Last Updated:
ಕಲ್ಲುರ್ಟಿ ಪಂಜುರ್ಲಿ ದೈವ ಮಾನವನ ನಡುವೆಯೇ ಇರುವ ಶಕ್ತಿಯಾಗಿದ್ದು, ಭಾವನಾತ್ಮಕ ಸಂಬಂಧವನ್ನು ಈ ದೈವಗಳು ಹೊಂದಿವೆ. ತುಳುನಾಡಿನ ದೈವಗಳಲ್ಲಿ ಪಂಜುರ್ಲಿ ದೈವ ಅತ್ಯಂತ ಹಳೆಯ ದೈವವಾಗಿದೆ. ಭೂಮಿಯಲ್ಲಿ ಬೆಳೆದ ಕೃಷಿಯನ್ನು ಹಂದಿಗಳಿಂದ ರಕ್ಷಣೆ ಮಾಡಲು ಈ ಆರಾಧನೆ ಆರಂಭವಾಗಿರಬಹುದು.
ದಕ್ಷಿಣ ಕನ್ನಡ: ತುಳುನಾಡಿನ ಜನ(Tulunadu People) ಇಂದಿಗೂ ತಾವು ನಂಬಿದ ದೈವಗಳನ್ನು(Daiva) ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಪ್ರಕೃತಿ(Nature) ಮತ್ತು ಮಾನವನ(Human) ನಡುವಿನ ಸಂಬಂಧಕ್ಕೆ ದೈವಗಳು ಕೊಂಡಿಯಾಗಿದೆ. ತುಳುನಾಡಿನಲ್ಲಿ ಸಾವಿರಕ್ಕೂ ಅಧಿಕ ದೈವಗಳ ಆರಾಧನೆಯಿದ್ದರೂ ಕುಟುಂಬಕ್ಕೆ ಸಂಬಂಧಿಸಿದಂತೆ ಕಲ್ಲುರ್ಟಿ ಪಂಜುರ್ಲಿ(Kallurti-Panjurli) ಆರಾಧನೆಯ ಪ್ರಾಮುಖ್ಯವಾದುದು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಕಾಂಪ್ರಬೈಲುನಲ್ಲಿ ಭಕ್ತರ ಸೇವಾ ರೂಪದಲ್ಲಿ ಕಲ್ಲುರ್ಟಿ – ಪಂಜುರ್ಲಿ ದೈವಗಳಿಗೆ ಕೋಲ ಸೇವೆ ವಿಜೃಂಭಣೆಯಿಂದ ನಡೆದಿದೆ. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ದೈವದ ಕೋಲ ಸೇವೆಯ ಕಣ್ತುಂಬಿಕೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಕಲ್ಲುರ್ಟಿ ಪಂಜುರ್ಲಿ ದೈವ ಮಾನವನ ನಡುವೆಯೇ ಇರುವ ಶಕ್ತಿಯಾಗಿದ್ದು, ಭಾವನಾತ್ಮಕ ಸಂಬಂಧವನ್ನು ಈ ದೈವಗಳು ಹೊಂದಿವೆ. ತುಳುನಾಡಿನ ದೈವಗಳಲ್ಲಿ ಪಂಜುರ್ಲಿ ದೈವ ಅತ್ಯಂತ ಹಳೆಯ ದೈವವಾಗಿದೆ. ಭೂಮಿಯಲ್ಲಿ ಬೆಳೆದ ಕೃಷಿಯನ್ನು ಹಂದಿಗಳಿಂದ ರಕ್ಷಣೆ ಮಾಡಲು ಈ ಆರಾಧನೆ ಆರಂಭವಾಗಿರಬಹುದು.
ಕಲ್ಲುರ್ಟಿ-ಪಂಜುರ್ಲಿ ದೈವಗಳು ಕುಟುಂಬದ ಪ್ರಧಾನ ದೈವಗಳಾಗಿ ಆರಾಧನೆಗೊಳ್ಳತ್ತದೆ. ಹಾಗಾಗಿ ತುಖುನಾಡಿನಲ್ಲಿ ಕಲ್ಲುರ್ಟಿ ಪಂಜುರ್ಲಿ ದೈವಗಳು ಇಲ್ಲದ ಕುಟುಂಬಗಳೇ ಇಲ್ಲ ಎನ್ನಬಹುದು. ಇವುಗಳನ್ನು ಸಹೋದರ-ಸಹೋದರಿ ದೈವಗಳಾಗಿ ಪೂಜಿಸಲಾಗುತ್ತದೆ. ಈ ದೈವಗಳು ಹೆತ್ತರೆ ತಾಯಿಯ ತರಹ, ಸಾಕಿ-ಸಲಹಿದರೆ ಮಾವನ ರೀತಿ ರಕ್ಷಣೆ ನೀಡುವ ದೈವಗಳು ಎಂದು ಜನ ಇಂದಿಗೂ ಆರಾಧನೆಯನ್ನು ಮಾಡುತ್ತಾರೆ.
ಎಷ್ಟೇ ದೊಡ್ಡ ದೈವಗಳಿದ್ದರೂ, ಕುಟುಂಬದಲ್ಲಿ ಯಾವುದಾದರೊಂದು ವ್ಯಾಜ್ಯಗಳಿದ್ದರೆ ಅದಕ್ಕೆ ತೀರ್ಪು ನೀಡುವ ಅಧಿಕಾರವನ್ನು ಹೊಂದಿರುವುದು ಪಂಜರ್ಲಿ ಹಾಗೂ ಕಲ್ಲುರ್ಟಿ ದೈವಗಳಿಗೆ ಮಾತ್ರ. ಕಲ್ಲುರ್ಟಿ ದೈವ ಕುಟುಂಬ ಬಂಧುಗಳಿಗೆ ಸಲಹೆ ನೀಡಿದರೆ, ಪಂಜುರ್ಲಿ ಸರಿಯಾದ ದಿಕ್ಕನ್ನು ತೋರಿಸುತ್ತದೆ.
Dakshina Kannada,Karnataka