ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ, ನೂತನ ಪ್ರಾಸಾದದಲ್ಲಿ ತೆಕ್ಕಾರು ಗೋಪಾಲಕೃಷ್ಣ ದೇವರ ನೂತನ ಬಿಂಬ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ. 9 ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನವೂ ಅನ್ನಸಂತರ್ಪಣೆ ಇರಲಿದೆ.
ದೇವರಗುಡ್ಡೆಯ ಗೋಪಾಲಕೃಷ್ಣನ ವಿಗ್ರಹ ಐದೂವರೆ ಅಡಿ ಎತ್ತರದ್ದಾಗಿದೆ. ಇಷ್ಟು ಎತ್ತರದ ದೇವರ ವಿಗ್ರಹ ಗರ್ಭಗುಡಿಯಲ್ಲಿರುವುದು ಭಾರಿ ಅಪರೂಪ. ಹೊಯ್ಸಳ ಶೈಲಿಯಲ್ಲಿ ಗೋಪಾಲಕೃಷ್ಣನ ನಿಂತಿರುವ ವಿಗ್ರಹ ಇದಾಗಿದೆ. ಕಾರ್ಕಳದಲ್ಲಿ ವಿಗ್ರಹ ಕೆತ್ತನೆ ಮಾಡಿ ತರಿಸಲಾಗಿದೆ. ತೆಕ್ಕಾರು ಗ್ರಾಮದಲ್ಲಿ ಬೇರೆ ದೇವಸ್ಥಾನಗಳಿಲ್ಲ. 300 ವರ್ಷಗಳ ಹಿಂದೆ ಇಲ್ಲಿ ದೇಗುಲವಿದ್ದು ನಿತ್ಯಪೂಜೆಗಳು ನಡೆಯುತ್ತಿದ್ದವು ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಕ್ರಮೇಣ ಅದು ವಿವಿಧ ಕಾರಣಗಳಿಂದ ಕಾಲಗರ್ಭದಲ್ಲಿ ಸೇರಿಹೋಯ್ತು. ಕಳೆದ ಕೆಲವು ವರ್ಷಗಳಿಂದ ನಡೆದ ಪ್ರಮುಖ ಬೆಳವಣಿಗೆಗಳ ಬಳಿಕ, 2024 ರಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡಿತು. ಒಂದು ವರ್ಷದೊಳಗೆ ದೇಗುಲ ನಿರ್ಮಾಣವಾಗಿ, ಬ್ರಹ್ಮಕಲಶ ನಿಗದಿಯಾಗಿದೆ.
ಏಪ್ರಿಲ್ 25ರ ಶುಕ್ರವಾರ: ಉಗ್ರಾಣ ಮುಹೂರ್ತ, ಕೊಪ್ಪರಿಗೆ ಮುಹೂರ್ತ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು. ಏಪ್ರಿಲ್ 26 ಶನಿವಾರ: ಗಣಪತಿ ಪೂಜೆ, ಅಂಕುರ ಪೂಜೆ, ಬಿಂಬ ಪರಿಗ್ರಹ, ಬಿಂಬಕ್ಕೆ ಸಾಮೂಹಿಕ ಅರ್ಚನೆ, ಪಲ್ಲಪೂಜೆ, ವಿವಿಧಾ ಭಜನಾ ತಂಡಗಳಿಂದ ಭಜನಾ ಸೇವೆ.
ಇದನ್ನೂ ಓದಿ: Mandya: ತಂದೆ- ತಾಯಿ ಪಾದ ಪೂಜೆ ಮಾಡಿದ ಪುಟಾಣಿ ಮಕ್ಕಳು!
ಏಪ್ರಿಲ್ 27 ಭಾನುವಾರ: ತ್ರಿಕಾಲ ಪೂಜೆ, ಪಲ್ಲಪೂಜೆ, ಭಜನಾ ಸೇವೆ, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8 ಗಂಟೆಯಿಂದ ಸುಸ್ವರ ಮೆಲೋಡೀಸ್ -ಉಪ್ಪಿನಂಗಡಿ ತಂಡದಿಂದ ಭಕ್ತಿ ಭಾವ ಗಾನಸುಧೆ.
ಏಪ್ರಿಲ್ 28, ಸೋಮವಾರ: ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ ಭಜನಾ ಸೇವೆ, ರಾತ್ರಿ 7 ಗಂಟೆಗೆ ಬ್ರಹ್ಮಕಲಶ ಪ್ರತಿಷ್ಠಾರ್ಥಂ ಅಂಕುರಾರ್ಪಣೆ, ಸಂಜೆ 6 ಗಂಟೆಯಿಂದ ಧಾರ್ಮಿಕ ಸಾಭಾ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆ, ರಾತ್ರಿ 8 ಗಂಟೆಯಿಂದ ದೇವದಾಸ್ ಕಾಪಿಕಾಡ್ ನೇತೃತ್ವದ ಚಾಪರ್ಕ ಕಲಾವಿದರಿಂದ “ಏರ್ಲಾ ಗ್ಯಾರಂಟಿ ಅತ್ತ್” ನಾಟಕ.
