Last Updated:
ಬೆಂಕಿಯನ್ನು ಎಸೆಯುವಾಗ ಇವರಲ್ಲಿರುವ ಕೋಪಾವೇಶ ಈ ಆಟ ಮುಗಿದ ಬಳಿಕ ಇರುವುದಿಲ್ಲ. ಎಲ್ಲರೂ ಒಂದಾಗಿ ದೇವರ ದರ್ಶನ ಮಾಡಿ ಜೊತೆಯಾಗಿ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಈ ಅಗ್ನಿಕೇಳಿಯಲ್ಲಿ ಭಾಗವಹಿಸುವವರು ಎಂಟು ದಿನಗಳ ಶಾಖಾಹಾರಿಯಾಗಿರಬೇಕು. ಒಪ್ಪೊತ್ತಿನ ಊಟ ಮಾಡಿ ವ್ರತಾಚರಣೆಯನ್ನು ಮಾಡಬೇಕು.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಬಹುಪಾಲು ಜನರ ಆರಾಧ್ಯ ದೇವತೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಜಾತ್ರೋತ್ಸವ(Durgaparameshwari Jatrotsav) ಸಂಪನ್ನವಾಗಿದೆ. ಎಂಟು ದಿನಗಳ ಕಾಲ ನಡೆದ ಜಾತ್ರೋತ್ಸವ ಅಗ್ನಿಕೇಳಿಯೊಂದಿಗೆ ತೆರೆ ಕಂಡಿದೆ. ಈ ಜಾತ್ರೋತ್ಸವದ ವಿಶೇಷತೆಯೇ ಅಗ್ನಿಕೇಳಿ. ಜಾತ್ರೆಯ ಕೊನೆಯ ದಿನ ಕಟ್ಟೆ ಪೂಜೆಗಳನ್ನು ಮುಗಿಸಿ ದೇವರ ಅವಭೃತ ಸ್ನಾನದ ನಂತರ ಮುಂಜಾನೆ ವೇಳೆ ನಡೆಯುವ ಅಗ್ನಿಕೇಳಿ ಬಹಳ ವಿಶೇಷತೆಯನ್ನು ಹೊಂದಿದೆ. ದುಷ್ಟ ಸಂಹಾರದ ಬಳಿಕ ಅಗ್ನಿಪ್ರಿಯೆ ದುರ್ಗಾಪರಮೇಶ್ವರಿ ಸಂತುಷ್ಟಗೊಂಡ ಪ್ರತೀಕವಾಗಿ ಈ ಅಗ್ನಿಕೇಳಿಯನ್ನು ಮಾಡಲಾಗುತ್ತದೆ. ಕಟೀಲು ಸಮೀಪದ ಅತ್ತೂರು ಮತ್ತು ಕೊಡೆತ್ತೂರು ಎಂಬ ಎರಡೂ ಗ್ರಾಮದ ಜನರು ಎದುರೆದುರಾಗಿ ನಿಂತು ಬೆಂಕಿಯ ಜ್ವಾಲೆಗಳಿರುವ ದೀವಟಿಗೆಯನ್ನು ಒಬ್ಬರಿಗೊಬ್ಬರು ಎಸೆಯುತ್ತಾರೆ. ಆದರೆ, ಈವರೆಗಿನ ಇತಿಹಾಸದಲ್ಲಿ(History) ಈ ಬೆಂಕಿಯ ಕೊಳ್ಳಿಯ ಹೋರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕನಿಷ್ಠ ಉಟ್ಟ ಬಟ್ಟೆಗೂ ಬೆಂಕಿ ತಗುಲಿಲ್ಲ. ಹಾಗೇನಾದರೂ ಬೆಂಕಿ ತಾಗಿದರೆ ತಾಯಿಯ ಕುಂಕುಮ ಹಚ್ಚಿದರೆ ಶಮನವಾಗುತ್ತದೆ.
ಇದನ್ನೂ ಓದಿ: Dakshina Kannada: ಹೂವಿನ ರಂಗೋಲಿ ಬಿಡಿಸಿ ದಾಖಲೆ ಬರೆದ ಡಿಗ್ರಿ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿ!
