Last Updated:
ಯುಎಇ ಎಕ್ಸ್ಚೇಂಜ್ ಸಂಸ್ಥೆಯ ನಿರ್ದೇಶಕರಾಗಿದ್ದ ಸುಧೀರ್ ಕುಮಾರ್ ತಾವೇ ಆರಂಭಿಸಿದ ನಿಯಮದಂತೆ 60 ವರ್ಷದ ಬಳಿಕ ತನ್ನ ಕಂಪನಿಯಿಂದ ಸ್ವಯಂ ನಿವೃತ್ತಿ ಹೊಂದಿದ್ದಾರೆ. ವಿದೇಶದಲ್ಲೇ ಕೂತು ತಿನ್ನಬಹುದಾದಷ್ಟು ಸಂಪಾದಿಸಿದ್ದರೂ, ತಾಯ್ನಾಡಿಗಾಗಿ ಏನಾದರೂ ಮಾಡಬೇಕು ಎನ್ನುವ ಯೋಚನೆಯಲ್ಲಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ.
ಕಾಸರಗೋಡು: ಕೃಷಿ ಕೆಲಸವನ್ನು (Agriculture) ಬಿಟ್ಟು ಮಹಾನಗರಗಳಿಗೋ (Metro Cities), ವಿದೇಶಕ್ಕೆ ಹಾರಿ ಉದ್ಯೋಗಿಗಳೋ (Jobs), ಉದ್ಯೋಗದಾತರೋ ಆಗಿರುವ ಬಹಳಷ್ಟು ಮಂದಿ ದೇಶದಲ್ಲಿದ್ದಾರೆ. ಜೀವನ ಪೂರ್ತಿ ಸಂಪಾದನೆಯಲ್ಲಿ ತೊಡಗಿಕೊಂಡ ಬಳಿಕ ವಿದೇಶಗಳಲ್ಲೇ ಆರಾಮದಾಯಕ ಬದುಕು ಸಾಗಿಸುತ್ತಿರುವವರ ಮಧ್ಯೆ ಇಲ್ಲೊಬ್ಬರು ಡಿಫರೆಂಟ್ ಅನಿವಾಸಿ ಭಾರತೀಯರಿದ್ದಾರೆ (Non-Resident Indian). ಕೈ ತುಂಬಾ ಸಂಪಾದಿಸಿದ ಹಣದಲ್ಲಿ ಒಂದು ಪಾಲನ್ನು ಕೃಷಿ ಚಟುವಟಿಕೆಗಳಿಗೂ ಖರ್ಚು ಮಾಡುತ್ತಿರುವ ಇವರು, ಇಂದು ಬರಡು ಭೂಮಿಯಲ್ಲಿ (Land) ವಿವಿಧ ರೀತಿಯ ಕೃಷಿ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ.
ಇವರು ಕೇರಳದ ಕಾಸರಗೋಡು ಜಿಲ್ಲೆಯ ಯೆಣ್ಮಕಜೆ ಗ್ರಾಮದ ನಿವಾಸಿ ಸುಧೀರ್ ಕುಮಾರ್ ಶೆಟ್ಟಿ. ದುಬೈಯಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸಲು ಊರು ಬಿಟ್ಟು ವಿದೇಶ ಸೇರಿದ್ದ ಇವರು, ಇದೀಗ ಮತ್ತೆ ನಾಡಿನತ್ತ ಮರಳಿದ್ದಾರೆ. ಯುಎಇ ಎಕ್ಸ್ಚೇಂಜ್ ಸಂಸ್ಥೆಯ ನಿರ್ದೇಶಕರಾಗಿದ್ದ ಸುಧೀರ್ ಕುಮಾರ್ ತಾವೇ ಆರಂಭಿಸಿದ ನಿಯಮದಂತೆ 60 ವರ್ಷದ ಬಳಿಕ ತನ್ನ ಕಂಪನಿಯಿಂದ ಸ್ವಯಂ ನಿವೃತ್ತಿ ಹೊಂದಿದ್ದಾರೆ. ವಿದೇಶದಲ್ಲೇ ಕೂತು ತಿನ್ನಬಹುದಾದಷ್ಟು ಸಂಪಾದಿಸಿದ್ದರೂ, ತಾಯ್ನಾಡಿಗಾಗಿ ಏನಾದರೂ ಮಾಡಬೇಕು ಎನ್ನುವ ಯೋಚನೆಯಲ್ಲಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ.
