅಭಿರುಚಿ ಹೆಚ್ಚು ಶ್ರೀಮಂತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Dakshina Kannada: ಅಗ್ನಿಕೇಳಿಯೊಂದಿಗೆ ತೆರೆ ಕಂಡ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಜಾತ್ರೋತ್ಸವ!

ನಾನು ನಟನೆ ಕಡಿಮೆ ಮಾಡಿಲ್ಲ. ಈಗಾಗಲೇ 3 ಸಿನೆಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ಮೊದಲು ಒಂದು ವರ್ಷಕ್ಕೆ 6 ಚಿತ್ರ ಮಾಡುತ್ತಿದ್ದೆ. ಈಗ ಒಂದು ಚಿತ್ರ ಮುಗಿಸಲು ಪ್ರೋಸೆಸ್ ವಿಸ್ತರಣೆ ಆಗಿದೆ. 1 ಸಿನೆಮಾ ಮುಗಿಸಲು 2 ವರ್ಷ ಬೇಕಾಗುತ್ತದೆ. ಇಂಡಟ್ಟ್ರಿ ಪ್ರೋಸೆಸ್ ಸ್ಲೋ ಆಗಿದೆ ಎಂದರು. ಬದಲಾವಣೆಗೆ ನಾವು ಹೊಂದಿಕೊಳ್ಳುತ್ತಾ ಹೋಗಬೇಕು.ಬದಲಾವಣೆಯನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದು ಮುಖ್ಯ. ಕಾಂಪಿಟೇಶನ್ ಎಲ್ಲದರಲ್ಲೂ ಬರುತ್ತದೆ. ಎಲ್ಲವೂ ಡಿಮ್ಯಾಂಡ್‌ ಮೇಲೆ ಹೋಗುತ್ತಿರುತ್ತದೆ. ಜನರು ರಿಯಾಲಿಟಿ ಶೋ ಇಷ್ಟಪಡುತ್ತಿದ್ದರೆ ಅದನ್ನೂ ಮಾಡಬೇಕಾಗುತ್ತದೆ. ಕಾಂತಾರ ಬಂದಾಗ ದೊಡ್ಡ ಹವಾ ಸೃಷ್ಟಿಯಾಯಿತು. ಆದ ಕಾರಣ ಆ ತರಹದ, ಕಾಲಕ್ಕೆ ತಕ್ಕ ಸಿನೆಮಾಗಳು ಬಂದ್ರೆ ಹಿಟ್ ಆಗುತ್ತವೆ ಎಂದರು.

ಕಲಾವಿದನಿಗೆ ಕಲೆಯನ್ನು ತೋರಿಸಲು ವೇದಿಕೆ ಬೇಕಷ್ಟೇ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಸಂಬಂಧ ಬೆಳೆಯುತ್ತದೆ ಎಂದಾದರೆ ನಾನು ಅದನ್ನೂ ಬಿಡೋದಿಲ್ಲ. ಒಬ್ಬ ಒಳ್ಳೆಯ ಕಲಾವಿದ ಅದನ್ನು ಬಿಡಲು ಸಾಧ್ಯವಿಲ್ಲ. ನಾನು ಇದಕ್ಕೇ ಆಂಟಿಕೊಂಡಿದ್ದೇನೆ, ಇದನ್ನು ಮಾತ್ರ ಮಾಡುತ್ತೇನೆ, ನಾನು ಪ್ಯೂರಿಸ್ಟ್, ಬೇರೆಯದನ್ನು ಮುಟ್ಟುವುದಿಲ್ಲ ಎಂದರೆ ಕಾಲವನ್ನು ಎದುರು ಮಾಡುವುದು ಬಹಳ ಕಷ್ಟವಾಗುತ್ತೆ. ಮೌಲ್ಯ, ಮೂಲಭೂತ ನಂಬಿಕೆಗಳನ್ನು ಬಿಡದೆ ಎಷ್ಟು ಬೇಗ ಎಲ್ಲರಿಗೂ ಹೊಂದಿಕೊಳ್ಳುತ್ತೀರೋ, ಅಷ್ಟು ಉಳಿಯಬಹುದು. ಇಲ್ಲದಿದ್ದರೆ ಉಳಿಯುವುದು ಕಷ್ಟ.

