BCCI: ಬಿಸಿಸಿಐಗೆ ಬಿಗ್​ ಶಾಕ್ ಕೊಟ್ಟ ಬಾಂಬೆ ಹೈಕೋರ್ಟ್! ಐಪಿಎಲ್​​ನಿಂದ ಸಸ್ಪೆಂಡ್ ಆಗಿದ್ದ ಫ್ರಾಂಚೈಸಿಗೆ ₹538 ಕೋಟಿ ಪಾವತಿಸಲು ಆದೇಶ | BCCI to Pay Rs 538 Crore Bombay High Court s Landmark Verdict on Kochi Tuskers keral terminating case

BCCI: ಬಿಸಿಸಿಐಗೆ ಬಿಗ್​ ಶಾಕ್ ಕೊಟ್ಟ ಬಾಂಬೆ ಹೈಕೋರ್ಟ್! ಐಪಿಎಲ್​​ನಿಂದ ಸಸ್ಪೆಂಡ್ ಆಗಿದ್ದ ಫ್ರಾಂಚೈಸಿಗೆ ₹538 ಕೋಟಿ ಪಾವತಿಸಲು ಆದೇಶ | BCCI to Pay Rs 538 Crore Bombay High Court s Landmark Verdict on Kochi Tuskers keral terminating case

2011ರಲ್ಲಿ ಲೀಗ್​ನಿಂದ ರದ್ದು

ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (ಕೆಸಿಪಿಎಲ್) ಮತ್ತು ರೆಂಡೆಜ್ವಸ್ ಸ್ಪೋರ್ಟ್ಸ್ ವರ್ಲ್ಡ್ (ಆರ್‌ಎಸ್‌ಡಬ್ಲ್ಯೂ) ಪರವಾಗಿ ನೀಡಲಾದ ಈ ತೀರ್ಪಿನ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕೊಚ್ಚಿ ಟಸ್ಕರ್ಸ್ ತಂಡವು 2011ರ ಐಪಿಎಲ್ ಋತುವಿನಲ್ಲಿ ಭಾಗವಹಿಸಿತ್ತು ಆದರೆ, ಫ್ರಾಂಚೈಸಿ ಒಪ್ಪಂದದ ಉಲ್ಲಂಘನೆ ಆರೋಪದಡಿ ಬಿಸಿಸಿಐ ಸೆಪ್ಟೆಂಬರ್ 2011ರಲ್ಲಿ ತಂಡವನ್ನು ಲೀಗ್​​ನಿಂದ ರದ್ದುಗೊಳಿಸಿತ್ತು.

ಪೇಮೆಂಟ್ ಸ್ವೀಕರಿಸಿ ಫ್ರಾಂಚೈಸಿ ರದ್ದುಗೊಳಿಸಿದ್ದ ಬಿಸಿಸಿಐ

ಕೆಸಿಪಿಎಲ್ ಬ್ಯಾಂಕ್ ಗ್ಯಾರಂಟಿ ನೀಡಲು ವಿಫಲವಾಯಿತು ಎಂದು ಬಿಸಿಸಿಐ ಆರೋಪಿಸಿತು. ಆದರೆ, ಕ್ರೀಡಾಂಗಣದ ಅಲಭ್ಯತೆ, ಷೇರುದಾರರ ಅನುಮೋದನೆಯ ವಿಳಂಬ, ಮತ್ತು ಐಪಿಎಲ್ ಪಂದ್ಯಗಳ ಸಂಖ್ಯೆ ಕಡಿಮೆಯಾದ ಕಾರಣದಿಂದಾಗಿ ಈ ವಿಳಂಬವಾಯಿತು ಎಂದು ಕೆಸಿಪಿಎಲ್ ವಾದಿಸಿತು. ಈ ಸಮಸ್ಯೆಗಳ ನಡುವೆಯೂ ಬಿಸಿಸಿಐ ಕೆಲವು ತಿಂಗಳುಗಳ ಕಾಲ ಕೆಸಿಪಿಎಲ್‌ನೊಂದಿಗೆ ಸಂಪರ್ಕದಲ್ಲಿತ್ತು ಮತ್ತು ಹಲವು ಪಾವತಿಗಳನ್ನು ಸ್ವೀಕರಿಸಿತು. ಆದರೆ, ಆಕಸ್ಮಿಕವಾಗಿ ಫ್ರಾಂಚೈಸಿಯನ್ನು ರದ್ದುಗೊಳಿಸಿ, ಆರ್‌ಎಸ್‌ಡಬ್ಲ್ಯೂ ನೀಡಿದ್ದ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸಿತ್ತು.

