Last Updated:
ಸಾಮಾಜಿಕ ಮಾಧ್ಯಮದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಭಿಮಾನಿಗಳೇ ಟ್ರೋಲ್ ಮಾಡುತ್ತಿದ್ದು, ತಂಡದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಬಂದು ಹೋಗುವುದರಿಂದ ತಂಡಕ್ಕೆ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಿದ್ದಾರೆ.
ಚೆನ್ನೈ: ಐಪಿಎಲ್ 2025 ರ (IPL 2025)ಭಾಗವಾಗಿ ಚೆಪಾಕ್ ಕ್ರೀಡಾಂಗಣದಲ್ಲಿ (Chennai Chepauk Stadium) ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ವಿರುದ್ಧ ಹೀನಾಯ ಸೋಲು ಅನುಭವಿಸಿತು. ಈ ಹಿಂದಿನ ದಾಖಲೆಗಳನ್ನು ಆಧರಿಸಿ, ಎಲ್ಲರೂ ಈ ಬಾರಿ ಚೆನ್ನೈ ಗೆಲ್ಲುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆಗಳನ್ನು ಆರ್ಸಿಬಿ ತಲೆಕೆಳಗಾಗಿಸಿ 50 ರನ್ಗಳಿಂದ ಪಂದ್ಯವನನ್ನು ಗೆದ್ದು ಕೊಂಡಿತು. ಆದರೆ, ಈ ಪಂದ್ಯದಲ್ಲಿ ಸಿಎಸ್ಕೆ ಸೋತಾಗ ಅಭಿಮಾನಿಗಳು ತೀವ್ರ ನಿರಾಶೆಗೊಂಡರು. ಅದೇ ಸಮಯದಲ್ಲಿ, ಧೋನಿ (MS Dhoni) ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಭಿಮಾನಿಗಳೇ ಟ್ರೋಲ್ ಮಾಡುತ್ತಿದ್ದು, ತಂಡದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಬಂದು ಹೋಗುವುದರಿಂದ ತಂಡಕ್ಕೆ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಿದ್ದಾರೆ.
ಧೋನಿ ಬಯಸಿದರೆ ಬೇಗನೇ ಬರ್ತಿದ್ದರು!
ಶುಕ್ರವಾಗಿ ರಾತ್ರಿ ನಡೆದ ಪಂದ್ಯದಲ್ಲಿ ಧೋನಿ 9ನೇ ಸ್ಥಾನದಲ್ಲಿ ಬಂದರು. ಆದರೆ ವಾಸ್ತವದಲ್ಲಿ, ಶಿವಂ ದುಬೆ 13ನೇ ಓವರ್ನಲ್ಲಿ ಔಟಾಗಿದ್ದರು. ಈ ವೇಳೆ ಸಿಎಸ್ಕೆ ಅಭಿಮಾನಿಗಳು ಧೋನಿ ಬ್ಯಾಟಿಂಗ್ ಮಾಡಲು ಬರುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಆ ಬಳಿಕ ಕ್ರಮವಾಗಿ ಬ್ಯಾಟಿಂಗ್ ಗೆ ಇಳಿದಿದ್ದರು. ಆ ನಂತರ 16ನೇ ಓವರ್ನಲ್ಲಿ ಧೋನಿ ಕಣಕ್ಕೆ ಇಳಿದಿದ್ದರು. ಆ ವೇಳೆಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಖಚಿತವಾಗಿತ್ತು.
ಇದನ್ನೂ ಓದಿ: CSK vs RCB: ಚೆನ್ನೈ ವಿರುದ್ಧ ವಿರಾಟ್ ಕೊಹ್ಲಿ ಹೊಸ ದಾಖಲೆ ! ಶಿಖರ್ ಧವನ್ ಹೆಸರಿನಲ್ಲಿದ್ದ ರೆಕಾರ್ಡ್ ಉಡೀಸ್
9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದರಿಂದ (ಕೆಲವು ಸಂದರ್ಭಗಳಲ್ಲಿ ಹೊರತುಪಡಿಸಿ) ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಏಕೆಂದರೆ ಪಂದ್ಯ ಈಗಾಗಲೇ ಕೈ ಮೀರಿ ಸೋಲಿನ ಸುಳಿಯಲ್ಲಿ ಸಿಲುಕುತ್ತದೆ. ಆದರೆ, 9ನೇ ಕ್ರಮಾಂಕದಲ್ಲಿ ಬಂದ ಧೋನಿ, ಕೇವಲ 16 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳ ಸಹಾಯದಿಂದ 30 ರನ್ ಗಳಿಸಿ ಸೋಲಿನ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಲಾಲಿ ಪಾಪ್ ಕೊಟ್ಟರು.