ಏಪ್ರಿಲ್ 29, ಮಂಗಳವಾರ: ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ವಿಠಲ್ ನಾಯಕ್ ಕಲ್ಲಡ್ಕ ನೇತೃತ್ವದಲ್ಲಿ “ಗೀತಾ ಸಾಹಿತ್ಯ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮ.
ಏಪ್ರಿಲ್ 30, ಬುಧವಾರ: ಬೆಳಗ್ಗೆ ಗೋಪಾಲಕೃಷ್ಣ ದೇವರ ಬಿಂಬಪ್ರಾಣ ಪ್ರತಿಷ್ಠೆ, ಗಣಪತಿ ಮತ್ತು ದುರ್ಗೆ ನೂತನ ಬಿಂಬ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಬಲಿ, ಮಧ್ಯಾಹ್ನ ಪೂಜೆ, ನಿತ್ಯ ನಿಮಿತ್ತಿಕೆಗಳ ನಿಶ್ಚಯ, ಮತ್ತು ಅನುಷ್ಠಾನ ಸಂಕಲ್ಪ ಪ್ರಾರ್ಥನೆ, ಮಧ್ಯಾಹ್ನ ವಿಷ್ಣುಸಹಸ್ರನಾಮ ಮತ್ತು ನಾರಾಯಣೀಯಂ ಪಾರಾಯಣ, ಸಂಜೆ 4:30ರಿಂದ ಡಾ| ವಿದ್ಯಾಭೂಷಣ ಇವರಿಂದ ಭಕ್ತಿಗಾನಸುಧೆ, ಸಂಜೆ 6ರಿಂದ ಧಾರ್ಮಿಕ ಸಭಾಕಾರ್ಯಕ್ರಮ, ರಾತ್ರಿ 8 ಗಂಟೆಯಿಂದ ಸಾಯಿಶಕ್ತಿ ಕಲಾಬಳಗ ಮಂಗಳೂರು ಇವರಿಂದ ‘ಜೋಡುಜೀಟಿಗೆ’ ನಾಟಕ.
ಮೇ 1, ಗುರುವಾರ: ವೈದಿಕ ಕಾರ್ಯಕ್ರಮ, ಭಜನಾ ಸೇವೆ, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭೆ, ರಾತ್ರಿ 8 ಗಂಟೆಯಿಂದ ಇಂಚರಾ ಮ್ಯೂಸಿಕ ತಂಡದಿಂದ ಭಕ್ತಿ ರಸಮಂಜರಿ, ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ -ಕಾಟಿಪಳ್ಳ ತಂಡದಿಂದ ‘ಕೃಷ್ಣಲೀಲೆ ಕಂಸವಧೆ’ ಯಕ್ಷಗಾನ.
ಮೇ 2, ಶುಕ್ರವಾರ: ವಿವಿಧ ವೈದಿಕ ಕಾರ್ಯಕ್ರಮಗಳು, ಭಜನಾ ಸೇವೆ, ರಾತ್ರಿ ಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ (ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ). ರಾತ್ರಿ 8 ಗಂಟೆಯಿಂದ ಅಮ್ಮ ಕಲಾವಿದೆರ್ ಮಂಗಳೂರು ಇವರಿಂದ ತುಳು ಹಾಸ್ಯಮಯ ನಾಟಕ ‘ಜಗತ್ತೇ ಶೂನ್ಯ ಸ್ವಾಮಿ’
ಮೇ 3, ಶನಿವಾರ: ಕವಾಟೋದ್ಘಾಟನೆ, ತೈಲಾಂಭ್ಯಂಗನ, ಉಷಃ ಪೂಜೆ, ಪರಿಕಲಶಾಭಿಷೇಕ, ಭಜನಾ ಸೇವೆ, ಧಾರ್ಮಿಕ ಸಭಾ ಕಾರ್ಯಕ್ರಮ. ರಾತ್ರಿ 8 ಗಂಟೆಯಿಂದ ‘ಗೆಜ್ಜೆಗಿರಿ ಕ್ಷೇತ್ರಮಹಾತ್ಮೆ’ ಯಕ್ಷಗಾನ.
ಭಕ್ತರಿಗೆ ಅರ್ಚನೆಗೆ ಅವಕಾಶ: ಏಪ್ರಿಲ್ 26ರ ಬೆಳಗ್ಗೆ 10 ಗಂಟೆಯಿಂದ 28ರ ಸಂಜೆ 5 ಗಂಟೆಯವರೆಗೆ ಅರ್ಚನೆ ಮಾಡಿ ಆರತಿ ಬೆಳಗಬಹುದು.