ಫ್ರಾಂಚೈಸಿ ಪರವಾಗಿ ತೀರ್ಪು

2012ರಲ್ಲಿ ಕೆಸಿಪಿಎಲ್ ಮತ್ತು ಆರ್‌ಎಸ್‌ಡಬ್ಲ್ಯೂ ಮಧ್ಯಸ್ಥಿಕೆ ಪ್ರಕ್ರಿಯೆ ಆರಂಭಿಸಿದವು. 2015ರಲ್ಲಿ ಮಧ್ಯಸ್ಥಿಕೆ ನ್ಯಾಯಮಂಡಳಿ ಪ್ರಾಂಚೈಸಿ ಪರವಾಗಿ ತೀರ್ಪು ನೀಡಿತು. ಬಿಸಿಸಿಐಗೆ ಕೆಸಿಪಿಎಲ್‌ಗೆ 384 ಕೋಟಿ ರೂ.ಮತ್ತು ಆರ್‌ಎಸ್‌ಡಬ್ಲ್ಯೂಗೆ 153 ಕೋಟಿ ರೂ. (ಬ್ಯಾಂಕ್ ಗ್ಯಾರಂಟಿಯ ತಪ್ಪು ನಗದೀಕರಣಕ್ಕಾಗಿ) ಪಾವತಿಸಲು ಆದೇಶಿಸಿತು. ಇದರೊಂದಿಗೆ 18% ವಾರ್ಷಿಕ ಬಡ್ಡಿ ಮತ್ತು ಕಾನೂನು ವೆಚ್ಚವನ್ನೂ ಪಾವತಿಸಬೇಕೆಂದು ತಿಳಿಸಿತು.

ಬಿಸಿಸಿಐ ಈ ತೀರ್ಪನ್ನು ಪ್ರಶ್ನಿಸಿ, ಮಧ್ಯಸ್ಥಿಕೆ ತಂಡವು ತನ್ನ ಅಧಿಕಾರವನ್ನು ಮೀರಿದೆ ಮತ್ತು ಕಾನೂನು ತತ್ವಗಳನ್ನು ತಪ್ಪಾಗಿ ಅನ್ವಯಿಸಿದೆ ಎಂದು ವಾದಿಸಿತು. ಆದರೆ, ನ್ಯಾಯಮೂರ್ತಿ ಆರ್.ಐ. ಚಾಗ್ಲಾ ಅವರ ಏಕಸದಸ್ಯ ಪೀಠವು ಬಿಸಿಸಿಐನ ವಾದವನ್ನು ತಿರಸ್ಕರಿಸಿ, ಮಧ್ಯಸ್ಥಿಕೆ ತೀರ್ಪಿನಲ್ಲಿ ಯಾವುದೇ ಕಾನೂನು ತಪ್ಪಿಲ್ಲ ಎಂದು ಸ್ಪಷ್ಟಪಡಿಸಿತು.

ಒಪ್ಪಂದದ ಉಲ್ಲಂಘನೆಯಾಗಿದೆ ಎಂದ ಕೋರ್ಟ್

ನ್ಯಾಯಾಲಯವು, “ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 34 ರ ಅಡಿಯಲ್ಲಿ ನ್ಯಾಯಾಲಯದ ಅಧಿಕಾರ ಸೀಮಿತವಾಗಿದೆ. ಬಿಸಿಸಿಐನ ರದ್ದತಿಯು ಒಪ್ಪಂದದ ಉಲ್ಲಂಘನೆಯಾಗಿದೆ ಎಂಬ ಮಧ್ಯಸ್ಥಗಾರರ ತೀರ್ಮಾನಕ್ಕೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ” ಎಂದು ತೀರ್ಪಿನಲ್ಲಿ ತಿಳಿಸಿದೆ.

ಕೆಸಿಪಿಎಲ್ ಮತ್ತು ಆರ್‌ಎಸ್‌ಡಬ್ಲ್ಯೂಗೆ ತೀರ್ಪಿನ ಮೊತ್ತವನ್ನು ಪಡೆಯಲು ಅನುಮತಿ ನೀಡಲಾಗಿದ್ದು, ಬಿಸಿಸಿಐಗೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಲಾಗಿದೆ. ಈ ತೀರ್ಪು ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯ ದೀರ್ಘಕಾಲದ ಕಾನೂನು ಹೋರಾಟಕ್ಕೆ ಮಹತ್ವದ ಮೈಲಿಗಲ್ಲಾಗಿದೆ. 2011ರಲ್ಲಿ ಕೇವಲ ಒಂದು ಋತುವಿನಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಈ ತಂಡದ ರದ್ದತಿಯಿಂದ ಉಂಟಾದ ವಿವಾದವು ಈಗ ಕಾನೂನು ಗೆಲುವಿನೊಂದಿಗೆ ಮುಕ್ತಾಯಗೊಂಡಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

BCCI: ಬಿಸಿಸಿಐಗೆ ಬಿಗ್​ ಶಾಕ್ ಕೊಟ್ಟ ಬಾಂಬೆ ಹೈಕೋರ್ಟ್! ಐಪಿಎಲ್​​ನಿಂದ ಸಸ್ಪೆಂಡ್ ಆಗಿದ್ದ ಫ್ರಾಂಚೈಸಿಗೆ ₹538 ಕೋಟಿ ಪಾವತಿಸಲು ಆದೇಶ