ದುರ್ಗಾಪರಮೇಶ್ವರಿ ನಂದಿನಿ ನದಿಯಲ್ಲಿ ಅವಭೃತ ಸ್ನಾನ ಮಾಡಿದ ಬಳಿಕ ನದಿದಡದಲ್ಲೇ ಮೊದಲ ಅಗ್ನಿಕೇಳಿಯನ್ನು ಮಾಡಲಾಗುತ್ತದೆ. ದೇವರ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ದೇವಳದ ಮುಂಭಾಗದ ರಥಬೀದಿಗೆ ಬರುತ್ತಿದ್ದಂತೆಯೇ ಎರಡೂ ಗ್ರಾಮಸ್ಥರು ಎದುರುಬದಿರಾಗಿ ನಿಂತು ಬೆಂಕಿಯ ದೀವಿಟಿಗೆಯನ್ನು ಪರಸ್ಪರೆ ಎಸೆಯುತ್ತಾರೆ. ಇದೊಂದು ಸಾಂಕೇತಿಕ ಹೋರಾಟವಾಗಿದ್ದರೂ ಈ ಸಂದರ್ಭದಲ್ಲಿ ಮಾತ್ರ ಆವೇಶದಿಂದ ನೈಜ ವೈರಿಗಳ ಥರಾ ಹೋರಾಟ ನಡೆಸುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗುವುದೂ ಇದೆ .ಇವರನ್ನು ನಿಯಂತ್ರಿಸಲೆಂದೇ ಗ್ರಾಮದ ಹಿರಿಯರೂ ಇರುತ್ತಾರೆ. ಮೂರು ಬಾರಿ ಈ ರೀತಿ ಬೆಂಕಿ ಎಸೆಯುವಾಗ ಯಾರು ಹಿಂದಕ್ಕೆ ಸರಿಯುತ್ತಾರೋ ಅವರು ಸೋಲುತ್ತಾರೆ. ಹಾಗಾಗಿ ಗೆಲ್ಲುವ ಛಲದಿಂದಲೇ ಹೋರಾಟ ನಡೆಸುತ್ತಾರೆ.
ಬೆಂಕಿಯನ್ನು ಎಸೆಯುವಾಗ ಇವರಲ್ಲಿರುವ ಕೋಪಾವೇಶ ಈ ಆಟ ಮುಗಿದ ಬಳಿಕ ಇರುವುದಿಲ್ಲ. ಎಲ್ಲರೂ ಒಂದಾಗಿ ದೇವರ ದರ್ಶನ ಮಾಡಿ ಜೊತೆಯಾಗಿ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಈ ಅಗ್ನಿಕೇಳಿಯಲ್ಲಿ ಭಾಗವಹಿಸುವವರು ಎಂಟು ದಿನಗಳ ಶಾಖಾಹಾರಿಯಾಗಿರಬೇಕು. ಒಪ್ಪೊತ್ತಿನ ಊಟ ಮಾಡಿ ವ್ರತಾಚರಣೆಯನ್ನು ಮಾಡಬೇಕು. ದೀವಿಟಿಗೆಯನ್ನು ತಾವೇ ಮನೆಯಿಂದ ತರಬೇಕು ಎಂಬ ನಿಯಮಗಳೂ ಇವೆ. ಈ ಬೆಂಕಿ ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಆದರೆ, ಇದುವರೆಗೆ ಯಾರಿಗೂ ಏನೂ ಆಗದಿರುವುದಕ್ಕೆ ಇಲ್ಲಿನ ದೇವಿಯ ಮಹಿಮೆಯೇ ಕಾರಣ ಎಂಬುದು ಎಲ್ಲರ ನಂಬಿಕೆ. ಈ ಆಟದಲ್ಲಿ ಭಾಗವಹಿಸಲೆಂದೇ ದೂರದ ಊರಿನಲ್ಲಿರುವ ಗ್ರಾಮದ ಜನರು ಬಂದು ಸೇರುವುದು ಇಲ್ಲಿನ ಇನ್ನೊಂದು ವಿಶೇಷ.
ಒಟ್ಟಿನಲ್ಲಿ ಕೋಟ್ಯಾಂತರ ಭಕ್ತರ ಹೃದಯ ಮಂದಿರದಲ್ಲಿ ನೆಲೆಯೂರಿರುವ ಕಟೀಲು ದುರ್ಗಾಪರಮೇಶ್ವರಿಯ ಜಾತ್ರಾ ಸಂಭ್ರಮ ಅತೀ ವಿಶೇಷತೆಗಳೊಂದಿಗೆ ತೆರೆ ಕಂಡಿದೆ. ಎರಡು ವರ್ಷ ಕೊರೊನಾ ಕಾರಣದಿಂದ ಜಾತ್ರಾ ಸಂಭ್ರಮವಿಲ್ಲದೇ ನಿರಾಸೆಗೊಂಡಿದ್ದ ಭಕ್ತ ಜನರು ಈ ಬಾರಿ ಭ್ರಮರಾಂಭಿಕೆ ಜಾತ್ರಾ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ.
Dakshina Kannada,Karnataka
April 21, 2025 5:42 PM IST