Last Updated:
ಕೊಳಚ್ಚಿ ಕಂಬಳದಲ್ಲಿ ಜಾರಾಂದಾಯ ಮತ್ತು ಬಂಟ ದೈವದ ನೇಮೋತ್ಸವ ನಡೆದಿದೆ. ನೇಮೋತ್ಸವದ ವೇಳೆ ಜಾರಾಂದಾಯ ಬಂಟ ದೈವ ದುರ್ಗಾಪರಮೇಶ್ವರಿಯ ರಥ ಮುರಿದು ಬಿದ್ದಿರೋದಕ್ಕೆ ತೀವ್ರ ಅಸಹನೆ ವ್ಯಕ್ತಪಡಿಸಿದೆ.
ದಕ್ಷಿಣ ಕನ್ನಡ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ(Durgaparameshwari Devi) ಬ್ರಹ್ಮ ರಥೋತ್ಸವದ(Brahma Rathotsava) ವೇಳೆ ರಥ ಮುರಿದು ಬಿದ್ದಿರೋದು ಅಗಣಿತ ಭಕ್ತರನ್ನು(Devotees) ಕಂಗಾಲಾಗಿಸಿದೆ. ಘಟನೆಯಾಗಿ ವಾರ ಕಳೆದರೂ ಭಕ್ತರ ಮನಸ್ಸಿನ ನೋವು ಇನ್ನೂ ಮಾಸಿಲ್ಲ. ಭಕ್ತರ ಮನಸ್ಸಿನ ಕಥೆ ಒಂದೆಡೆಯಾದರೆ, ಬಪ್ಪನಾಡಿನ ದುರ್ಗೆಯ ಸಹಪರಿವಾರ ದೈವವೂ ದೇವಿಯ ರಥ ಮುರಿದು ಬಿದ್ದಿರೋದಕ್ಕೆ ಬೇಸರ ವ್ಯಕ್ತಪಡಿಸಿದೆ. ಬಪ್ಪನಾಡು ದೇವಸ್ಥಾನಕ್ಕೆ ಒಳಪಟ್ಟ ಕೊಳಚ್ಚಿಕಂಬಳ ಎಂಬಲ್ಲಿ ನಡೆದ ಜಾರಾಂದಾಯ ಮತ್ತು ಬಂಟ ದೈವವ ನೇಮೋತ್ಸವ ದ ವೇಳೆ ಬಂಟನ ಆವೇಶ, ಬೇಸರ ವ್ಯಕ್ತಪಡಿಸಿದ ರೀತಿಗೆ ಜನರೇ(People) ಬೆಚ್ಚಿ ಬಿದ್ದಿದ್ದಾರೆ.
ಕೊಳಚ್ಚಿ ಕಂಬಳದಲ್ಲಿ ಜಾರಾಂದಾಯ ಮತ್ತು ಬಂಟ ದೈವದ ನೇಮೋತ್ಸವ ನಡೆದಿದೆ. ನೇಮೋತ್ಸವದ ವೇಳೆ ಜಾರಾಂದಾಯ ಬಂಟ ದೈವ ದುರ್ಗಾಪರಮೇಶ್ವರಿಯ ರಥ ಮುರಿದು ಬಿದ್ದಿರೋದಕ್ಕೆ ತೀವ್ರ ಅಸಹನೆ ವ್ಯಕ್ತಪಡಿಸಿದೆ. ದೇವಸ್ಥಾನದ ಪ್ರಮುಖರು ,ಅರ್ಚಕರ ಮುಂಭಾಗ ಬಂಟದ ದೈವದ ಆವೇಶ, ರಥ ಮುರಿದು ಬಿದ್ದಿರೋದಕ್ಕೆ ತೋರಿದ ಭಾವೋದ್ವೇಗ ಭಕ್ತರನ್ನು ಕಂಗಾಲಾಗಿಸಿದೆ.
ಇದನ್ನೂ ಓದಿ: Dakshina Kannada: ಪೆಹಲ್ಗಾಮ್ ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣದ ಆಫರ್ ನೀಡಿದ ಪುತ್ತೂರಿನ ಸಂಸ್ಥೆ!
ದೇವಿಯ ರಥ ಬಿದ್ದಿರೋದಕ್ಕೆ ಸನ್ನೆಯ ಮೂಲಕವೇ ಆಕ್ರೋಶ ವ್ಯಕ್ತಪಡಿಸಿದ ದೈವ ಶೀಘ್ರವೇ ಸಮಸ್ಯೆ ನಿವಾರಣೆಗೆ ಆಗ್ರಹ ಮಾಡಿದೆ. ಒಂಬತ್ತು ಮಾಗಣೆಯ ಅಧಿದೇವತೆ ಬಪ್ಪನಾಡು ದುರ್ಗಾಪರಮೇಶ್ವರಿ ಯ ರಥೋತ್ಸವ ಭಾರೀ ವೈಭವದಿಂದ ನಡೆಯುತ್ತಿದ್ದು, ಸಮಿತಿಯವರ ಒಳಮನಸ್ಸಿನ ಗುದ್ದಾಟವೇ ಈ ಘಟನೆಗೆ ಕಾರಣ ಅಂತಾ ದೈವ ಹೇಳಿದೆ. ಜಾರಾಂದಾಯ ಬಂಟ ದೈವದ ಆವೇಶವನ್ನು ಸಮಾಧಾನಿಸಲು ಅರ್ಚಕರು ಶೀಘ್ರವೇ ಶಾಶ್ವತ ಪರಿಹಾರವನ್ನು ಮಾಡೋದಾಗಿ ಹೇಳಿದ್ದಾರೆ.
ಬಳಿಕ ಪ್ರಧಾನ ಜಾರಾಂದಾಯ ದೈವ ತನ್ನ ನುಡಿಯಲ್ಲ ಹಲವು ಸೂಚನೆಯನ್ನು ನೀಡಿದೆ. ಶೀಘ್ರವೇ ಪ್ರಶ್ನಾ ಚಿಂತನೆಯನ್ನು ದೇವಸ್ಥಾನದಲ್ಲಿ ಮಾಡಬೇಕು. ಚಿಂತನೆಯಲ್ಲಿ ಕಂಡುಬಂದ ರೀತಿ ಎಲ್ಲರೂ ನಡೆದುಕೊಳ್ಳಬೇಕು. ಸಾವಿರ ಜನ ಸೇರಿದರೂ ಯಾರಿಗೂ ಯಾವುದೇ ಹಾನಿಯಾಗದಂತೆ ಕಾಪಾಡಿದ್ದೇವೆ. ಆದರೆ ಎಲ್ಲರೂ ಏಕ ಮನಸ್ಸಿನಿಂದ ದೇವಿಯ ಸೇವೆ ಮಾಡಬೇಕೆಂದು ದೈವ ತನ್ನ ನುಡಿಯಲ್ಲಿ ಹೇಳಿದೆ.
Dakshina Kannada,Karnataka
April 28, 2025 3:54 PM IST