ಡೆಲ್ಲಿ ಬೌಲರ್ಗಳಿಗೆ ಕ್ರೆಡಿಟ್
ರುತುರಾಜ್ ಗಾಯಕ್ವಾಡ್, ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳ ಅಸಾಧಾರಣ ಪ್ರದರ್ಶನವನ್ನು ಶ್ಲಾಘಿಸಿದರು. ” ಡೆಲ್ಲಿ ಬೌಲರ್ಗಳು ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡಿ, ಆಕ್ರಮಣಕಾರಿ ಹೊಡೆತಗಳನ್ನು ತಡೆದರು” ಎಂದು ಅವರು ಹೇಳಿದರು. ಪವರ್ ಪ್ಲೇನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡದ ಕಾರಣದಿಂದ ತಂಡ ಹ್ಯಾಟ್ರಿಕ್ ಸೋಲುಗಳನ್ನು ಅನುಭವಿಸಿದೆವು ಎಂದು ಇಂದಿನ ಸೋಲಿಗೆ 2 ಕಾರಣಗಳನ್ನ ನೀಡಿದ್ದಾರೆ.
” ಕಳೆದ ಮೂರು ಪಂದ್ಯಗಳಲ್ಲಿ ನಾವು ಒಟ್ಟಿಗೆ ಸಾಮರ್ಥ್ಯ ತೋರಲು ವಿಫಲರಾಗಿದ್ದೇವೆ. ಸುಧಾರಣೆಗೆ ಪ್ರಯತ್ನಿಸುತ್ತಿದ್ದೇವೆ, ಆದರೆ ಫಲಿತಾಂಶ ಸಿಗುತ್ತಿಲ್ಲ. ಪವರ್ ಪ್ಲೇನಲ್ಲಿ ಪ್ರಮುಖ ವಿಕೆಟ್ಗಳು ಬೀಳುತ್ತಿರುವುದು ನಮ್ಮ ಪತನಕ್ಕೆ ಕಾರಣವಾಗುತ್ತಿದೆ. ಇದು ಚಿಂತಿಸಬೇಕಾದ ವಿಷಯವಾಗಿದ್ದು, ಬೌಲಿಂಗ್ನಲ್ಲೂ ಹೆಚ್ಚುವರಿ ರನ್ಗಳನ್ನು ನೀಡುತ್ತಿದ್ದೇವೆ,” ಎಂದು ರುತುರಾಜ್ ವಿವರಿಸಿದ್ದಾರೆ.
ಇದನ್ನೂ ಓದಿ: 27 ಕೋಟಿ ಆಟಗಾರ ಫುಲ್ ಫ್ಲಾಪ್! 14 ಕೋಟಿಗೆ ಬೇಡ ಎಂದ ಆಟಗಾರ ಅಬ್ಬರ! ಟ್ರೋಲ್ಗೆ ಒಳಗಾದ LSG ಮಾಲೀಕ
ಪವರ್ ಪ್ಲೇನಲ್ಲೇ ವಿಕೆಟ್ ಕಳೆದುಕೊಳ್ಳುತ್ತಿದ್ದೇವೆ
“ಪವರ್ ಪ್ಲೇನಲ್ಲಿ ಹೆಚ್ಚು ವಿಕೆಟ್ಗಳನ್ನು ಕಳೆದುಕೊಳ್ಳದಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ನಮ್ಮ ದೌರ್ಬಲ್ಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ, ಆದರೆ ಯಶಸ್ಸು ಸಿಗುತ್ತಿಲ್ಲ. ಅತೀ ಎಚ್ಚರಿಕೆಯ ಆಟ ನಮಗೆ ಹಾನಿ ಮಾಡುತ್ತಿದೆ,” ಎಂದು ಗಾಯಕ್ವಾಡ್ ಹೇಳಿದ್ದಾರೆ.