ಅಭಿಮಾನಿಗಳ ವಾದ ಏನು?
ಮಹೇಂದ್ರ ಸಿಂಗ್ ಧೋನಿ ಮೇಲ್ ಕ್ರಮಾಂಕದಲ್ಲಿ ಬಂದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎನ್ನುತ್ತಾರೆ ಅಭಿಮಾನಿಗಳು. ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಧೋನಿ 43 ವರ್ಷ ವಯಸ್ಸಿನಲ್ಲೂ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಮೊದಲು ಬಂದು ಇನ್ನೂ ಕೆಲವು ರನ್ ಗಳಿಸಿದ್ದರೆ, ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತಿದ್ದರು ಎಂಬುದು ಸಿಎಸ್ಕೆ ಅಭಿಮಾನಿಗಳ ವಾದವಾಗಿದೆ. ಇದೇ ವೇಳೆ ಧೋನಿ 9ನೇ ಸ್ಥಾನದಲ್ಲಿ ಇಳಿದು ಸ್ವಾರ್ಥದಿಂದ ವರ್ತಿಸಿದ್ದಾರೆ ಎಂದು ಕೆಲ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mysuru: ಟೇಬಲ್ ಟೆನ್ನಿಸ್ ರಾಕೆಟ್ನಲ್ಲಿ ಬಾಲ್ ಟ್ಯಾಪ್ ಮಾಡುತ್ತಾ ಚಾಮುಂಡಿ ಬೆಟ್ಟ ಹತ್ತಿ ಇಳಿದ ನಿವೃತ್ತ ಶಿಕ್ಷಕ
ಅಭಿಮಾನಿಗಳು ಏನು ಹೇಳ್ತಿದ್ದಾರೆ?
‘ಮಹಿ, ನೀವು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದೀರಿ. ಬದಲಾಗಿ ನಿವೃತ್ತಿ ಘೋಷಿಸಿದ್ದರೆ ಚೆನ್ನಾಗಿರುತ್ತಿತ್ತು’, ‘ಸಿಎಸ್ಕೆ 197 ರನ್ಗಳ ಗುರಿಯನ್ನು ಚೇಸ್ ಮಾಡಲು 100 ರನ್ಗಳಿ ಸಂಕಷ್ಟಕ್ಕೆ ಸಿಲುಕಿತ್ತು, ಆದರೆ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುವುದರಿಂದ ಏನು ಪ್ರಯೋಜನ? 9ನೇ ಕ್ರಮಾಂಕದಲ್ಲಿ ಬಂದು ಎರಡು ಸಿಕ್ಸರ್ಗಳನ್ನು ಬಾರಿಸುವುದು ಪಿಆರ್ ಸ್ಟಂಟ್ ಆಗಿದೆಯೇ? ಅಭಿಮಾನಿಗಳಿಗೆ ಕೆಲವೇ ಸಿಕ್ಸರ್ಗಳನ್ನು ಬಾರಿಸುವುದರಿಂದ ಗೆಲುವು ಸಿಗುವುದಿಲ್ಲ. ಅಥವಾ ಮಹಿ ಅಗ್ರ ಕ್ರಮಾಂಕದಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವಾಸವನ್ನು ಕಳೆದುಕೊಂಡಿದ್ದಾರೆಯೇ? ಈ ವಿಷಯದ ಬಗ್ಗೆ ಅವರನ್ನು ಪ್ರಶ್ನಿಸಬೇಕು’ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
Chennai [Madras],Chennai,Tamil Nadu
March 29, 2025 9:44 AM IST