ಶ್ರೇಷ್ಠವಾಗಿ ಮಾಡಬೇಕು ಅಷ್ಟೇ. ಅವಕಾಶಗಳನ್ನು ಬಳಸಿಕೊಂಡು ಸಂಬಂಧಗಳನ್ನು ಶ್ರೀಮಂತಗೊಳ್ಳಿಸುವುದು ಅಗತ್ಯ. ನಾನು ಒಂದು ಕ್ವಿಜ್‌ನಲ್ಲಿ ಸ್ಕೋರರ್ ಮಾತ್ರ ಆಗಿದ್ದೆ. ಅಲ್ಲಿ ನನ್ನ ಕೆಲಸ ಅಂಕಗಳನ್ನು ಬರೆಯುವುದು ಮಾತ್ರ ಆಗಿತ್ತು. ಆ ವ್ಯಕ್ತಿ ಕೊನೆಗೆ `ವೀಕೆಂಡ್ ವಿಥ್ ರಮೇಶ್’ ಮಾಡ್ತಾನೆ ಅನ್ನುವುದು ಯಾರಿಗೆ ಗೊತ್ತಿತ್ತು. ಜೀವನ ಎಳ್ಕೊಂಡು ಹೋಗುತ್ತದೆ. ಏನು ಮಾಡುವುದಿದ್ದರೂ ಶ್ರೇಷ್ಠವಾಗಿ ಮಾಡಬೇಕು ಎನ್ನುವುದು ಮಾತ್ರ ನನ್ನ ತಲೆಯಲ್ಲಿದೆ. ಯಾವುದನ್ನೂ ಅಸಡ್ಡೆಯಿಂದ ಮಾಡುವುದೇ ಇಲ್ಲ.

ತುಳು ಸಿನೆಮಾಗಳು ಫೆಂಟಾಸ್ಟಿಕ್. ನಾನು ಒಂದೇ ಒಂದು ಸಿನೆಮಾದಲ್ಲಿ ನಟನೆ ಮಾಡಿದ್ದೇನೆ. ನೆರಲ್‌ನಲ್ಲಿ ಅತಿಥಿ ಪಾತ್ರ. ತುಳು ನಾಟಕಗಳು ನನಗೆ ಮೊದಲಿಂದಲೂ ಆಸಕ್ತಿ. ತುಳು ನಾಟಕಗಳಲ್ಲಿ ಇರುವ ಹ್ಯೂಮರ್ ಮೆಚ್ಚುವಂತಹುದು‌ ಎಂದ ಅವರು ನ್ಯಾಚುರಲ್ ಡಯಲಾಗ್ ಡೆಲಿವರಿ ಇರುತ್ತದೆ. ನನ್ನ ಸಿನೆಮಾದಲ್ಲೂ ತುಳು ಕಲಾವಿದರು ನಟಿಸಿದ್ದಾರೆ. ಯಕ್ಷಗಾನದ್ದು ಇತ್ತೀಚೆಗೆ ಒಂದು ಮೇಕಪ್ ಟೆಸ್ಟ್ ಮಾಡಿದ್ದೆ. ಅದು ಬಹಳ ವೈರಲ್ ಆಗಿತ್ತು. ಯಕ್ಷಗಾನ ಕಲಾವಿದರ ಬಗ್ಗೆ ಗೌರವ ಬಂತು. ಅವರ ವಸ್ತ್ರದಲ್ಲಿ 58 ಗಂಟು ಇದೆ. ಅದನ್ನು ಅವರೇ ಹಾಕಿಕೊಳ್ಳುತ್ತಾರೆ. ಸಿನೆಮಾದಲ್ಲಿ ಕಾಸ್ಟ್ಯೂಮ್ ಮಾಡಲು 5 ಜನ ಇರುತ್ತಾರೆ. ಯಕ್ಷಗಾನದ ಬಗ್ಗೆ ಬಹಳ ಗೌರವ ಇದೆ ಎಂದು ಅಭಿಪ್ರಾಯ ಹಂಚಿಕೊಂಡರು.