ಬರಡು ಭೂಮಿಯಂತಿದ್ದ ಜಾಗದಲ್ಲಿ ತೆಂಗು, ಹಲಸು, ಮಾವು ಸೇರಿದಂತೆ ಹಲವು ಹಣ್ಣುಗಳ ಕೃಷಿಯನ್ನು ಆರಂಭಿಸಿರುವ ಇವರ ಪ್ರಯತ್ನ ಇದೀಗ ಸಫಲವಾಗುವ ಹಂತಕ್ಕೆ ತಲುಪಿದೆ. ವಾಣಿಜ್ಯ ಉದ್ಧೇಶ ಬದಲು ತಮಗಾಗಿ ತಾವು ಏನಾದರೂ ಬೆಳೆಯಬೇಕು ಎಂದು ಆರಂಭಿಸಿರುವ ಈ ಕೃಷಿಭೂಮಿಯಲ್ಲಿ ಬೆಳೆದ ಬೆಳೆಗಳನ್ನು ತಮಗೆ ಮತ್ತು ತಮ್ಮವರಲ್ಲಿ ಹಂಚುತ್ತಿದ್ದಾರೆ. ಕೃಷಿತೋಟದಲ್ಲಿ ಪ್ರಾಣಿ ಪಕ್ಷಿಗಳು ತಿಂದು ಉಳಿಸಿದ ಬೆಳೆಗಳನ್ನು ಬಳಸುತ್ತಿರುವ ಇವರು ಪರೋಪಕಾರಿ ಕೃಷಿಯಲ್ಲಿ ತನ್ಙನ್ನು ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Chikkamagaluru: ಮಲೆನಾಡಲ್ಲಿ ನಡೆಯಿತು ಅದ್ದೂರಿ ಕೊರಗಜ್ಜನ ಕೋಲ- ಕಳಸದ ಬಾಳೆಹೊಳೆಯಲ್ಲಿ ಕೊರಗಜ್ಜನ ಪ್ರತಿಷ್ಠಾಪನೆ!
ಸುಮಾರು 6 ಎಕರೆ ಭೂಮಿಯಲ್ಲಿ ತೆಂಗು, ಹಲಸು, ರಂಬೂಟಾನ್, ಡ್ಯಾಗನ್ ಫ್ರುಟ್, ಮಾವು, ಪೇರಳೆ, ಸಪೋಟ, ಅವಕಾಡೊ ಸೇರಿದಂತೆ ಹಲವು ವಿಧದ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ತಾವು ಮಾತ್ರವಲ್ಲದೆ ಊರಿನ ಜನರೆಲ್ಲಾ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎನ್ನುವ ಉದ್ಧೇಶವೂ ಇದೆ. ಕೃಷಿ ಮಾಡಿ ಮೂರು ವರ್ಷವಾಗುತ್ತಿದ್ದು, ಉತ್ತಮ ಫಸಲೂ ಬಂದಿದೆ ಎನ್ನುವ ಖುಷಿ ಸುಧೀರ್ ಅವರಲ್ಲಿದೆ. ಈ ಕಾರಣಕ್ಕೆ ಊರಿನಲ್ಲಿರುವ ಸಣ್ಣ ಪುಟ್ಟ ಕೃಷಿಕರನ್ನೆಲ್ಲಾ ಸೇರಿಸಿಕೊಂಡು, ಅವರವರ ಜಮೀನುಗಳಲ್ಲಿ ಕೃಷಿ ಮಾಡುವ ಮೂಲಕ ಕೃಷಿ ಆಂದೋಲನವನ್ನು ನಡೆಸಲೂ ಇವರು ತೀರ್ಮಾನಿಸಿದ್ದಾರೆ. ಎಲ್ಲರೂ ತಮ್ಮ ತಮ್ಮಲ್ಲಿರುವ ಸಣ್ಣಪುಟ್ಟ ಜಮೀನಿನಲ್ಲಿ ಏನಾದರೂ ಬೆಳೆದು ಲಾಭಗಳಿಸಬೇಕು ಎನ್ನುವ ಉದ್ಧೇಶ ಇವರದಾಗಿದೆ.
ಕೃಷಿ ನೋಡಿಕೊಳ್ಳಲೆಂದು ವಿದೇಶದಿಂದ ತವರಿಗೆ ಹಾರಿ ಬರುವ ಸುಧೀರ್ ಕುಮಾರ್ ಇತರನ್ನೂ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ.
Dakshina Kannada,Karnataka
March 09, 2025 1:31 PM IST