Last Updated:
ಸೇರ್ಪಡೆ ಸಂದರ್ಭ ಆಟಿಸಂನಿಂದ ಬಳಲುತ್ತಿದ್ದ ಭರತ್ ಪ್ರಸಾದ್ ವರ್ತನೆಯಲ್ಲಿ ಕಠೋರತೆ ಇತ್ತು. ಸಾನಿಧ್ಯ ಶಾಲೆಯಲ್ಲಿ ನೀಡುವ ಕೌನ್ಸೆಲಿಂಗ್, ನಿರಂತರ ತರಬೇತಿಯಿಂದ ಆತನ ವರ್ತನೆಯಲ್ಲಿ ಬದಲಾವಣೆ ಕಂಡು ಬಂತು
ದಕ್ಷಿಣ ಕನ್ನಡ: ವಿವಿಧ ಕಾರಣಗಳಿಂದ ಕೆಲವು ಮಕ್ಕಳು ಆಟಿಸಂ(Autism) ಪೀಡಿತರಾಗುತ್ತಾರೆ. ಇವರು ಇತರ ಮಕ್ಕಳಂತೆ(Children) ಎಲ್ಲರೊಂದಿಗೆ ಬೆರೆಯಲು ಸಾಧ್ಯವಿಲ್ಲ. ಸಾಧನೆ ಮಾಡಲು ಸಾಧ್ಯವಿಲ್ಲ. ಆದರೆ ಆಟಿಸಂ ಪೀಡಿತ ಮಂಗಳೂರಿನ ಭರತ್ ಪ್ರಸಾದ್ ಯಕ್ಷಗಾನ ಭಾಗವತಿಕೆಗೂ ಸೈ, ಕಂಪ್ಯೂಟರ್ ಡೇಟಾ ಎಂಟ್ರಿಗೂ ಸೈ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ನೋಡಿ… ಹೀಗೆ ಭಾಗವತಿಕೆ ಮಾಡುವವನೇ ಭರತ್ ಪ್ರಸಾದ್. ತಾಯಿ ಮತ್ತು ಸಹೋದರನೊಂದಿಗೆ ಕೊಡಿಯಾಲಬೈಲ್ನಲ್ಲಿ ವಾಸವಾಗಿರುವ ಈತ ಸದ್ಯ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ವಿದ್ಯಾರ್ಥಿ. ಇದಕ್ಕಿಂತಲೂ ಮೊದಲು ಅಲೋಶಿಯಸ್, ವಾಮಂಜೂರಿನ ಮಂಗಳಾಜ್ಯೋತಿ ಐಟಿಐ ಸಂಸ್ಥೆಯಲ್ಲಿ ಕಂಪ್ಯೂಟರ್ ಶಿಕ್ಷಣ ಪೂರೈಸಿದ್ದ. ಏಳು ವರ್ಷಗಳ ಹಿಂದೆ ಸಾನಿಧ್ಯ ವಿಶೇಷ ಮಕ್ಕಳ ಶಾಲೆಗೆ ಬಂದು ಸೇರ್ಪಡೆಗೊಂಡಿದ್ದಾನೆ.
ಇದನ್ನೂ ಓದಿ: Mysuru Zoo: ಬೇಸಿಗೆ ಶುರುವಿನಲ್ಲೇ ಮೈಸೂರು ಮೃಗಾಲಯಕ್ಕೆ ಪ್ರವಾಸಿಗರ ಲಗ್ಗೆ!
ಸೇರ್ಪಡೆ ಸಂದರ್ಭ ಆಟಿಸಂನಿಂದ ಬಳಲುತ್ತಿದ್ದ ಭರತ್ ಪ್ರಸಾದ್ ವರ್ತನೆಯಲ್ಲಿ ಕಠೋರತೆ ಇತ್ತು. ಸಾನಿಧ್ಯ ಶಾಲೆಯಲ್ಲಿ ನೀಡುವ ಕೌನ್ಸೆಲಿಂಗ್, ನಿರಂತರ ತರಬೇತಿಯಿಂದ ಆತನ ವರ್ತನೆಯಲ್ಲಿ ಬದಲಾವಣೆ ಕಂಡು ಬಂತು. ಕ್ರಮೇಣ ವಿವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಭರತ್, ಕಾಗದದಿಂದ ಎನ್ವಲಪ್ ಕವರ್ ಮಾಡುವುದರಲ್ಲಿ ನಿಷ್ಣಾತನಾದ. ಕಂಪ್ಯೂಟರ್ ತರಬೇತಿ ಪಡೆದಿರುವುದರಿಂದ ತಪ್ಪಿಲ್ಲದೇ ಡಾಟಾ ಎಂಟ್ರಿ ಮಾಡುವುದರಲ್ಲೂ ಈತನದ್ದು ಎತ್ತಿದ್ದ ಕೈ. ಅಂದ ಹಾಗೆ ಯಕ್ಷಗಾನ ಭಾಗವತಿಕೆಯೂ ಈತನಿಗೆ ಸಿದ್ಧಿಸಿದೆ.
ಒಟ್ಟಿನಲ್ಲಿ ಆಟಿಸಂನಿಂದ ಬಳಲುವವರು ತಮ್ಮ ದೈನಂದಿನ ಕೆಲಸ ಮಾಡಲೂ ಶಕ್ತರಾಗದೆ ಮತ್ತೊಬ್ಬರನ್ನು ಅವಲಂಬಿಸುವುದಿದೆ. ಅಂಥದ್ದರಲ್ಲಿ ಭರತ್ ಪ್ರಸಾದ್ ಸಾಧನೆ ನಿಜಕ್ಕೂ ಮೆಚ್ಚುವಂಥದ್ದೇ. ಈತನ ಭವಿಷ್ಯ ಉಜ್ವಲವಾಗಲಿ ಅನ್ನೋದೇ ನಮ್ಮ ಆಶಯ.
Dakshina Kannada,Karnataka
April 04, 2025 3:04 PM IST