Last Updated:
ಇದುವರೆಗೆ ಕೇರಳ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ 900 ಕಿಲೋಮೀಟರ್ ದೂರ ಪಾದಯಾತ್ರೆ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ದಕ್ಷಿಣ ಕನ್ನಡ: ಮೃಗಗಳ ರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರು ಮೂಲದ ಎಂಜಿನಿಯರಿಂಗ್ ಪದವೀಧರ(Engineering Graduate) ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ಸುಮನ್ ಅಶ್ವಿನ್(Suman Ashwin) ಏಳು ಪ್ರಮುಖ ರಾಜ್ಯಗಳನ್ನು ದಾಟಿ ಇದೀಗ ತಲಪಾಡಿಯ ಮೂಲಕ ಕರ್ನಾಟಕ(Karnataka) ಪ್ರವೇಶಿಸಿದ್ದಾರೆ. ದಾರಿಮಧ್ಯೆ ತನ್ನೊಂದಿಗೆ ಸಿಕ್ಕ ನಾಯಿಗೆ ಬೈರವ ಅನ್ನುವ ಹೆಸರನ್ನಿಟ್ಟುಕೊಂಡು ವ್ಹೀಲ್ ಚೇರ್(Wheel Chair) ಮೂಲಕ ನಡೆದುಕೊಂಡು ಸಾಗುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಐ ಆಮ್ ಇನ್ಫಿನಿಟೀ _ ಸುಮಂತ್ ಅಶ್ವಿನ್ ಅನ್ನುವ ಹೆಸರಿನ ಇನ್ಸ್ಟಾಗ್ರಾಮ್, ಫೇಸ್ಬುಕ್ , ಯುಟ್ಯೂಬ್ ನಲ್ಲಿ ಅಕೌಂಟ್ ತೆರೆದು ಅದರ ಮೂಲಕ ನಿತ್ಯದ ವೀಡಿಯೋಗಳನ್ನು ಹಾಕುತ್ತಾ ದೇಶ ಸುತ್ತುತ್ತಿದ್ದಾರೆ. ಕರ್ನಾಟಕದ ಇಂಜಿನಿಯರಿಂಗ್ ಪದವಿ ಕೋರ್ಸ್ 3ನೇ ವರ್ಷದ ವಿದ್ಯಾರ್ಥಿ. ಮೃಗಗಳು, ನೈಸರ್ಗಿಕ ಸಂಪತ್ತು, ಮತ್ತು ನೀರಿನ ಕೊರತೆ ಮತ್ತಷ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅವರು ತಮ್ಮ ಪದವಿ ಅಭ್ಯಾಸವನ್ನು ಮಧ್ಯದಲ್ಲಿ ನಿಲ್ಲಿಸಿ, ತಮ್ಮ ದಾರಿಯಲ್ಲಿ ಸಿಕ್ಕ ನಾಯಿಗೆ ‘ಬೈರವ’ ಎಂಬ ಹೆಸರನ್ನಿಟ್ಟುದೇಶದಾದ್ಯಂತ ಪಾದಯಾತ್ರೆಗೆ ನಿರ್ಧರಿಸಿದರು.
ವರ್ಷದ ಹಿಂದೆ ಮಂತ್ರಾಲಯದಿಂದ ಆರಂಭಿಸಿದ ಪಾದಯಾತ್ರೆ ನಾಯಿಯನ್ನು ತಳ್ಳುವ ಗಾಡಿಯಲ್ಲಿ ಕೂಡಿ ಮಾಡಿಕೊಂಡು ಅವರು ಈ ಪಯಣ ಮುಂದುವರೆಸುತ್ತಿದ್ದಾರೆ. ಇದುವರೆಗೆ ಕೇರಳ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ 900 ಕಿಲೋಮೀಟರ್ ದೂರ ಪಾದಯಾತ್ರೆ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಪ್ರತಿದಿನವೂ ಸರಾಸರಿ 25 ರಿಂದ 30 ಕಿಲೋಮೀಟರ್ ದೂರ ನಡೆಯುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಾಣಿಗಳ ರಕ್ಷಣೆ, ನೈಸರ್ಗಿಕ ಸಂಪತ್ತು ಸಂರಕ್ಷಣೆ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ತೀವ್ರ ಬಿಸಿಲಿನಿಂದ ನಾಯಿ ಅಸೌಖ್ಯಕ್ಕೀಡಾಗುತ್ತದೆ ಎಂದು ಹೇಳುವ ಸುಮಂತ್, ಬೈರವನನ್ನು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಸಾಗಿಸುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂಬುದು ಅವರ ನಿಲುವು. ಬೀದಿನಾಯಿಗಳಿಗೆ ಸಂರಕ್ಷಣಾ ಯೋಜನೆಗಳು ರೂಪಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.
ಬಿಸಿಲಿನ ತೀವ್ರತೆಗೆ ತಕ್ಕಂತೆ, ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲೆ ಹೆಚ್ಚಿನ ಪಯಣ ಮಾಡಲಾಗುತ್ತಿದೆ. ಪೆಟ್ರೋಲ್ ಬಂಕ್ಗಳು ಮತ್ತು ದೇವಾಲಯಗಳ ಬಳಿ ವಿಶ್ರಾಂತಿಯ ಅವಕಾಶ ಹುಡುಕುತ್ತಾ ನಿಂತು ಮುಂದುವರಿಯುತ್ತಿದ್ದಾರೆ.
Dakshina Kannada,Karnataka
May 06, 2025 12:09 PM IST