ದೇವರಗುಡ್ಡೆಯ ಗೋಪಾಲಕೃಷ್ಣನ ವಿಗ್ರಹ ಐದೂವರೆ ಅಡಿ ಎತ್ತರದ್ದಾಗಿದೆ. ಇಷ್ಟು ಎತ್ತರದ ದೇವರ ವಿಗ್ರಹ ಗರ್ಭಗುಡಿಯಲ್ಲಿರುವುದು ಭಾರಿ ಅಪರೂಪ. ಹೊಯ್ಸಳ ಶೈಲಿಯಲ್ಲಿ ಗೋಪಾಲಕೃಷ್ಣನ ನಿಂತಿರುವ ವಿಗ್ರಹ ಇದಾಗಿದೆ. ಕಾರ್ಕಳದಲ್ಲಿ ವಿಗ್ರಹ ಕೆತ್ತನೆ ಮಾಡಿ ತರಿಸಲಾಗಿದೆ. ತೆಕ್ಕಾರು ಗ್ರಾಮದಲ್ಲಿ ಬೇರೆ ದೇವಸ್ಥಾನಗಳಿಲ್ಲ. 300 ವರ್ಷಗಳ ಹಿಂದೆ ಇಲ್ಲಿ ದೇಗುಲವಿದ್ದು ನಿತ್ಯಪೂಜೆಗಳು ನಡೆಯುತ್ತಿದ್ದವು ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಕ್ರಮೇಣ ಅದು ವಿವಿಧ ಕಾರಣಗಳಿಂದ ಕಾಲಗರ್ಭದಲ್ಲಿ ಸೇರಿಹೋಯ್ತು. ಕಳೆದ ಕೆಲವು ವರ್ಷಗಳಿಂದ ನಡೆದ ಪ್ರಮುಖ ಬೆಳವಣಿಗೆಗೆಳ ಬಳಿಕ, 2024 ರಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯಗಳು ಆರಂಭಗೊಂಡಿತು. ಒಂದು ವರ್ಷದೊಳಗೆ ದೇಗುಲ ನಿರ್ಮಾಣವಾಗಿ, ಬ್ರಹ್ಮಕಲಶ ನಿಗದಿಯಾಗಿದೆ.
ತೆಕ್ಕಾರಿನಲ್ಲಿ 300 ವರ್ಷಗಳ ಹಿಂದೆಯೇ ದೇಗುಲ ಇದ್ದ ಬಗ್ಗೆ, ಇಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿದ್ದ ಬಗ್ಗೆ ಪುರಾವೆಗಳಿವೆ. ಆದರೆ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಲು ಮುಖ್ಯ ಕಾರಣ, ಬೆಂಗಳೂರು ಮೂಲದ ಉದ್ಯಮಿಯಾದ ಲಕ್ಷಣ ಎಂಬವರಿಗೆ ಕಂಡ ಕನಸು. ಲಕ್ಷ್ಮಣ ಅವರು ನೂರಾರು ವರ್ಷಗಳ ಹಿಂದೆ ದೇವರಗುಡ್ಡೆಯಲ್ಲಿ ದೇವಸ್ಥಾನ ಇತ್ತು ಎನ್ನಲಾದ ಸ್ಥಳದ ಪಕ್ಕದ ಜಮೀನು ಖರೀದಿಸಿದ್ದರು. ಒಂದು ದಿನ ತಮ್ಮ ಮನೆಯಲ್ಲಿ ಸ್ನೇಹಿತರೊಂದಿಗೆ ಮಲಗಿದ್ದಾಗ ಜಮೀನಿನಲ್ಲಿ ಇರುವ ಕೆರೆಗೆ ಸ್ನೇಹಿತ ಬಿದ್ದ ಕನಸು ಕಂಡರು. ಸ್ನೇಹಿತನ ರಕ್ಷಣೆಗೆ ಕೆರೆಗೆ ಇಳಿದಾಗ ಶ್ರೀಮನ್ನಾರಾಯಣನ ವಿಗ್ರಹ ಕಾಣಿಸಿತು. ದಿಢೀರ್ ಎಚ್ಚರವಾದಾಗ ಅದು ಕನಸಾಗಿತ್ತು. ಕಂಡ ಕನಸಿನ ಬಗ್ಗೆ, ಗ್ರಾಮಸ್ಥರೆಲ್ಲಾ ಸೇರಿ ಪ್ರಶ್ನಾಚಿಂತನೆ ನಡೆಸಿ ಸ್ಥಳದಲ್ಲಿ ಉತ್ಖನನ ಮಾಡಿದಾಗ ಗೋಪಾಲಕೃಷ್ಣನ ಭಗ್ನವಾದ ಮೂರ್ತಿ ಹಾಗೂ ಇತರ ದೇವಸ್ಥಾನದ ಅವಶೇಷಗಳು ಸಿಕ್ಕವು. ಕಂಡ ಕನಸು ನಿಜವಾಗಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಯ್ತು. ಆ ಬಳಿಕ, ಜಮೀನು ಖರೀದಿ, ಸಮಿತಿಗಳ ರಚನೆಯಾಗಿ ದೇಗುಲ ನಿರ್ಮಾಣ ಕಾರ್ಯ ಆರಂಭವಾಗಿತ್ತು.
Dakshina Kannada,Karnataka
April 21, 2025 3:29 PM IST