ತಂಡದಲ್ಲಿ ಸಾಮೂಹಿಕ ಪ್ರದರ್ಶನದ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದ ರುತುರಾಜ್, “ಪವರ್ ಪ್ಲೇನಲ್ಲಿ ವಿಕೆಟ್ಗಳು ಬೀಳುವುದರಿಂದ ಗೆಲುವಿನ ಉದ್ದೇಶ ತೋರಿಸಲು ಸಾಧ್ಯವಾಗುತ್ತಿಲ್ಲ. ಈ ಪಂದ್ಯದಲ್ಲಿ ಗೆಲುವಿನಿಂದ ಆರಂಭದಿಂದಲೇ ದೂರ ಉಳಿದಿದ್ದೆವು. ಒಬ್ಬ ಬ್ಯಾಟರ್ ಮಾತ್ರ ಕ್ರೀಸ್ನಲ್ಲಿ ಉಳಿದಿದ್ದರು. ಡೆಲ್ಲಿ ಬೌಲರ್ಗಳು ಪಿಚ್ ಪರಿಸ್ಥಿತಿಯನ್ನು ಉತ್ತಮವಾಗಿ ಬಳಸಿಕೊಂಡರು. ಶಿವಂ ದುಬೆ ಬ್ಯಾಟಿಂಗ್ಗೆ ಬಂದಾಗ ವೇಗ ಪಡೆಯುತ್ತೇವೆ ಎಂದು ಭಾವಿಸಿದ್ದೆವು, ಆದರೆ ಅದು ಸಾಧ್ಯವಾಗಲಿಲ್ಲ,” ಎಂದು ರುತುರಾಜ್ ನಿರಾಶೆ ವ್ಯಕ್ತಪಡಿಸಿದರು.
ಪಂದ್ಯದ ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ಗೆ 183 ರನ್ ಗಳಿಸಿತು. ಕೆಎಲ್ ರಾಹುಲ್ (51 ಎಸೆತಗಳಲ್ಲಿ 77 ರನ್, 6 ಬೌಂಡರಿ, 3 ಸಿಕ್ಸರ್), ಅಭಿಷೇಕ್ ಪೊರೆಲ್ (20 ಎಸೆತಗಳಲ್ಲಿ 33 ರನ್, 4 ಬೌಂಡರಿ, 3 ಸಿಕ್ಸರ್), ಮತ್ತು ಟ್ರಿಸ್ಟಾನ್ ಸ್ಟಬ್ಸ್ (11 ಎಸೆತಗಳಲ್ಲಿ 22 ನಾಟ್ ಔಟ್, 2 ಬೌಂಡರಿ, 3 ಸಿಕ್ಸರ್) ಮಿಂಚಿದರು. ಚೆನ್ನೈ ಪರ ಬೌಲಿಂಗ್ನಲ್ಲಿ ಖಲೀಲ್ ಅಹ್ಮದ್ (2/25) ಎರಡು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ನೂರ್ ಅಹ್ಮದ್, ಮತ್ತು ಮತಿಶಾ ಪತಿರಾನ ತಲಾ ಒಂದು ವಿಕೆಟ್ ಕಿತ್ತರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಅಲ್ಲ, ತಿಲಕ್ ವರ್ಮಾರನ್ನ ರಿಟೈರ್ಡ್ ಔಟ್ ಮಾಡಿಸಿದ್ದು ಈತನಂತೆ!
ಗುರಿ ಬೆನ್ನಟ್ಟಿದ ಚೆನ್ನೈ 20 ಓವರ್ಗಳಲ್ಲಿ 5 ವಿಕೆಟ್ಗೆ 158 ರನ್ಗೆ ಸೀಮಿತವಾಯಿತು. ವಿಜಯ್ ಶಂಕರ್ (54 ಎಸೆತಗಳಲ್ಲಿ 69 ನಾಟ್ ಔಟ್, 5 ಬೌಂಡರಿ, 1 ಸಿಕ್ಸರ್) ಮತ್ತು ಎಂಎಸ್ ಧೋನಿ (26 ಎಸೆತಗಳಲ್ಲಿ 30 ರನ್, 2 ಬೌಂಡರಿ, 1 ಸಿಕ್ಸರ್) ಪ್ರಯತ್ನಿಸಿದರೂ ಸೋಲು ತಪ್ಪಲಿಲ್ಲ.
ಡೆಲ್ಲಿ ಬೌಲರ್ಗಳಲ್ಲಿ ವಿಪ್ರಜ್ ನಿಗಮ್ (2/27) ಎರಡು ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಮುಖೇಶ್ ಕುಮಾರ್, ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಗಳಿಸಿ ಚೆನ್ನೈನ ಸೋಲಿಗೆ ಕಾರಣರಾದರು.
April 05, 2025 10:10 PM IST